ರೆಡ್ಡಿ ಸಮಾಜದ ಹಾಸ್ಟೆಲ್‌ ನಿರ್ಮಾಣಕ್ಕೆ ಶೀಘ್ರ ಕ್ರಮ

KannadaprabhaNewsNetwork | Published : Jun 5, 2025 1:10 AM
ತಾಲೂಕಿನ ಸಮಸ್ತ ರೆಡ್ಡಿ ಸಮುದಾಯದ ವತಿಯಿಂದ ಪಟ್ಟಣದ ಪಟ್ಟಣದ ನಂದಿನಿ ಕ್ಷೀರ ಭವನದ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ತಾಲೂಕಿನ ಬೆಳ್ಳಿಬಟ್ಟಲು ಚಂದ್ರಶೇಖರರೆಡ್ಡಿ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಸಮಸ್ತ ರೆಡ್ಡಿ ಸಮುದಾಯದ ವತಿಯಿಂದ ಪಟ್ಟಣದ ಪಟ್ಟಣದ ನಂದಿನಿ ಕ್ಷೀರ ಭವನದ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ತಾಲೂಕಿನ ಬೆಳ್ಳಿಬಟ್ಟಲು ಚಂದ್ರಶೇಖರರೆಡ್ಡಿ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಬಳಿಕ ತುಮುಲ್ ನಿರ್ದೇಶಕ ಚಂದ್ರಶೇಖರರೆಡ್ಡಿ ಅವರು ಮಾತನಾಡಿ, ನಾನು ರೈತ ಕುಟುಂಬದಿಂದ ಬಂದಿರುವಂತಹ ವ್ಯಕ್ತಿ, ರೈತರ ಸೇವೆ ಮಾಡುವುದು ನನ್ನ ಧ್ಯೇಯವಾಗಿದೆ. ಕಳೆದ 20 ವರ್ಷಗಳಿಂದ ಬೆಳ್ಳಿ ಬಟ್ಟಲು ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಜೊತೆಗೆ ಅನೇಕ ಅಭಿವೃದ್ಧಿಗಳನ್ನು ಸಹ ಮಾಡಿದ್ದೇನೆ. ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಪಾವಗಡದ ನಿರ್ದೇಶಕರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ತುಮುಲ್‌ ಅಧ್ಯಕ್ಷ ಹಾಗೂ ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಚುನಾವಣೆಯಲ್ಲಿ ಬೆಂಬಲಿಸಿ ಮತ ನೀಡಿದ ಎಲ್ಲಾ ಡೈರಿಯ ಡೆಲಿಗೇಟ್ಸ್‌ಗಳಿಗೆ ಆಭಾರಿಯಾಗಿದ್ದೇನೆ. ಎಲ್ಲಾ ಜಾತಿ ಜನಾಂಗದವರನ್ನು ಸಮಾನತೆಯಿಂದ ಕಾಣುವ ಮೂಲಕ ರೆಡ್ಡಿ ಸಮುದಾಯದ ಮಕ್ಕಳ ವಿದ್ಯಾಭ್ಯಾಸ ಹಾಗೂ ಶೈಕ್ಷಣಿಕ ಪ್ರಗತಿಗೆ ವಿಶೇಷ ಒತ್ತು ನೀಡಲಿರುವುದಾಗಿ ಹೇಳಿದರು.

ತುಮುಲ್‌ ಅಧ್ಯಕ್ಷ ಎಚ್ ವಿವಿ ಅವರ ಸಹಕಾರದ ಮೇರೆಗೆ ತಾಲೂಕಿನ ಎಲ್ಲಾ ಡೈರಿಗಳ ಪ್ರಗತಿ ಹಾಗೂ ರೆಡ್ಡಿ ಸಮಾಜದ ಪ್ರಗತಿಗೆ ಹೆಚ್ಚು ಅದ್ಯತೆ ನೀಡಲಿದ್ದು ಸಮಾಜದ ವಿದ್ಯಾರ್ಥಿಗಳ ಪ್ರಗತಿಗೆ ಬಾಲಕ, ಬಾಲಕಿಯರ ಸುಸಜ್ಜಿತ ಹಾಸ್ಟೆಲ್‌ ನಿರ್ಮಾಣಕ್ಕೆ ಮುಖಂಡ ಪುರುಷೋತ್ತಮರೆಡ್ಡಿ ಸಹಕಾರದ ಮೇರೆಗೆ ಪಟ್ಟಣದಲ್ಲಿ ಎರಡು ನಿವೇಶನವನ್ನು ಈಗಾಗಲೇ ಗುರ್ತಿಸಲಾಗಿದೆ. ಈ ಸಂಬಂಧ ಸಚಿವ ರಾಮಲಿಂಗರೆಡ್ಡಿ ಅವರು 25ಲಕ್ಷ ಹಾಗೂ ಸಮಾಜದ ಹಿರಿಯ ಮುಖಂಡರಾದ ಕುಪೇಂದ್ರರೆಡ್ಡಿ 10ಲಕ್ಷ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. ರೆಡ್ಡಿ ಸಮಾಜದ ಸಹಕಾರದ ಮೇರೆಗೆ ಹಣ ಸಂಗ್ರಹಿಸಿ ಕೊಡಲೇ ಸುಸಜ್ಜಿತ ಹಾಸ್ಟೆಲ್‌ ನಿರ್ಮಾಣಕ್ಕೆ ಅಡಿಪಾಯ ಹಾಕಲು ಸಿದ್ದತೆ ಕೈಗೊಂಡಿರುವುದಾಗಿ ಅವರು ಹೇಳಿದರು.

