ಶೇಖರಗೌಡರ ಸಾಧನೆ ಇತರರಿಗೂ ಪ್ರೇರಣೆ

KannadaprabhaNewsNetwork |  
Published : Jun 02, 2025, 12:28 AM ISTUpdated : Jun 02, 2025, 12:29 AM IST
ಪೋಟೊ1ಕೆಎಸಟಿ1: ಕುಷ್ಟಗಿ ಪಟ್ಟಣದ ಪಿಸಿಹೆಚ್ ಪ್ಯಾಲೇಸಿನಲ್ಲಿ ಸಹಕಾರಿ ಧುರೀಣ ಶೇಖರಗೌಡ ಮಾಲಿಪಾಟೀಲ ಷಷ್ಟಿಪೂರ್ತಿ ಹಾಗೂ ಒಡನಾಡಿ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಯಾರಿಗೂ ಕೇಡನ್ನು ಬಯಸದ ಶೇಖರಗೌಡ ಶರಣರ ತತ್ವಗಳನ್ನು ಅಳವಡಿಸಿಕೊಂಡು ಬದುಕನ್ನು ಸಾಗಿಸಿದ್ದಾರೆ

ಕುಷ್ಟಗಿ: ಕೃಷಿ ಕುಟುಂಬದಲ್ಲಿ ಜನಿಸಿ ಸಹಕಾರ, ಸಾಹಿತ್ಯ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಶೇಖರಗೌಡ ಮಾಲಿಪಾಟೀಲ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಪಿಸಿಎಚ್ ಪ್ಯಾಲೇಸಿನಲ್ಲಿ ನಡೆದ ಕೊಪ್ಪಳ ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲರ ಷಷ್ಟಿಪೂರ್ತಿ ಹಾಗೂ ಒಡನಾಡಿ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಲಿಪಾಟೀಲರ ಷಷ್ಠಿ ಪೂರ್ತಿ ಯಶಸ್ವಿ ಆಗಿದೆ, ಇನ್ನೂ ಮುಂದಿನ ಜೀವನ ಉಜ್ವಲಗೊಳ್ಳಲಿ ಎಂದು ಹಾರೈಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ. ಯಾರಿಗೂ ಕೇಡನ್ನು ಬಯಸದ ಶೇಖರಗೌಡ ಶರಣರ ತತ್ವಗಳನ್ನು ಅಳವಡಿಸಿಕೊಂಡು ಬದುಕನ್ನು ಸಾಗಿಸಿದ್ದಾರೆ. ಶಿಕ್ಷಣ ರಾಜಕೀಯ ಸಾಹಿತ್ಯ ಸಹಕಾರ ಕೃಷಿ ಎಲ್ಲೆಡೆಯು ಸಾಧನೆ ಮಾಡಿದ್ದಾರೆ. ಎಲ್ಲರನ್ನು ಒಳಗೊಳ್ಳುವ ಗುಣ ಹೊಂದಿದ್ದಾರೆ ಅವರು ಮಾಡಿಕೊಟ್ಟ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪುಗಳು ಎಂದೆಂದಿಗೂ ಅಜರಾಮರ. ಇವರು ಒಂದು ಪಕ್ಷದಲ್ಲೂ ಗುರುತಿಸಿಕೊಂಡರು ಸಹಿತ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಎಲ್ಲಿಯೂ ಪಕ್ಷದ ಹೆಸರನ್ನು ಬಳಕೆ ಮಾಡಿಲ್ಲ ಇವರು ಉತ್ತಮ ನಾಯಕತ್ವ ಗುಣ ಉಳ್ಳವರು ಎಂದರು.

ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಮಾತನಾಡಿ, ಶೇಖರಗೌಡರ ಜತೆಯಲ್ಲಿ ಸುಮಾರು 20 ವರ್ಷಗಳ ಕಾಲ ಒಡನಾಡಿಯಾಗಿದ್ದು, ಇಬ್ಬರು ಒಟ್ಟಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಮಾಡಿದ್ದೇವೆ. 14 ಜಿಲ್ಲೆಗಳಲ್ಲಿ ಸಾಹಿತ್ಯ ಸಮ್ಮೇಳನ ಮಾಡಿದ್ದು ಹಸಿರು ಹೊನ್ನು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗಿತ್ತು ಎಂದರು.

ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ಶೇಖರಗೌಡ ಮಾಲಿಪಾಟೀಲರಿಗೆ ಉತ್ತಮ ಸಂಘಟನೆ ಶಕ್ತಿಯಿದ್ದ ಅವರ ಸಾಧನೆಗೆ ಕಾರಣಿಕರ್ತರಾದ ಜನರನ್ನು ಅವರು ಎಂದಿಗೂ ಮರೆಯಬಾರದು ಎಲ್ಲ ಜಿಲ್ಲೆಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ ಇನ್ನೂ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳು ಮಾಡಲಿ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಅನೇಕರು ಮಾತನಾಡಿದರು.

ಸಾನ್ನಿಧ್ಯವನ್ನು ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಕುಷ್ಟಗಿಯ ಕರಿಬಸವಶಿವಾಚಾರ್ಯರು ಸೇರಿದಂತೆ ಅನೇಕ ಶ್ರೀಗಳು ಇದ್ದರು.

ಈ ಸಂದರ್ಭದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ರೋಣ ಶಾಸಕ ಜಿ.ಎಸ್.ಪಾಟೀಲ, ಕಾಡಾ ನಿಗಮ ಅಧ್ಯಕ್ಷ ಹಸನಸಾಬ್‌ ದೋಟಿಹಾಳ, ವಿಪ ಸದಸ್ಯ ಶರಣಗೌಡ ಬಯ್ಯಾಪುರ, ಮಾಜಿ ಶಾಸಕ ಕೆ ಶರಣಪ್ಪ, ಬಸವರಾಜ ದಡೆಸಗೂರು, ವಿಶ್ವನಾಥ ಪಾಟೀಲ, ಶಿವಶಂಕರಗೌಡ ಕಡೂರು, ಎಚ್.ಮಾರಪ್ಪ, ಬಸವಂತರಾಯ ಕುರಿ, ಶ್ಯಾಮರಾವ್ ಕುಲಕರ್ಣಿ, ಮಾಲತಿ ನಾಯಕ, ವೆಂಕನಗೌಡ ಹಿರೇಗೌಡ್ರು, ನಿರುಪಾದಿ ಮಕಾಶಿ, ಮಿನಾಕ್ಷಿ ಎಚ್, ಅಮರೇಶ ಯಥಗಲ್, ಎಂ.ಡಿ. ಪೂಜಾರ ಸೇರಿದಂತೆ ಅನೇಕರು ಇದ್ದರು.

ಕಾರ್ಯಕ್ರಮದಲ್ಲಿ ಸೋಮಶೇಖರ್ ವೈಜಾಪುರ ಸ್ವಾಗತಿಸಿದರು, ಲಾಡ್ಲೆಮಷಾಕ ದೋಟಿಹಾಳ ಪ್ರಾಸ್ತಾವಿಕ ಮಾತನಾಡಿದರು, ಡಾ. ಜೀವನಸಾಬ್‌ ಬಿನ್ನಾಳ ಹಾಗೂ ನಟರಾಜ ಸೋನಾರ ಕಾರ್ಯಕ್ರಮ ನಿರ್ವಹಿಸಿದರು. ಅಭಿಮಾನಿಗಳು ಶೇಖರಗೌಡ ಮಾಲಿಪಾಟೀಲರಿಗೆ ಸನ್ಮಾನಿಸುವ ಮೂಲಕ ಅಭಿನಂದನೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!