ಬ್ಯಾಡಗಿ: ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಕ್ಕೆ ತಕ್ಕಂತೆ ನಾವೆಲ್ಲರೂ ಹೊಂದಿಕೊಳ್ಳಬೇಕಾಗಿದೆ. ಅದರಲ್ಲೂ ಕೃಷಿಕ್ಷೇತ್ರವನ್ನು ಇನ್ನಷ್ಟು ಚುರುಕುಗೊಳಿಸಬೇಕಾಗಿದ್ದು, ಅದಕ್ಕೆ ಪೂರಕವಾಗಿ ಹೆಸ್ಕಾಂನ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ದುರಪಯೋಗವಾಗದಿರಲಿ: ಸರ್ಕಾರ ಹೆಸ್ಕಾಂ ಇಲಾಖೆಯ ಸಮಸ್ಯೆಗಳನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ವಾಹನವನ್ನು ಮಂಜೂರಾತಿ ನೀಡಿದ್ದು ಯಾವುದೇ ಕಾರಣಕ್ಕೂ ಇದರ ದುರುಪಯೋಗವಾಗದಿರಲಿ, ಇಲ್ಲಿಯೂ ರೈತರಿಂದ ಹಣ ಪಡೆದುಕೊಳ್ಳುವುದಾಗಲಿ ಅಥವಾ ಇನ್ನಿತರ ಉದ್ದೇಶಗಳಿಗೆ ಸದರಿ ವಾಹನ ಬಳಕೆ ಮಾಡದಂತೆ ಸರ್ಕಾರದ ಮೂಲ ಉದ್ದೇಶಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಇಲಾಖೆಯಿಂದ ಅಧಿಕಾರಿಗಳಿಂದ ನಿರೀಕ್ಷಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ ಸೇರಿದಂತೆ ಹೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಮಂಜುನಾಥ ಹಂಜಗಿ, ಮಾಲತೇಶ ಆಡಿನವರ, ಹೈದರಲಿ ಬೆಂಗಳೂರಿ, ಮಾಲತೇಶ ಶಿಡ್ಲಣ್ಣವರ, ಹೆಸ್ಕಾಂ ಎಇಇ ರಾಜು ಅರಳಿಕಟ್ಟಿ, ಮಾಲತೇಶ ಹುಣಸೀಮರದ, ಮಾಲತೇಶ ಕುರುಬಗೊಂಡ ಸೇರಿದಂತೆ ಇನ್ನಿತರರಿದ್ದರು.