ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಅಲೆಯವುದನ್ನು ತಪ್ಪಿಸಲು ಗ್ರಾಪಂ ಮಟ್ಟದಲ್ಲೇ ಕುಂದು ಕೊರತೆ ಸಭೆ

KannadaprabhaNewsNetwork | Published : Jan 9, 2024 2:00 AM

ಕ್ಷೇತ್ರದ ಜನರು ಸರ್ಕಾರಿ ಕಚೇರಿ,ಶಾಸಕರ ಮನೆ, ಕಚೇರಿಗೆ ಅಲೆಯವುದನ್ನು ತಪ್ಪಿಸಲು ಕ್ಷೇತ್ರದಾದ್ಯಂತ ಗ್ರಾಪಂ ಮಟ್ಟದಲ್ಲೇ ಸಾರ್ವಜನಿಕರ ಗ್ರಾಪಂ ಮಟ್ಟದ ಕುಂದು ಕೊರತೆ ಸಭೆಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕ್ಷೇತ್ರದ ಜನರು ಸರ್ಕಾರಿ ಕಚೇರಿ,ಶಾಸಕರ ಮನೆ, ಕಚೇರಿಗೆ ಅಲೆಯವುದನ್ನು ತಪ್ಪಿಸಲು ಕ್ಷೇತ್ರದಾದ್ಯಂತ ಗ್ರಾಪಂ ಮಟ್ಟದಲ್ಲೇ ಸಾರ್ವಜನಿಕರ ಗ್ರಾಪಂ ಮಟ್ಟದ ಕುಂದು ಕೊರತೆ ಸಭೆಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕರೆ ನೀಡಿದರು.

