ರಸ್ತೆ ಕಾಮಗಾರಿ ಆರಂಭಿಸಲು ಮನವಿ

KannadaprabhaNewsNetwork |  
Published : Apr 27, 2024, 01:20 AM IST
ಮುದ್ದೇಬಿಹಾಳ ಮತಕ್ಷೇತ್ರದ ಕೊಣ್ಣೂರ ಗ್ರಾಮಸ್ಥರ ಬಹು ದಿನಗಳ ಭೇಡಿಕೆಯಾದ ಕೊಣ್ಣೂರ, ಹೂವಿನಹಿಪ್ಪರಗಿ ಕೂಡುವ ರಸ್ತೆಯ ಕಾಮಗಾರಿಗೆ ನಿರ್ಮಿಸುವಂತೆ ಆಗ್ರಹಿಸಿ ಮನವಿ | Kannada Prabha

ಸಾರಾಂಶ

ಮತಕ್ಷೇತ್ರದ ಕೊಣ್ಣೂರ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಕೊಣ್ಣೂರ, ಹೂವಿನಹಿಪ್ಪರಗಿ ಕೂಡುವ ರಸ್ತೆ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಸಮಾಜ ಸೇವಕ ಹಾಗೂ ಅಸ್ಕಿ ಫೌಂಡೇಷನ್ ಮುಖ್ಯಸ್ಥ ಸಿ.ಬಿ.ಅಸ್ಕಿ ಅವರ ನೇತೃತ್ವದಲ್ಲಿ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮತಕ್ಷೇತ್ರದ ಕೊಣ್ಣೂರ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಕೊಣ್ಣೂರ, ಹೂವಿನಹಿಪ್ಪರಗಿ ಕೂಡುವ ರಸ್ತೆ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಸಮಾಜ ಸೇವಕ ಹಾಗೂ ಅಸ್ಕಿ ಫೌಂಡೇಷನ್ ಮುಖ್ಯಸ್ಥ ಸಿ.ಬಿ.ಅಸ್ಕಿ ಅವರ ನೇತೃತ್ವದಲ್ಲಿ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ದೂರವಾಣಿ ಮೂಲಕ ಮಾತನಾಡಿ, ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದರು.

ಈ ವೇಳೆ ಕೊಣ್ಣೂರ ಗ್ರಾಮದ ಹಿರಿಯ ಮುಖಂಡರಾದ ಬಸವರಾಜ ಹಡಲಗೇರಿ, ಬಾಲನಗೌಡ ಬಿರಾದಾರ, ಚಂದ್ರಶೇಖರ ಇಂಗಳಗಿ, ಸುಭಾಸ ತಾಳಿಕೋಟಿ, ಗಂಗಣ್ಣ ಬಡಿಗೇರ, ಮಕ್ತುಮಸಾಬ ಅವಟಿ, ಮಶ್ಯಾಕ ಅವಟಿ, ರಮೇಶ ಕೊಟಗಿ, ಬಸನಗೌಡ ಪಾಟೀಲ, ಬಾಪೂಗೌಡ ನೀರಲಗಿ, ಮಂಜುನಾಥ ಶಿನ್ನೂರ, ಸಿದ್ದಪ್ಪ ಶಿರಕನಳ್ಳಿ, ಮಾಂತಗೌಡ ಏವೂರ, ಅಭಿಷೇಕ ಹಡಲಗೇರಿ, ಶ್ರೀಕಾಂತ ಅಸ್ಕಿ, ಪ್ರಕಾಶ ಅಸ್ಕಿ, ವೀರೇಶ ಅಸ್ಕಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!