ಶಿವಸಂಗಮೇಶ್ವರ ಶ್ರೀ ಅಗಲಿಕೆಯಿಂದ ಬಡವಾದ ಧಾರ್ಮಿಕ ಕ್ಷೇತ್ರ

KannadaprabhaNewsNetwork |  
Published : Jun 02, 2025, 12:30 AM IST
1ಕೆಕೆಆರ್1:ಕುಕನೂರು ತಾಲೂಕಿನ ಬೆದವಟ್ಟಿ ಹಿರೇಮಠದ ಲಿಂ,  ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಶ್ರೀ  ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿದರು. | Kannada Prabha

ಸಾರಾಂಶ

ದಾಸೋಹದಲ್ಲಿ ಬಂದ ಭಕ್ತರಿಗೆ ಹಲವಾರು ವರ್ಷಗಳ ಹಿಂದೇಯೇ ತುಪ್ಪದ ಊಟ ಮಾಡಿಸಿದ್ದರು

ಕುಕನೂರು: ಬಡವರ, ನೊಂದವರ ಮೊಗದಲ್ಲಿ ಲಿಂ.ಶಿವಸಂಗಮೇಶ್ವರ ಸ್ವಾಮೀಜಿ ಮಂದಹಾಸ ಮೂಡಿಸಿದ್ದಾರೆ ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ತಾಲೂಕಿನ ಬೆದವಟ್ಟಿ ಹಿರೇಮಠದ ಲಿಂ,ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನೂದ್ದೇಶಿಸಿ ಮಾತನಾಡಿದ ಅವರು, ಶಿವಸಂಗಮೇಶ್ವರ ಶ್ರೀ ಅರಿವಿನ ದೀಪ ಬೆಳಗಿಸಿದ್ದಾರೆ.ನಾಡಿನ ಅನೇಕ ಮಠ ಮಾನ್ಯಗಳ ಶ್ರೀಗಳಿಗೆ ದೀಕ್ಷೆ ಕೊಟ್ಟಿದ್ದಾರೆ. ಲಿಂಗಪೂಜೆ ಮೂಲಕ ಸಮಾನತೆ ಸಂದೇಶ ಸಾರಿದ ಶ್ರೇಷ್ಠ ಶರಣರಾಗಿದ್ದಾರೆ. ಭಕ್ತರನ್ನು ಭಕ್ತಿ ಮಾರ್ಗದಲ್ಲಿ ಕರದುಕೊಂಡು ಹೋಗಿ ಸಾಧನಾ ಮಾರ್ಗ ತೋರಿಸಿದ್ದಾರೆ ಎಂದರು.

ಎರಡುವರೆ ವರ್ಷದಿಂದ ಆರೋಗ್ಯದಲ್ಲಿ ತೊಂದರೆ ಆದ ಕಾರಣ ತೊಂದರೆ ಅನುಭವಿಸುವಂತ್ತಾಯಿತು. ಅವರು ತಮ್ಮ ಜೀವನವನ್ನು ಗಂಧದ ಕೊರಡಿನಂತೆ ತೆವೆದರು. ತಮ್ಮ ಆರೋಗ್ಯ ಸಹ ಲೆಕ್ಕಿಸದೆ ಭಕ್ತರ ಕಲ್ಯಾಣ ಕಾರ್ಯಕ್ಕೆ ಸದಾ ತೆರಳುತ್ತಿದ್ದರು. ಸಮಾಜಕ್ಕೆ ಸರ್ವಸ್ವ ಧಾರೆ ಎಳೆದಿದ್ದರು. ಹಿಂದಿನ ಹಲವು ವರ್ಷಗಳ ಹಿಂದೆ ಪಂಚಪೀಠಾಧಿಪತಿಗಳನ್ನು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕರೆಯಿಸಿದ್ದರು. ದಾಸೋಹದಲ್ಲಿ ಬಂದ ಭಕ್ತರಿಗೆ ಹಲವಾರು ವರ್ಷಗಳ ಹಿಂದೇಯೇ ತುಪ್ಪದ ಊಟ ಮಾಡಿಸಿದ್ದರು. ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಸ್ಥಳೀಯ ರಾಜಕಾರಣಿಗಳು ಸಹ ಲಿಂಗದೀಕ್ಷೆ ಕೊಟ್ಟು ಮಾರ್ಗದರ್ಶನ ಮಾಡಿ ಧರ್ಮ ಬೋಧನೆ ಸಹ ಬೆದವಟ್ಟಿ ಶ್ರೀಗಳು ಮಾಡಿದ್ದಾರೆ ಎಂದರು.

ಯಲಬುರ್ಗಾ ಹಿರೇಮಠದ ಶ್ರೀಸಿದ್ದರಾಮೇಶ್ವರ ಸ್ವಾಮೀಜಿ, ಕುಕನೂರಿನ ಅನ್ನದಾನಿಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ, ಮಂಗಳೂರು ಅರಳೆಲೆ ಮಠದ ಶ್ರೀಗಳು, ಚಳಗೇರಿ ಮಠದ ಶ್ರೀಗಳು ಸೇರಿದಂತೆ ಗಣ್ಯರು, ಪ್ರಮುಖರು, ಗ್ರಾಮಸ್ಥರು ಅಪಾರ ಭಕ್ತರಿದ್ದರು.

ಬೆಳಗ್ಗೆ ಶ್ರೀಗಳ ಗದ್ದುಗೆಗೆ ಶ್ರೀಶೈಲ ಜಗದ್ಗುರುಗಳಿಂದ ಪೂಜೆ ಸಲ್ಲಿತು. ಹೂವಿನಿಂದ ಗದ್ದುಗೆ ಅಲಂಕಾರ ಮಾಡಲಾಗಿತ್ತು. ಅಪಾರ ಪ್ರಮಾಣದ ಭಕ್ತರು ಆಗಮಿಸಿದ್ದರು. ಅನ್ನಸಂತರ್ಪಣೆ ಜರುಗಿತು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