ವಿವಿಧ ವ್ಯಾಪಾರ ವಹಿವಾಟಿನ ಸ್ಥಳಗಳಲ್ಲಿನ ಪರಿಶೀಲನೆ ವೇಳೆ ಮಾಹಿತಿ
ಸರಕಾರದ ನಿಯಮಾವಳಿಗಳ ಪ್ರಕಾರ ತಾಲೂಕಿನ ಎಲ್ಲ ವಾಣಿಜ್ಯ ವ್ಯವಹಾರದ ಅಂಗಡಿಗಳು, ಮತ್ತಿತರ ಉದ್ಯಮಗಳನ್ನು ನಡೆಸುವವರು ಕಾರ್ಮಿಕ ಇಲಾಖೆಯಲ್ಲಿ ಕಡ್ಡಾಯ ನೋಂದಣಿ ಮಾಡಿಸಲೇ ಬೇಕೆಂದು ಕಾರ್ಮಿಕ ಇಲಾಖೆ ವಿಸ್ತರಣಾಧಿಕಾರಿ ವೈ.ಎಂ.ಶಶಿಕಲಾ ತಿಳಿಸಿದರು.
ವ್ಯಾಪಾರ, ಉದ್ಯಮಗಳ ನೋಂದಣಿ ಕುರಿತು ಇಲಾಖೆ ಸಿಬ್ಬಂದಿಗಳೊಂದಿಗೆ ಪಟ್ಟಣದ ವಿವಿಧ ವ್ಯಾಪಾರ ವಹಿವಾಟಿನ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶ ಸೇರಿದಂತೆ ತಾಲೂಕಿನಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ದಿನಸಿ ಅಂಗಡಿಗಳು, ವಿವಿಧ ಕಾರ್ಖಾನೆಗಳು, ಹೋಟೆಲ್, ಬಾರ್, ಆಭರಣ ಅಂಗಡಿ ಮತ್ತಿತರ ಘಟಕಗಳು ಕಾರ್ಮಿಕ ಇಲಾಖೆಯಲ್ಲಿ ನೋಂದಣಿಗೆ ಮುಂದಾಗುತ್ತಿಲ್ಲ. ಸ್ವತಃ ನಾವುಗಳೇ ತಿಳಿ ಹೇಳಿದರೂ ನೋಂದಣಿಗೆ ಆಸಕ್ತಿ ತೋರಿಸುತ್ತಿಲ್ಲ. ಇದುವರೆಗೆ ಶೇ 10 ರಷ್ಟು ಮಾತ್ರ ನೋಂದಣಿ ಆಗಿದೆ ಎಂದರು.ಈ ನೋಂದಣಿ ಪ್ರತಿ 5 ವರ್ಷಕ್ಕೊಮ್ಮೆ ನವೀಕರಿಸಬೇಕಿದ್ದರೂ ಅದನ್ನು ಮಾಡಿಸುತ್ತಿಲ್ಲ. ಪಟ್ಟಣ ಪ್ರದೇಶದಲ್ಲಿ ಪುರಸಭೆ ಮತ್ತು ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಪರವಾನಗಿ ತೆಗೆದುಕೊಂಡಿದ್ದು. ಕಾರ್ಮಿಕ ಇಲಾಖೆ ಪರವಾನಗಿ ಏಕೆ ಎನ್ನುತ್ತಾರೆ. ಆದರೆ ಸರ್ಕಾರದ ಮಾನದಂಡದಂತೆ ಯಾವುದೇ ವ್ಯಾಪಾರವಾದರೂ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಾರ್ಮಿಕ ಇಲಾಖೆ ನೋಂದಣಿ ಕಡ್ಡಾಯ ಎಂದರು.
ಇನ್ನು ಪಟ್ಟಣದಲ್ಲಿ 15 ಕಾರ್ಮಿಕ ಸಂಘಗಳ ಮೂಲಕ ನೋಂದಣಿ ನೇರವಾಗಿ ನಡೆಯುತ್ತಿದೆ. ನೋಂದಣಿಯಾದವರಲ್ಲಿ ಅಸಲಿ-ನಕಲಿ ನಾವು ಸ್ಥಳಕ್ಕೆ ಹೋಗಿ ಭೇಟಿ ನೀಡಿ ಪರಿಶೀಲಿಸಿದಾಗ ಮಾತ್ರ ಗೊತ್ತಾಗುತ್ತದೆ ಇದು ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದು, ನೈಜ ಕಾರ್ಮಿಕರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದರು.ಬಾಕ್ಸ್ ಸುದ್ದಿಗೆ-
ಕಡೂರು ಕಾರ್ಮಿಕ ಇಲಾಖೆಯಲ್ಲಿನ ನೋಂದಣಿಗೆ ಕಾರ್ಮಿಕ ಇಲಾಖೆ ಅಧಿಕಾರಿ ವೈ.ಎಂ. ಶಶಿಕಲಾ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು.