ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ ಮತ್ತು ವಕೀಲರ ಸಂಘದ ಸಹಯೋಗದೊಂದಿಗೆ ನಡೆದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಹೊರಗಿನವರ ದಬ್ಬಾಳಿಕೆ ಮತ್ತು ಆಳ್ವಿಕೆಯಿಂದಾಗಿ ನಮ್ಮಲ್ಲಿ ಇಂದು ಪರಸ್ಪರ ಆಂತರಿಕ ಕಲಹಗಳು ಹೆಚ್ಚಾಗುತ್ತಿವೆ. ವಿವಿಧತೆ ಮತ್ತು ಏಕತೆಯಿಂದ ರಚನೆಯಾಗಿರುವ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳದ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರಚೋದನಕಾರಿ ತಪ್ಪು ಸಂದೇಶಗಳಿಂದ ದಾರಿ ತಪ್ಪುವ ಹಂತಕ್ಕೆ ಬಂದು ನಿಂತಿದ್ದಾರೆ ಎಂದರು.ಸಂವಿಧಾನ ಕೇವಲ ಒಂದು ಜಾತಿ ಮತ್ತು ಜನರಿಗೆ ಮಾತ್ರ ಸೀಮಿತವಾಗಿದೆ ಎಂಬುದು ತಪ್ಪು ಕಲ್ಪನೆ. ಇಂತಹ ಪ್ರವೃತ್ತಿ ಜನರಿಂದ ತೊಲಗಬೇಕು. ಸಂವಿಧಾನ ರೂಪಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ಒಂದು ಜಾತಿ ಮತ್ತು ಜನಾಂಗಕ್ಕೆ ಸೀಮಿತವಾಗಿದ್ದಾರೆ ಎಂಬ ಭಾವನೆ ಇದೆ. ಇದನ್ನು ಬದಲಾವಣೆ ಮಾಡಿಕೊಂಡು ಅವರ ಸಾಧನೆಗಳಿಗೆ ಚುತಿ ತರುವಂತಹ ಕೆಲಸಗಳಾಗಬಾರದು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಇಲಾಖೆ ಗ್ರೇಟ್ 2 ತಹಸೀಲ್ದಾರ್ ಸೋಮಶೇಖರ್, ರಾಜಶಾಸ್ತ್ರ ವಿಭಾಗದ ಪ್ರೊ.ಅಂತೋನಿ ಮೇರಿ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ, ಕಾರ್ಯದರ್ಶಿ ಎಂ.ಜೆ.ಸುಮಂತ್ ಭಾಗವಹಿಸಿದ್ದರು.
ನಾಗಮಂಗಲ
ನಾಟಕದ ಸಾರಾಂಶ : ವಿಲಿಯಂ ಶೇಕ್ಸ್ ಪಿಯರ್ನ ಕೊನೆಯ ನಾಟಕ ದಿ ಟೆಂಪೆಸ್ಟ್ ನಾಟಕದ ಕನ್ನಡ ರೂಪಾರಂತರ. ಪಿತೂರಿಯಿಂದ ತನ್ನ ರಾಜ್ಯವನ್ನು ಕಳೆದುಕೊಂಡ ಮಿಲಾನ್ನ ಮಾಜಿ ಡ್ಯೂಕ್ ಪ್ರಾಸ್ಟೆರೋ ತನ್ನ ಮಾಂತ್ರಿಕ ಶಕ್ತಿ ಮೂಲಕ ರಾಜ್ಯವನ್ನು ವಾಪಸ್ ಪಡೆದು ಸೇಡಿಗೆ ಅವಕಾಶವಿದ್ದರೂ ಮಗಳ ಮಾತಿನಂತೆ ಎಲ್ಲರನ್ನು ಕ್ಷಮಿಸುವ ಚಿತ್ರಣವನ್ನು ಈ ನಾಟಕ ಕಟ್ಟಿಕೊಡುತ್ತದೆ.