ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಕಾಲೇಜು ಆವರಣದಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕರಿಗೆ ಮನವಿ ಪತ್ರ ಅರ್ಪಿಸಿ ಮಾತನಾಡಿ, ರಾಜ್ಯದ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ ಪ್ರತಿಷ್ಠಿತ ಸ್ಥಾನದಲ್ಲಿದೆ. ಅಧ್ಯಾಪಕರು ಹೆಚ್ಚಿನ ಆಸಕ್ತಿಯಿಂದ ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಶ್ರಮಿಸುತ್ತಿದ್ದಾರೆ ಎಂದರು.
ಸಂಸ್ಥೆ ವಿದ್ಯಾರ್ಥಿಗಳು ರ್ಯಾಂಕ್ಗಳ ಪಟ್ಟಿಯಲ್ಲಿದ್ದಾರೆ. ತಾಂತ್ರಿಕ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ನಾವು ಆದ್ಯತೆ ನೀಡುತ್ತಿದ್ದೇವೆ. ಸಂಸ್ಥೆಗೆ 120 ಸಿಬ್ಬಂದಿ ಅಗತ್ಯವಿದ್ದರೂ ಕೇವಲ 32 ಜನ ಮಾತ್ರ ಸೇವೆಯಲ್ಲಿದ್ದಾರೆ ಎಂದರು.ಭೋದಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. 2011ರಲ್ಲಿ ಕಾಲೇಜು ಆರಂಭವಾಗಿದ್ದರೂ ಮಕ್ಕಳಿಗೆ ಲ್ಯಾಬ್ ಸೌಲಭ್ಯವಿಲ್ಲ. ಇನ್ಫೋಸಿಸ್ನವರು ಕಾಲೇಜಿಗೆ 150 ಕಂಪ್ಯೂಟರ್ ನೀಡಿದ್ದಾರೆ. ಆದರೆ, ಅವುಗಳನ್ನು ಅಳವಡಿಸಲು ಅಗತ್ಯ ಕಂಪ್ಯೋಟರ್ ಟೇಬಲ್ ಮತ್ತು ಮಕ್ಕಳು ಕುಳಿತು ಕೆಲಸ ಮಾಡಲು ಖುರ್ಚಿಗಳಿಲ್ಲ ಎಂದರು.
ಕಾಲೇಜು ಶುಲ್ಕದ ಹಣವನ್ನು ಸರ್ಕಾರಕ್ಕೆ ಕಟ್ಟಿ ಆನಂತರ ಹಿಂಪಡೆಯಬೇಕೆಂಬ ನಿಯಮವನ್ನು ರಾಜ್ಯ ಸರ್ಕಾರ ಇದೀಗ ಹಿಂಪಡೆದಿದೆ. ಆದರೆ, ಆದೇಶ ಜಾರಿಗೆ ಬಂದಿಲ್ಲ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರೊಂದಿಗೆ ಶಾಸಕರು ಮಾತನಾಡಿ ಆದೇಶವನ್ನು ಜಾರಿಗೊಳಿಸುವಂತೆ ಮನವಿ ಮಾಡಿದರು.
ಪ್ರಾಂಶುಪಾಲರ ವಸತಿ ಗೃಹ, ಅತಿಥಿ ಗೃಹ ಮತ್ತು ವಾಹನಗಳ ಪಾರ್ಕಿಂಗ್ ತಾಣವನ್ನು ನಿರ್ಮಿಸಿಕೊಡಬೇಕು. ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅಗತ್ಯವಾದ ಮಂಚಗಳು, ಟೇಬಲ್, ಚೇರ್, ಸೋಲಾರ್ ಮತ್ತು ಗೀಸರ್ ಅಳವಡಿಕೆಗೆ ಹಣಕಾಸಿನ ನೆರವು ಒದಗಿಸಿಕೊಡಬೇಕು ಎಂದು ಕೋರಿದರು.
ಮನವಿ ಸ್ವೀಕರಿಸಿದ ಶಾಸಕರು, ತಾಂತ್ರಿಕ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ಹೆಚ್ಚಿವೆ. ಗ್ರಾಮಿಣ ಮಕ್ಕಳು ತಾಂತ್ರಿಕ ಕ್ಷೇತ್ರದಲ್ಲಿ ಮುನ್ನಡೆಯಲಿ ಎನ್ನುವ ಕಾರಣಕ್ಕೆ ಇಲ್ಲಿಗೆ ಕಾಲೇಜು ಕೊಡಲಾಗಿದೆ. ಮಕ್ಕಳ ಕಲಿಕೆಗೆ ಉತ್ತಮ ಕ್ಯಾಂಪಸ್ ಇದೆ. ಆದರೆ, ಇದಕ್ಕೆ ತಕ್ಕಂತೆ ಭೋದಕರು ಮತ್ತು ಲ್ಯಾಬ್ ಸೌಲಭ್ಯ ಇಲ್ಲದಿರುವುದು ದುರದೃಷ್ಟಕರ ಎಂದರು.
ಈ ವೇಳೆ ಮುಖಂಡರಾದ ಕಿಕ್ಕೇರಿ ಮಧು, ಬಲರಾಂ, ರವಿ ಹಾಗೂ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.