ಹಾವೇರಿ: ನಾಡಿನ ಹಿರಿಯ ಲೇಖಕ ಡಾ. ಗುರುಲಿಂಗ ಕಾಪಸೆ (೯೬) ಅವರು ಧಾರವಾಡದಲ್ಲಿ ನಿಧನರಾಗಿದ್ದು, ಜಿಲ್ಲೆಯ ಸಾಹಿತಿಗಳ ಬಳಗ ಕಂಬನಿ ಮಿಡಿದಿದೆ.
ವಿಶೇಷವೆಂದರೆ ಇಲ್ಲಿಯ ತಾರಾಪ್ಲಾಜಾದಲ್ಲಿ ಪ್ರಶಸ್ತಿ ಪುರಸ್ಕೃತರ ಕುರಿತು ವಿಚಾರ ಸಂಕಿರಣ ಮತ್ತು ಅಕಾಡೆಮಿಯ ಸರ್ವಸದಸ್ಯರ ಸಭೆ ಕೆ.ಇ.ಬಿ.ಯ ಸೊಸೈಟಿಯಲ್ಲಿ ಹಿಂದಿನ ದಿನ ಜರುಗಿತ್ತು. ಕಾಪಸೆ ಅವರು ತಮ್ಮ ಅವಧಿಯ ಮೊದಲ ಕಾರ್ಯಕ್ರಮವನ್ನು ''''''''ಕಾವ್ಯ ಕಟ್ಟುವ ಬಗೆ'''''''' ಎಂಬ ಕಾವ್ಯ ಕಮ್ಮಟವನ್ನು ಶರೀಫರ ಶಿಶುವಿನಾಳದಲ್ಲಿ ನಡೆಸಿದ್ದರು. ನಾಡಿನ ೩೦ಕ್ಕೂ ಹೆಚ್ಚು ಯುವ ಬರಹಗಾರರು ತರಬೇತಿ ಪಡೆದಿದ್ದರು. ಬಿ.ಎ. ಸನದಿ, ಡಾ. ಸುಮತೀಂದ್ರ ನಾಡಿಗ, ಜಯಂತ ಕಾಯ್ಕಿಣಿ, ಶ್ಯಾಮಸುಂದರ ಬಿದರಕುಂದಿ ಹಾಗೂ ಸತೀಶ ಕುಲಕಲರ್ಣಿ ಕಮ್ಮಟ ನಡೆಸಿದ್ದರು.
ಕರ್ನಾಟಕ ಸಾಹಿತ್ಯ ಆಕಾಡೆಮಿ, ವಾರಂಬಳ್ಳಿ ಪ್ರತಿಷ್ಠಾನ ಹಾಗೂ ಹಾವನೂರು ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಬರಗೂರು ರಾಮಚಂದ್ರಪ್ಪನವರ ಬದುಕು ಬರಹ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆದಾಗಲೂ ಡಾ. ಗುರುಲಿಂಗ ಕಾಪಸೆ ಮತ್ತು ವಿವೇಕ ರೈ ಹಾವೇರಿಗೆ ಬಂದಿದ್ದರು. ಬರಗೂರ ಅವರು ಲೇಖಕರೊಂದಿಗೆ ಸಂವಾದವನ್ನು ನಡೆಸಿದ್ದು ಅವಿಸ್ಮರಣೀಯ.ಖ್ಯಾತ ಲಲಿತ ಪ್ರಬಂಧಕಾರ ಹಾವೇರಿ ರಾ.ಕು. (ರಾಮಚಂದ್ರ ವೆಂಕಟೇಶ ಕುಲಕರ್ಣಿ) ಅವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಅವರ ಅನಾರೋಗ್ಯದ ಕಾರಣದಿಂದಾಗಿ ಇಲ್ಲಿಗೆ ಬಂದು (ಗೆಳೆಯರ ಬಳಗದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ) ಪ್ರಶಸ್ತಿ ಪ್ರದಾನ ೨೦೦೩ರಲ್ಲಿ ಮಾಡಿದ್ದರು. ಸಜ್ಜನಿಕೆಯ ಸ್ವರೂಪವಾಗಿದ್ದ ಕಾಪಸೆ ಗುರುಗಳು ನನ್ನಂತಹ ಅನೇಕ ಲೇಖಕರಿಗೆ ಕೈ ಹಿಡಿದು ಮುನ್ನಡಿಸಿದ ಸಹೃದಯಿ ದೊಡ್ಡ ಲೇಖಕ ಎಂದು ಸತೀಶ ಕುಲಕರ್ಣಿ ನೆನಪಿನ ಬುತ್ತಿ ತೆರೆದಿಟ್ಟಿದ್ದಾರೆ.