ಲಯನ್ಸ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ
ನಮ್ಮ ದುಡಿಮೆಯ ಕೆಲಭಾಗವನ್ನು ಸಮಾಜಸೇವೆಗಾಗಿ ವಿನಿಯೋಗಿಸಬೇಕು. ಜವಾಬ್ದಾರಿಯುತ ಸ್ಥಾನಗಳ ಮಹತ್ವ ಅರಿತು ಸಮಾಜದ ಋಣ ತೀರಿಸಲು ಮುಂದಾಗಬೇಕು ಎಂದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ರವಿ ಹೆಗಡೆ ಹೂವಿನಮನೆ ಹೇಳಿದರು.
ಸ್ಥಳೀಯ ಬಾಲಭವನದಲ್ಲಿ ೨೦೨೬-೨೭ನೇ ಸಾಲಿನ ಲಯನ್ಸ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.ನಿವೃತ್ತ ಪ್ರಾಚಾರ್ಯ ಗಿರೀಶ ಕುಚ್ಚಿನಾಡ್ ಮಾತನಾಡಿ, ಸಮಾಜದಲ್ಲಿ ಅನೇಕರು ಅಶಕ್ತರಿದ್ದಾರೆ. ಅವರಿಗೆ ಆರೋಗ್ಯ, ಶಿಕ್ಷಣ, ಕಣ್ಣಿನ ಶಸ್ತ್ರಚಿಕಿತ್ಸೆ ಅಲ್ಲದೇ ಇತರ ಕಾರ್ಯದೊಂದಿಗೆ ಲಯನ್ಸ್ ಸಂಸ್ಥೆ ಶಾಶ್ವತವಾಗಿ ತನ್ನ ಸೇವಾ ಕಾರ್ಯಕೈಗೊಳ್ಳುತ್ತಿದೆ. ಜಗತ್ತಿನ ೧೫ ಲಕ್ಷದಷ್ಟು ಸದಸ್ಯರು ತಮ್ಮಿಂದಾದ ಸೇವೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದರು.
ನಿವೃತ್ತ ಉಪನಿರ್ದೇಶಕ (ಅಭಿಯೋಜನಾ ಇಲಾಖೆ) ವಿ.ಬಿ.ನಾಯ್ಕ ಹೊಸೂರು, ಶಿರಸಿ ಲಯನ್ಸ್ ಕ್ಲಬ್ನ ಮಾಜಿ ಪ್ರಾದೇಶಿಕ ಅಧ್ಯಕ್ಷ ಅಶೋಕ ಹೆಗಡೆ ಕುಮಟಾ, ಲಯನ್ಸ್ ಕ್ಲಬ್ಬಿನ ವಲಯ ಅಧ್ಯಕ್ಷೆ ಮಂಗಲಾ ನಾಯಕ ಅಭಿನಂದನಾ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ವಕೀಲ ಎಂ.ಆರ್. ಪಾಟೀಲ ಹೊಸೂರು, ಕಾರ್ಯದರ್ಶಿಯಾಗಿ ಇಂದುಧರ ಪಾಟೀಲ, ಕೋಶಾಧ್ಯಕ್ಷರಾಗಿ ಶ್ಯಾಮ್ ಮಲ್ಲಪಳ್ಳಿರವರು ಅಧಿಕಾರ ಸ್ವೀಕರಿಸಿದರು. ಅರ್ಚನಾ ಹೆಗಡೆ ಪ್ರಾರ್ಥಿಸಿದರು. ರಾಘವೇಂದ್ರ ಭಟ್ಟ ಸ್ವಸ್ತಿಕ್ ಸ್ವಾಗತಿಸಿದರು. ಕಾರ್ಯದರ್ಶಿ ಆಕಾಶ ಹೆಗಡೆ ಧ್ವಜವಂದನೆ ನೆರವೇರಿಸಿದರು. ಸಿ.ಎಸ್.ಗೌಡರ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜನೆಯನ್ನು ಸತೀಶ ಗೌಡರ್ ನಿರ್ವಹಿಸಿದರು. ಇಂದುಧರ ಪಾಟೀಲ ವಂದಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು.