ಕುಷ್ಟಗಿಯಿಂದ ಬೆಂಗಳೂರಿಗೆ ರೈಲ್ವೆ ಓಡಿಸಲು ಮನವಿ

KannadaprabhaNewsNetwork |  
Published : Apr 04, 2026, 02:15 AM IST
ಪೋಟೊ3ಕೆಎಸಟಿ2: ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಕುಷ್ಟಗಿಯಿಂದ ಬೆಂಗಳೂರುಗೆ ರೈಲು ಓಡಿಸುವಂತೆ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಆದ್ಯತೆ ಮೇರೆಗೆ ಕುಷ್ಟಗಿ ಬೆಂಗಳೂರು ರೈಲು ಬಿಡಲಾಗುವದು

ಕುಷ್ಟಗಿ: ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಓಡಿಸುವಂತೆ ಮುಂದಾಗುವಂತೆ ಒತ್ತಾಯಿಸಿ ಬಾಗಲಕೋಟೆಯಲ್ಲಿ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣಗೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿರೇಶ ಬಂಗಾರಶೆಟ್ಟರ ಮಾತನಾಡಿ, ಕಳೆದ ವರ್ಷ ಕುಷ್ಟಗಿಯಲ್ಲಿ ರೈಲ್ವೆ ಸ್ಟೇಷನ್ ಉದ್ಘಾಟಿಸುವ ಮೂಲಕ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಓಡಿಸುವದಕ್ಕೆ ಚಾಲನೆ ದೊರೆತಿದ್ದು, ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಆದರೆ ಕೇವಲ ಹುಬ್ಬಳ್ಳಿಗೆ ಒಂದೇ ರೈಲು ಓಡುತ್ತಿರುವದರಿಂದ ಕೋಟ್ಯಂತರ ವ್ಯಯಿಸಿ ನಿರ್ಮಿಸಿದ ರೇಲ್ವೆ ಮಾರ್ಗ ಮತ್ತು ಸ್ಟೇಶನ್ ಉಳಿದ ಸಮಯದಲ್ಲಿ ಬಿಕೋ ಎನ್ನುತ್ತಿವೆ ಎಂದ ಅವರು, ಕುಷ್ಟಗಿಯಿಂದ ಹುಬ್ಬಳ್ಳಿಗೆ ಇನ್ನೊಂದು ರೈಲು ಓಡಿಸಬೇಕು ಎಂದು ತಿಳಿಸಿದರು.

ಕುಷ್ಟಗಿ, ಯಲಬುರ್ಗಾ, ಕುಕನೂರು ಜನತೆ ವ್ಯಾಪಾರ ವಹಿವಾಟು, ಶೈಕ್ಷಣಿಕ ಉದ್ದೇಶಗಳಿಗಾಗಿ ಸರ್ಕಾರಿ ಕೆಲಸಗಳಿಗಾಗಿ ರಾಜಧಾನಿ ಬೆಂಗಳೂರಿಗೆ ಸಂಚರಿಸಲು ರಸ್ತೆ ಸಾರಿಗೆ ಅವಲಂಬಿಸಿದ್ದು, ಹೆಚ್ಚುವರಿ ಹೊರೆಯಾಗುತ್ತಿದೆ ಆದ್ದರಿಂದ ಹೊಸದಾಗಿ ನಿರ್ಮಿಸಿದ ರೇಲ್ವೇ ಮಾರ್ಗ ಇನ್ನೂ ಲಾಭದಾಯಕ ಮಾಡಿಕೊಳ್ಳಲು ಮತ್ತು ಜನತೆಗೆ ಬೆಂಗಳೂರಿನಿಂದ ಹೊಸಪೇಟೆವರೆಗೆ ಬರುವ ರೈಲುಗಳನ್ನು ಕುಷ್ಟಗಿವರೆಗೆ ಓಡಿಸಲು ಮುಂದಾಗುವ ಮೂಲಕ ಈ ಭಾಗದ ಜನರಿಗೆ ಅನೂಕೂಲ ಮಾಡಬೇಕು ಎಂದು ಹೇಳಿದರು.

ಭರವಸೆ ನೀಡಿದ ಸಚಿವರು: ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯ ಮನವಿ ಸ್ವೀಕರಿಸಿದ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಮಾತನಾಡಿ, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರೈಲ್ವೇಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇನ್ನೂ ಸಾಕಷ್ಟು ಕೆಲಸ ಮಾಡುವದು ಬಾಕಿ ಇದ್ದು, ಆದ್ಯತೆ ಮೇರೆಗೆ ಕುಷ್ಟಗಿ ಬೆಂಗಳೂರು ರೈಲು ಬಿಡಲಾಗುವದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶರಣು ತಳ್ಳಿಕೇರಿ, ಮಹಾಂತಯ್ಯ ಅರಳೆಲಿಮಠ, ಬಾಬು ಘೋರ್ಪಡೆ, ಮಂಜುನಾಥ ಮಹಾಲಿಂಗಪುರ, ವಿರೇಶ ಕರಡಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ. ಆರ್.ಕೆ. ಕುಲಕರ್ಣಿ ಆರೋಗ್ಯ ಸೇವೆ ಸದಾ ಸ್ಮರಣೀಯ: ಅಶುತೋಷ್ ಕುಮಾರ್ ರಾಯ್
ಕಲೆ, ಕಲಾವಿದರು ಬೆಳೆಯಲು ಅಭಿಮಾನಿಗಳ ಪ್ರೋತ್ಸಾಹ ಅಗತ್ಯ: ರಾಘವೇಂದ್ರ ಆಚಾರ‍್ಯ