ಪಾವಗಡ ಸೌಹಾರ್ದ ಕೋ ಅಪರೇಟಿವ್‌ ಬ್ಯಾಂಕ್‌ ಅಧ್ಯಕ್ಷರಾದ ಜಯರಾಮರೆಡ್ಡಿ ಮಾತನಾಡಿ, ತುಮುಲ್‌ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ. ಹೆಸರಾಂತ ಬೆಳ್ಳಿಬಟ್ಟಲು ಯಂಜಾರೆಡ್ಡಿ ಕುಟುಂಬದಿಂದ ಹಾಸ್ಟಲ್‌ ಅಥವಾ ಸಮುದಾಯ ಭವನ ಸೇರಿದಂತೆ ಯಾವುದಾದರೊಂದು ಉಚಿತ ಕಟ್ಟಡ ನಿರ್ಮಾಣಕ್ಕೆ ಸಹಕರಿಸುವ ಭರವಸೆ ವ್ಯಕ್ತಪಡಿಸಿದರು.

ಹಿರಿಯ ಮುಖಂಡರಾದ ಎ.ಶಂಕರರೆಡ್ಡಿ,ಮಧುಗಿರಿಯ ಗುತ್ತಿಗೆದಾರ ಜನಾರ್ಧನರೆಡ್ಡಿ, ರಾಮಲಿಂಗರೆಡ್ಡಿ, ವಿ.ಚಿಂತಲರೆಡ್ಡಿ ಇತರೆ ಮುಖಂಡರು ತುಮುಲ್‌ ನಿರ್ದೇಶಕರ ಪ್ರಾಮಾಣಿಕತೆ ಹಾಗೂ ಜನಪರ ಕಾಳಜಿ ಕುರಿತು ವಿವರಿಸಿದ್ದು ಸಮಾಜದ ಹಾಸ್ಟಲ್‌ ಕಟ್ಟಡ ನಿರ್ಮಾಣಕ್ಕೆ ಕೆ.ಎನ್‌.ರಾಮಕೃಷ್ಣರೆಡ್ಡಿ 1ಲಕ್ಷ ಹಾಗೂ ಲಿಂಗದಹಳ್ಳಿ ಸಣ್ಣರಾಮರೆಡ್ಡಿ 50ಸಾವಿರ ಸಹಾಯಸ್ತ ನೀಡುವುದಾಗಿ ಹೇಳಿದರು.

ರೈತ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿ,ತಾ,ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ, ದೈವದೀನಂರೆಡ್ಡಿ, ಬುಡ್ಡಾರೆಡ್ಡಿಹಳ್ಳಿಯ ರಾಮಲಿಂಗರೆಡ್ಡಿ, ಹೊಸಹಳ್ಳಿ ಡಾ.ವಸಂತರೆಡ್ಡಿ ಮಾತನಾಡಿದರು.

ಲಂಡನ್ ಪ್ರಭಾಕರ್ ರೆಡ್ಡಿ, ಸಂಗೀತ ನಾಗರ್ಜುನರೆಡ್ಡಿ, ಜಯಶಂಕರರೆಡ್ಡಿ,ಸಿಂಗರೆಡ್ಡಿಹಳ್ಳಿ ಈರಣ್ಷ, ನಾಗೇಂದ್ರರೆಡ್ಡಿ, ಲಿಂಗದಹಳ್ಳಿ ಶ್ರೀರಾಮರೆಡ್ಡಿ, ಶ್ರೀನಿವಾಸರೆಡ್ಡಿ, ಈರಪ್ಪರೆಡ್ಡಿ, ವೇಣುಗೋಪಾಲರೆಡ್ಡಿ, ಪೆನ್ನೊಬನಹಳ್ಳಿ ಗಂಗಾರೆಡ್ಡಿ, ರಾಮಾಂಜಿನರೆಡ್ಡಿ, ಕುರಲಪಲ್ಲಿ ಅಂಜನರೆಡ್ಡಿ, ಬ್ರಹ್ಮನಂದರೆಡ್ಡಿ,ವಳ್ಳೂರು ಮಂಜುನಾಥ್ ರೆಡ್ಡಿ, ಶ್ರವನ್ ಕುಮಾರ್ ರೆಡ್ಡಿ,ಹಾಗೂ ಇತರೆ 300ಕ್ಕೂ ಹೆಚ್ಚು ಮಂದಿ ತಾಲೂಕಿನ ರೆಡ್ಡಿ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.