ತಾಲೂಕಿನ ಹೊರೆಯಾಲ ಗ್ರಾಮದಲ್ಲಿ ಜಿಪಂ,ತಾಪಂ ಹಾಗೂ ಗ್ರಾಪಂ ಆಯೋಜಿಸಿದ್ದ ವಿವಿಧ ಇಲಾಖೆಗಳ ಸಂಬಂಧಿಸಿದ ಗ್ರಾಪಂ ಮಟ್ಟದ ಕುಂದು ಕೊರತೆ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಆಯಾ ಗ್ರಾಪಂ ವ್ಯಾಪ್ತಿಯ ಜನರು ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು. ಗ್ರಾಪಂ ಮಟ್ಟದ ಸಾರ್ವಜನಿಕ ಕುಂದು ಕೊರತೆ ಸಭೆಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು,ಸಾರ್ವಜನಿಕ ಸಮಸ್ಯೆಗಳಿಗೆ ಆದಷ್ಟು ಸ್ಥಳದಲ್ಲಿಯೇ ಪರಿಹಾರ ಕಂಡು ಹಿಡಿಯಲು ಪ್ರಯತ್ನಕ್ಕೆ ಕೈ ಹಾಕಿದ್ದೇವೆ ಸಾರ್ವಜನಿಕರು ಕುಂದು ಕೊರತೆ ಸಭೆಯ ಸದುಪಯೋಗ ಪಡಿಸಿಕೊಳ್ಳಿ ಎಂದರು. ಆರಂಭಿಕವಾಗಿ ಸೋಮವಾರದಂದು ಹೊರೆಯಾಲ ಹಾಗೂ ಕೋಟೆಕೆರೆ ಗ್ರಾಪಂ ಮಟ್ಟದ ಕುಂದು ಕೊರತೆ ಸಭೆ ನಡೆದಿವೆ. ಸಂಕ್ರಾಂತಿ ಹಬ್ಬದ ನಂತರ ಕ್ಷೇತ್ರದಲ್ಲಿನ ಗ್ರಾಪಂನಲ್ಲಿ ಸಭೆ ನಡೆಸಲಾಗುವುದು ಎಂದರು. ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್‌ ಸಮಸ್ಯೆ, ಬಸ್‌ ಸಮಸ್ಯೆ, ಆಸ್ಪತ್ರೆ ಸಮಸ್ಯೆ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳನ್ನು ಜನರು ಕೇಳಿದರೆ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ರಾಜ್ಯ ಸರ್ಕಾರಿ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಗೆ ಹೆಚ್ಚಿನ ಹಣ ಖರ್ಚಾಗುತ್ತಿದೆ. ವಸತಿ ಯೋಜನೆಯಲ್ಲಿ ಬಿಲ್‌ ಆಗದ ಮನೆಗಳಿಗೆ ಹಣ ಕೊಡಿಸುವ ಸಂಬಂಧ ಸಿಎಂ, ಡಿಸಿಎಂ, ವಸತಿ ಸಚಿವರೊಂದಿಗೆ ಮಾತನಾಡಿ ಹಣ ಕೊಡಿಸಲು ಪ್ರಯತ್ನಿಸುವೆ ಎಂದರು.ಅನುದಾನ ಸಿಗಲಿದೆ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕ್ಷೇತ್ರದ ಶಾಲೆಗಳ ಮೂಲಭೂತ ಸೌಕರ್ಯ ಕಲ್ಪಿಸಲು ಒಂದು ಕೋಟಿ ಅನುದಾನ ನೀಡುವುದಾಗಿ ಹೇಳಿದ್ದಾರೆ ಅನುದಾನ ಬಂದ ಬಳಿಕ ಶಾಲೆಗಳಿಗೆ ಬಳಕೆ ಮಾಡಲಾಗುವುದು ಎಂದರು. ಗೃಹಲಕ್ಷ್ಮೀ ಯೋಜನೆಯಡಿ ಮಾಸಿಕ ಹಣ ಬಾರದ ಮಂದಿಗೆ ಬರುವ ಜ.೧೧ ರಂದು ಗುಂಡ್ಲುಪೇಟೆಯಲ್ಲಿ ಸಭೆಯಲ್ಲಿ ದಾಖಲಾತಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಕ್ಷೇತ್ರದಲ್ಲಿ ನಾನು ಶಾಸಕನಾದ ನಂತರ ಆರಂಭಿಸಿರುವ ಸಾರ್ವಜನಿಕ ಕುಂದು ಕೊರತೆ ಸಭೆ ಯಶಸ್ವಿಯಾಗಿ ನಡೆಸಲು ಕ್ಷೇತ್ರದ ಜನರು ಸಹಕರಿಸಿದರೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಆಗಲಿದೆ ಎಂದರು. ಮಹದೇವಪ್ರಸಾದ್‌ ಕಾಲದಲ್ಲಾದ ಅಭಿವೃದ್ದಿ ಕೆಲಸಗಳು ಸಾಕಷ್ಟಿವೆ. ನಾನು ಸಹ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಚಾಚು ತಪ್ಪದೆ ಮಾಡುವೆ ಎಂದರು.ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಲೀಲಾವತಿ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ತಹಸೀಲ್ದಾರ್‌ ಟಿ.ರಮೇಶ್‌ ಬಾಬು,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ,ಜಿಪಂ ಮಾಜಿ ಸದಸ್ಯ ಕೆ.ಶಿವಸ್ವಾಮಿ,ತಾಪಂ ಮಾಜಿ ಸದಸ್ಯ ನೀಲಕಂಠಪ್ಪ,ಯುವ ಮುಖಂಡ ಗೋಪಾಲ್‌ ಹೊರೆಯಾಲ,ಎಪಿಎಂಸಿ ಸದಸ್ಯ ಆರ್.ಎಸ್.ನಾಗರಾಜು, ಗ್ರಾಪಂ ಉಪಾಧ್ಯಕ್ಷೆ ಚನ್ನಮ್ಮ, ಗ್ರಾಪಂ ಪಿಡಿಒ ಶಾಂತರಾಜು ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.ದೂರುಗಳ ಸುರಿಮಳೆ: ಹೊರೆಯಾಲ ಗ್ರಾಪಂನಲ್ಲಿ ನೆರೆದಿದ್ದ ಜನರಲ್ಲಿ ೮೬ ಸಮಸ್ಯೆಗಳ ಮನವಿಗಳು ಶಾಸಕರ ಮುಂದೆ ಬಂದವು .ಶಾಸಕರು ಸ್ಥಳೀಯ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಸಾಲದ ಅರ್ಜಿಗಳನ್ನು ನೀಡಬೇಡಿ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮನವಿ ಮಾಡಿದರು.ಸಭೆಯಲ್ಲಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಮೂರು ಕಾರಿಗೆ ಸಾಲ ನೀಡಲು ಅವಕಾಶವಿದೆ ಆನ್‌ ಲೈನ್‌ ಅರ್ಜಿ ಹಾಕಿದ್ದಾರೆ.ಆದರೆ ೪೩೨ ಅರ್ಜಿಗಳಲ್ಲಿ ಮೂರು ಜನರಿಗೆ ಕೊಡೋದು ಹೇಗೆ ಎಂದು ಶಾಸಕರು ತಮ್ಮನ್ನೇ ಪ್ರಶ್ನಿಸಿಕೊಂಡರು.

