ನರಗುಂದ: ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕುಡಿಯಲು ನೀರಿನ ಹಾಹಾಕಾರವಾಗಿದೆ. ಆದ್ದರಿಂದ ಬಲದಂಡೆ ಮಲಪ್ರಭಾ ಕಾಲುವೆಗೆ ನೀರು ಪೂರೈಕೆ ಮಾಡಬೇಕೆಂದು ತಾಲೂಕು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಆಗ್ರಹಿಸಿದರು.
ಕರ್ನಾಟಕ ರೈತಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಮಾತನಾಡಿ, ಬಹುದಿನಗಳಿಂದ ಕಾಲುವೆ ದುರಸ್ತಿ ಮತ್ತು ಗೇಟುಗಳು ರಿಪೇರಿಯಿಲ್ಲದೆ ಜಲಾಶಯದಿಂದ ಕಾಲುವೆ ನೀರು ಬಿಟ್ಟರೆ ಕೊಣ್ಣೂರು ಗ್ರಾಮಕ್ಕೆ ಬೇಗ ತಲುಪುವದಿಲ್ಲ. ಹಾಗಾಗಿ ಈ ಬಾರಿ ಬಲದಂಡೆ ಕಾಲುವೆಗೆ ನೀರು ಪೂರೈಕೆಯಾದರೂ ಗ್ರಾಮಕ್ಕೆ ನೀರು ಮುಟ್ಟಿಲ್ಲ. ಕುಡಿಯುವ ನೀರಿಗಾಗಿ ಕಾಲುವೆಗೆ ನೀರು ಪೂರೈಕೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಉಪತಹಸೀಲ್ದಾರ್ ಪರಶುರಾಮ ಕಲಾಲ ರೈತರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಸವರಾಜ ಸಾಬಳೆ, ಚನ್ನು ನಂದಿ, ಬಾಪೂಗೌಡ ಪಾಟೀಲ, ಬಿ.ಬಿ. ಶೆಟ್ಟರ, ವೀರಣ್ಣ ಸೊಪ್ಪಿನ, ಎಸ್.ಎಸ್. ಪಾಟೀಲ, ಮುತ್ತು ಕಳಸಣ್ಣವರ, ಬಸವಣ್ಣಪ್ಪ ಯಲಿಗಾರ, ರೆಹಮಾನಸಾಬ ಅಲ್ಲಿಬಾಯಿ, ಮಹೇಶ ಪಾಟೀಲ, ಬಸರಾಜ ಶೆಲ್ಲಿಕೇರಿ, ಹನುಮಂತಗೌಡ ಭೂಸಣ್ಣವರ, ತುಳಸಿಗೇರಿ ತೋಟದ, ಶೇಕರಗೌಡ ಪಾಟೀಲ, ಬಸವರಾಜ ಕರಿಯಪ್ಪನವರ ಇದ್ದರು. ಮೀನುಗಾರಿಕೆಗಾಗಿ ಮರಿ ಪಡೆಯಲು ಅರ್ಜಿಗದಗ: ಮೀನುಗಾರಿಕೆ ಇಲಾಖೆ ವತಿಯಿಂದ 2026- 27ನೇ ಸಾಲಿಗೆ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಕೃಷಿ, ಬಾವಿ ಹೊಂಡಗಳನ್ನು ಹೊಂದಿದ ಕೃಷಿಕರಿಗೆ ಉಚಿತವಾಗಿ 500 ಬಿತ್ತನೆ ಮೀನು ಮರಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ. 11 ಕೊನೆಯ ದಿನವಾಗಿದೆ.