ನದಿ ಜೋಡಣೆ ಯೋಜನೆ ವಿರೋಧಿಸಿ ಹೋರಾಟಕ್ಕೆ ಸನ್ನದ್ಧ: ರವೀಂದ್ರ ನಾಯ್ಕ

KannadaprabhaNewsNetwork |  
Published : May 31, 2026, 02:45 AM IST
ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿ ಜರುಗಿದ ಸಭೆಯಲ್ಲಿ ರವೀಂದ್ರ ನಾಯ್ಕ ಮಾತನಾಡಿದರು. | Kannada Prabha

ಸಾರಾಂಶ

ಜನ ಮತ್ತು ಪರಿಸರ ವಿರೋಧಿ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ವಿರೋಧಿಸಿ ನಿರಂತರವಾದ ಸಾಂಘಿಕ ಮತ್ತು ಕಾನೂನು ಹೋರಾಟಕ್ಕೆ ಹೋರಾಟಗಾರರ ವೇದಿಕೆಯು ಸನ್ನದ್ಧವಾಗಿದೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಜನ ಮತ್ತು ಪರಿಸರ ವಿರೋಧಿ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ವಿರೋಧಿಸಿ ನಿರಂತರವಾದ ಸಾಂಘಿಕ ಮತ್ತು ಕಾನೂನು ಹೋರಾಟಕ್ಕೆ ಹೋರಾಟಗಾರರ ವೇದಿಕೆಯು ಸನ್ನದ್ಧವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ತಾಲೂಕಿನ ಕ್ಯಾದಗಿ ಗ್ರಾಪಂ ವ್ಯಾಪ್ತಿಯ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಅಘನಾಶಿನಿ ನದಿ ಜೋಡಣೆ ವಿರೋಧ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಆಕ್ಷೇಪ ಪತ್ರದ ಸ್ವೀಕೃತಿ ಪ್ರತಿ ಮತ್ತು ಯುನಿಸ್ಕೋ ವಿಶ್ವ ಸಂಸ್ಥೆಯಿಂದ ಹೋರಾಟಗಾರರ ವೇದಿಕೆಗೆ ಬಂದಿರುವ ಉತ್ತರದ ಪ್ರತಿ ವಿತರಿಸಿ ಮಾತನಾಡಿದರು.

ಸಾರ್ವತ್ರಿಕವಾಗಿ ಅಘನಾಶಿನಿ ನದಿ ಜೋಡಣೆ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ದಾಖಲೆಯ ೨೦ ಸಾವಿರಕ್ಕೂ ಮಿಕ್ಕಿ ಆಕ್ಷೇಪ ಪತ್ರ ಉಚಿತವಾಗಿ ದಾಖಲಿಸಿರುವುದು ಮಹತ್ವ ಪೂರ್ಣ ಹೋರಾಟದ ಹೆಜ್ಜೆಯಾಗಿದೆ. ಅಲ್ಲದೇ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನದಿ ಜೋಡಣೆ ವಿರೋಧಿ ಹೋರಾಟ ವೇದಿಕೆ ವಿತರಿಸಿದಂತೆ ಆಕ್ಷೇಪ ಪತ್ರವನ್ನು ಹೋರಾಟಗಾರರ ವೇದಿಕೆಯು ಉಚಿತವಾಗಿ ಮುದ್ರಿಸಿ, ಸ್ವೀಕೃತಿ ಪ್ರತಿ ವಿತರಿಸಲಾಗಿದೆ ಎಂದರು.

ಕೆ.ಟಿ. ನಾಯ್ಕ ಹೆಗ್ಗೇರಿ, ರಾಜು ನಾಯ್ಕ ಕಿರೇಕೊಡ, ಶ್ರೀಧರ್ ಹೆಗಡೆ ಕೆರೆಮನೆ, ಆರ್ .ಆರ್ . ಹೆಗಡೆ ಐನಕೈ, ರಾಮಕೃಷ್ಣ ನಾಯ್ಕ ಶಿರೂರು ಸಭೆಯಲ್ಲಿ ಮಾತನಾಡಿದರು. ಚಂದ್ರಕಾಂತ ಆರ್. ನಾಯ್ಕ ಹೆಗ್ಗೇರಿ, ಆರ್.ಟಿ. ನಾಯ್ಕ ಅರಳಿಮಕ್ಕಿ, ಕೆ.ಡಿ. ರಾಮಪ್ಪ ಕೊಂಡ್ಲಿ, ಮಾರುತಿ ಬಿಳ್ಳುಮನೆ, ಶ್ರೀನಿವಾಸ ಕಲ್ಲಾಳ , ಪ್ರಕಾಶ ಜಿ. ನಾಯ್ಕ ಕ್ಯಾದಗಿ, ಶ್ರೀಪಾದ ನಾಯ್ಕ ಶಿರೂರು, ಸಂತೋಷ ವಿ. ನಾಯ್ಕ ಕ್ಯಾದಗಿ, ರವೀಂದ್ರ ಭಟ್ಟ ಕಲ್ಲಾಳ, ರಾಘವೇಂದ್ರ ಬಿಳ್ಳುಮನೆ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.

ದಿವಾಕರ್ ನಾಯ್ಕ ಸ್ವಾಗತಿಸಿದರು. ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಪ್ರಾಸ್ತಾವಿಕ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯಲ್ಲಿ ಜಾರಿಯಾಗದ ಹೊಸ ಅಬಕಾರಿ ನೀತಿ
ಜೀವರಕ್ಷಕ, ಪ್ರವಾಸಿ ಮಿತ್ರ ಸಿಬ್ಬಂದಿಗೆ ಸನ್ಮಾನ