ರಾತ್ರಿ ೧೦ ರ ಬಳಿಕ ಕ್ರಷರ್‌ ಕ್ರಸ್ಸಿಂಗ್‌ ಮಾಡಿದರೆ ಸೀಜ್‌

ಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಬಳಿಯ ಕ್ರಷರ್‌ ಗಳು ರಾತ್ರಿ ೧೦ ರ ಬಳಿಕ ಕ್ರಷರ್‌ ಕ್ರಸ್ಸಿಂಗ್‌ ಮಾಡಿದರೆ ಕ್ರಷರ್‌ ಸೀಜ್‌ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ಬರೆಯುವುದಾಗಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಘೋಷಿಸಿದರು.

ಹೊರೆಯಾಲ ಗ್ರಾಮದಲ್ಲಿ ನಡೆದ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಪಂ ಮಟ್ಟದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಹಿರೀಕಾಟಿ ಗ್ರಾಮಸ್ಥರು ನೀಡಿದ ಮನವಿಗೆ ಸ್ಪಂದಿಸಿ ಮಾತನಾಡಿ ಈಗಾಗಲೇ ರಾತ್ರಿ ೧೦ ರ ಬಳಿಕ ಕ್ರಷರ್‌ ನಡೆಸುತ್ತಿದ್ದವರಿಗೆ ನೋಟೀಸ್‌ ನೀಡಲಾಗಿದೆ ಎಂದರು.

ತಹಸೀಲ್ದಾರ್‌ ಮಾತಿಗೆ ಹಿರೀಕಾಟಿ ಗ್ರಾಮದ ಮುಖಂಡರೊಬ್ಬರು ಪ್ರತಿಕ್ರಿಯಿಸಿ ರಾತ್ರಿ ೧೦ ರ ಬಳಿಕ ಕ್ರಷರ್‌ ಕೆಲಸ ಮಾಡುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರಿಗೆ ಮಾಹಿತಿ ಕೊಟ್ಟಿದ್ದೇವು ಅವರು ಬರುವ ಮಾಹಿತಿ ತಿಳಿದು ಕ್ರಷರ್‌ ನಿಲ್ಲಿಸಿದ್ದರು ಎಂದರು.

ಮತ್ತೆ ತಹಸೀಲ್ದಾರ್‌ ಮಾತನಾಡಿ ಇನ್ಮುಂದೆ ರಾತ್ರಿ ೧೦ ರ ಬಳಿಕ ಕ್ರಷರ್‌ ಕಲ್ಲು ಕ್ರಸ್ಸಿಂಗ್‌ ಮಾಡಿದರೆ ವಿಡೀಯೋ ಮಾಡಿ ನನಗೆ ಫೋನ್‌ ಮಾಡಿದರೆ ಕ್ರಮಕ್ಕೆ ಜಿಲ್ಲಾಧಿಕಾರಿ ಹಾಗು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ಬರೆಯುತ್ತೇನೆ ಎಂದು ಸಭೆಯಲ್ಲಿ ನೆರದಿದ್ದ ಜನರಿಗೆ ಫೋನ್‌ ನಂಬರ್‌ ನೀಡಿದರು.ಕುಂದು ಕೊರತೆ ಸಭೆಯಲ್ಲೂ ಕ್ರಷರ್‌ ಸದ್ದು

ಗುಂಡ್ಲುಪೇಟೆ: ಹಿರೀಕಾಟಿ ಗೇಟ್‌ ಬಳಿಯ ಕ್ರಷರ್‌ ರಾತ್ರಿ ೧೦ ರ ಬಳಿಕ ಕಲ್ಲು ಕ್ರಸ್ಸಿಂಗ್‌ ಮಾಡುತ್ತಿರುವ ಬಗ್ಗೆ ಕನ್ನಡಪ್ರಭ ನಿರಂತರ ವರದಿ ಪ್ರಕಟಿಸುತ್ತಿತ್ತು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಕ್ರಷರ್‌ ಕ್ರಸ್ಸಿಂಗ್‌ ಸದ್ದು ಮಾಡಿದೆ.

ಹಿರೀಕಾಟಿ ಗ್ರಾಮಸ್ಥರು ಶಾಸಕರಿಗೆ ನೀಡಿದ ದೂರಿನ ಪ್ರಕಾರ ರಾತ್ರಿ ೧೦ ರ ಬಳಿಕ ಕ್ರಷರ್‌ ಕ್ರಸಿಂಗ್‌ ಮಾಡುತ್ತಿವೆ ಜನರ ನಿದ್ದೆ ಹಾಳಾಗುತ್ತಿದೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು ಅಲ್ಲದೆ ಕನ್ನಡಪ್ರಭದಲ್ಲಿ ವರದಿ ಬರುತ್ತಲೇ ಇವೆ ಎಂದರು.