ಕನ್ನಡಪ್ರಭ ವಾರ್ತೆ ಕಿನ್ನಿಗೋಳಿ
ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಜರುಗಿದ ೫೦ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಹೊರ ದೇಶದಲ್ಲಿ ಧಾರ್ಮಿಕ ಕ್ಷೇತ್ರಗಳು ಮ್ಯೂಸಿಯಂನಂತಿದೆ, ಭಾರತದಲ್ಲಿ ದೈವಸ್ಥಾನ, ದೇವಸ್ಥಾನಕ್ಕೆ ವಿಶೇಷ ಮಹತ್ವವಿದೆ. ಶ್ರೀರಾಮ ನಮಗೆ ಆದರ್ಶವಾಗಿದ್ದಾನೆ, ಭಾರತೀಯರು ಕೂಡಿ ಬಾಳುವ ಆದರ್ಶವನ್ನು ಕಲಿತಿದ್ದಾರೆ. ಸೂರ್ಯ ಚಂದ್ರರಿರುವ ಕಾಲದ ತನಕ ಕಿನ್ನಿಗೋಳಿಯ ಗಣೇಶೋತ್ಸವ ನಿರಂತರ ನಡೆಯಲಿ ಎಂದರು.ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್ ಧಾರ್ಮಿಕ ಬಾಷಣ ಮಾಡಿದರು.
ಚಿತ್ತರಂಜನ್ ಭಂಡಾರಿ ಐಕಳ ಬಾವ, ಧನಂಜಯ ಶೆಟ್ಟಿಗಾರ್, ಸುಕುಮಾರ ಶೆಟ್ಟಿ ತಾಳಿಪಾಡಿಗುತ್ತು, ಸುಧಾಕರ ಶೆಟ್ಟಿ, ಸೋಮಶೇಖರ್, ದುರ್ಗಾಪ್ರಸಾದ್ ಹೆಗ್ಡೆ, ನರಸಿಂಹ ಪೈ, ಶೇಖರ ಸಾಲಿಯಾನ್, ಮೂಲ್ಕಿ ಪೋಲಿಸು ಅಧಿಕಾರಿ ಅನಿತಾ. ಸಮಿತಿಯ ಅಧ್ಯಕ್ಷ ಕುಶಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವನಾಥ ಐಕಳ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಭುವನಾಭಿರಾಮ ಉಡುಪ ಸ್ವಾಗತಿಸಿದರು. ಲಕ್ಷ್ಮಣ್ ಬಿ.ಬಿ. ಏಳಿಂಜೆ ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಕರ್ಕೇರ ವಂದಿಸಿದರು.