ಕನ್ನಡಪ್ರಭ ವಾರ್ತೆ ಭಾರತೀನಗರ
ಭಾರತೀ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ಕಾಲೇಜು (ಸ್ವಾಯತ್ತ) ಕನ್ನಡ ವಿಭಾಗ, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಹಾಗೂ ಐ.ಕ್ಯೂ.ಎ.ಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣದಲ್ಲಿ ಸಂಶೋಧನೆ ವಿಧಿ ವಿಧಾನಗಳು- ಮರುಪರಿಶೀಲನೆ ಕುರಿತ ಮಾತನಾಡಿದರು.
ಸಂಪೂರ್ಣ ಜ್ಞಾನ ಇಲ್ಲದೆ ಮಾಡುವ ಸಂಶೋಧನೆ ಏಕಮುಖಿ ಸಂಶೋಧನೆಯಾಗಿ ಮಾರ್ಪಟ್ಟು ಅದು ಅಪೂರ್ಣ ಸಂಶೋಧನೆಯಾಗಿಯೇ ಉಳಿದುಕೊಳ್ಳುತ್ತದೆಯ ಸಂಶೋಧನೆ ಕೈಗೊಳ್ಳುವವರು ಎಲ್ಲಾ ವಿಷಯವನ್ನು ವಿವಿಧ ದೃಷ್ಠಿಕೋನಗಳಲ್ಲಿ ನೋಡಬೇಕಾಗುತ್ತದೆ. ಆ ಎಲ್ಲಾ ಕೋನಗಳನ್ನು ಕೃತಿಗಿಳಿಸಿದಾಗ ಉತ್ತಮ ಪ್ರಬಂಧವಾಗಿ ಹೊರಹೊಮ್ಮುತ್ತದೆ ಎಂದರು.ಸಂಶೋಧಕನಾಗುವವನಿಗೆ ಹಲವು ವಿಷಯಗಳ ಬಗ್ಗೆ ಗೊತ್ತಿರಬೇಕು. ಅದರಲ್ಲಿ ಇತಿಹಾಸ, ಲಿಪಿಶಾಸ್ತ್ರ, ಜಾನಪದ, ಪುರಾತತ್ವ ಶಾಸ್ತ್ರ, ಶೀಲಾಶಾಸ್ತ್ರ, ರಾಜಕೀಯ ಶಾಸ್ತ್ರ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ನಡೆಸಬೇಕು. ಹಾಗಾದಲ್ಲಿ ಮಾತ್ರ ಬಹುಭಾಷೀಯ ಸಂಶೋಧನೆಯಾಗುತ್ತದೆ ಎಂದರು.
ಜಾನಪದ ಎಂಬುದು ಒಂದು ವಿಶಾಲವಾದ ಸಮುದ್ರ, ಆ ಎಲ್ಲಾ ಪ್ರಕಾರಗಳನ್ನು ಅಧ್ಯಯನ ಮಾಡುವುದು ಸುಲಭದ ಮಾತಲ್ಲ. ಒಂದು ವೇಳೆ ಅಧ್ಯಯನ ಕೈಗೊಂಡವರು ಜಾನಪದದ ಎಲ್ಲಾ ಪ್ರಾಕಾರಗಳ ಒಳಹೊರವುಗಳನ್ನು ವಿಶ್ಲೇಷಿಸುವಂತಾಗಬೇಕು. ಹಾಗಾದಲ್ಲಿ ಮಾತ್ರ ಸಮಗ್ರ ಜಾನಪದ ಸಂಶೋಧನೆಯಾಗುತ್ತದೆ ಎಂದರು.
ಇದೇ ವೇಳೆ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಸಿ.ದೇವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.