ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪರಿಸರ ಸಮತೋಲನಕ್ಕೆ ಪೂರಕ:
ಕಾಳಿಂಗ ಸರ್ಪಗಳಲ್ಲಿ ನಾಲ್ಕು ಪ್ರಭೇದಗಳಿದ್ದು ಅವುಗಳ ಆಹಾರ ಪದ್ಧತಿ, ಜೀವನ ಶೈಲಿ, ಸಂತಾನೋತ್ಪತ್ತಿ, ಗೂಡು ಕಟ್ಟುವ ಪರಿ ಮತ್ತು ಅವುಗಳ ಪ್ರಭೇದಗಳು ಪರಿಸರ ಸಮತೋಲನಕ್ಕೆ ಪೂರಕವಾಗಿಯೂ ಇದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಕಾಳಿಂಗ ಸರ್ಪ ಒಂದು ಪ್ರತ್ಯೇಕ ಪ್ರಭೇದವಾಗಿದ್ದು ಈ ಪ್ರಭೇದಕ್ಕೆ ಕನ್ನಡದ ಹೆಸರಿನಲ್ಲೇ ಕರೆಯುವ ಮೂಲಕ ಜಾಗತಿಕವಾಗಿಯೂ ಈ ಹೆಸರನ್ನು ಶಾಶ್ವತಗೊಳಿಸುವ ಪ್ರಯತ್ನ ನಡೆದಿದೆ. ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆಗೆಂದು ಗಾಯದ ಮೇಲು ಭಾಗದಲ್ಲಿ ಹಗ್ಗ ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲಾ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸಂವಾದದಲ್ಲಿ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವಿನ ಕಡಿತಕ್ಕಿರುವ ಇಂಜೆಕ್ಷನ್ ಕೊರತೆ, ಹಾವಿನ ಬಗೆಗಿನ ಧಾರ್ಮಿಕ ಭಾವನೆ, ನವಿಲುಗಳಿಂದಾಗಿ ಹಾವಿನ ಸಂತತಿ ನಶಿಸುತ್ತಿರುವುದು ಮತ್ತು ಆಗುಂಬೆ ಘಾಟಿಯ ಉದ್ದೇಶಿತ ಸುರಂಗ ಮಾರ್ಗದ ಕುರಿತಂತೆಯೂ ವಿಚಾರಗಳು ಪ್ರಸ್ತಾಪವಾಗಿದ್ದವು.
ಶರಾವತಿ ಜಗದೀಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಕ್ಲಬ್ನ ಸ್ಥಾಪಕ ಅಧ್ಯಕ್ಷ ಕಡಿದಾಳು ದಯಾನಂದ್, ಕಾರ್ಯದರ್ಶಿ ರಾಘವೇಂದ್ರ, ಕಾಳಿಂಗ ಫೌಂಡೇಶನ್ನಿನ ಪ್ರಶಾಂತ್, ಪ್ರಿಯಂಕಾ ಮತ್ತು ಚಿರತೆ ತಜ್ಞರಾದ ಸಂಜಯ್ ಗುಬ್ಬಿ ಮತ್ತು ಕ್ಲಬ್ನ ಸದಸ್ಯರು ಇದ್ದರು.