ವಾರದೊಳಗೆ ಪರಿಹಾರ: ರೈತರ ಪ್ರತಿಭಟನೆ ಹಿಂದಕ್ಕೆ

KannadaprabhaNewsNetwork |  
Published : Jul 11, 2026, 01:00 AM IST
ರೈತರಿಗೆ ಲಿಖಿತ ಭರವಸೆ ಪತ್ರ ನೀಡಿದ ಅಧಿಕಾರಿಗಳು. | Kannada Prabha

ಸಾರಾಂಶ

ಇಲಾಖೆಯ ಅಧಿಕಾರಿಗಳು ಒಪ್ಪಿಗೆ ಪತ್ರದ ಮೂಲಕ ಕರಾರು ಮಾಡಿ ಒಂದು ವಾರದಲ್ಲಿ ರೈತರಿಗೆ ಪರಿಹಾರ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.

ಡಂಬಳ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿರ್ಮಾಣ ಹಂತದಲ್ಲಿರುವ ಗ್ರಿಡ್‌ ಕಾಮಗಾರಿಗೆ ರೈತರು ಮತ್ತು ಕಂಪನಿಯವರು ಮಾಡಿಕೊಂಡಿರುವ ಒಪ್ಪಂದದಂತೆ ಪರಿಹಾರ ನೀಡದ ಹಿನ್ನೆಲೆ ಗುರುವಾರ ಸಹ ಪ್ರತಿಭಟನೆ ಮುಂದುವರಿದಿತ್ತು. ಆದರೆ ಇಲಾಖೆ ಅಧಿಕಾರಿಗಳು ಒಪ್ಪಿಗೆ ಪತ್ರದ ಮೂಲಕ ಪರಿಹಾರ ನೀಡಲು ಒಂದು ವಾರ ಕಾಲವಕಾಶ ಪಡೆದ ಹಿನ್ನೆಲೆ ರೈತರ ಹೋರಾಟ ಒಂದು ವಾರದವರಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಡಂಬಳ ಹೋಬಳಿ ಹೈತಾಪುರ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ(ಕೆಪಿಟಿಸಿಎಲ್) ಗ್ರಿಡ್‌ ಮುಂದೆ ಗುರುವಾರ ಪರಿಹಾರಕ್ಕಾಗಿ ಆಗ್ರಹಿಸಿ ಹೋರಾಟ ಮುಂದುವರಿದಿತ್ತು. ಸ್ಥಳಕ್ಕೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಧೀರಕುಮಾರ, ಎಇ ಅನಂತರಾವ, ಜೆಇ ಚೇತನಕುಮಾರ ಅವರು ರೈತರೊಂದಿಗೆ ಚರ್ಚಿಸಿ ಒಂದು ವಾರದಲ್ಲಿ ಪರಿಹಾರ ನೀಡುವ ಕುರಿತು ಒಪ್ಪಿಗೆ ಪತ್ರದ ಮೂಲಕ ಕರಾರು ಮಾಡಿದ್ದರಿಂದ ರೈತರು ತಾತ್ಕಾಲಿಕವಾಗಿ ಹೋರಾಟವನ್ನು ಅಂತ್ಯಗೊಳಿಸಿದರು.

ಇಲಾಖೆಯ ಅಧಿಕಾರಿಗಳು ಒಪ್ಪಿಗೆ ಪತ್ರದ ಮೂಲಕ ಕರಾರು ಮಾಡಿ ಒಂದು ವಾರದಲ್ಲಿ ರೈತರಿಗೆ ಪರಿಹಾರ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಒಪ್ಪಿಗೆ ಪತ್ರ ನೀಡಿದ್ದರಿಂದ ಪರಿಹಾರ ಒಂದು ವಾರದಲ್ಲಿ ಬರುತ್ತದೆ ಎನ್ನುವ ಆಶಾಭಾವನೆ ನಮಗೂ ಇದೆ. ಒಂದು ವಾರದ ನಂತರ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯದೆ ಹೋದರೆ ಮತ್ತೆ ನೂರಾರು ಸಂಖ್ಯೆ ರೈತರ ಕಾಮಗಾರಿ ಬಂದ್ ಮಾಡಿ ಉಗ್ರ ಹೋರಾಟ ಮಾಡುತ್ತೇವೆ ಎನ್ನುತ್ತಾರೆ ರೈತರಾದ ನಾಗಪ್ಪ ಚುಂಗಿನ ಮತ್ತು ಪ್ರಭು ಕೊರ್ಲಹಳ್ಳಿ.

ರೈತರಾದ ಶೇಖಪ್ಪ ಯಾವಗಲ್, ನಾಗಪ್ಪ ಚುಂಗಿನ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಇಟಗಿ, ಮುತ್ತಪ್ಪ ಗೋಡಿ, ಪ್ರಭು ಕೊರ್ಲಹಳ್ಳಿ, ಹನುಮಪ್ಪ ಚುಂಗಿನ, ಶರಣಪ್ಪ ಕೊರ್ಲಹಳ್ಳಿ, ಮಂಜಪ್ಪ ಹಾರೂಗೇರಿ, ಮುತ್ತಪ್ಪ ಕೊರ್ಲಹಳ್ಳಿ, ದೇವೆಂದ್ರಗೌಡ ಪಾಟೀಲ, ಬಸವರಾಜ ಆನಿಯವರು, ಶಿವಶಂಕರಪ್ಪ ಮುದಿಯಜ್ಜನವರ, ಸಿದ್ದಪ್ಪ ಮಟ್ಟಿ, ಬಸವರಾಜ ಸೂಗಿ, ಶೇಖಪ್ಪ ಮಟ್ಟಿ, ಚಿದಾನಂದ ಪಾಟೀಲ, ಮಲ್ಲಪ್ಪ ಮಲ್ಲಪ್ಪನವರ, ಹನುಮಪ್ಪ ಪೂಜಾರ, ರಾಮಣ್ಣ ರೋಣದ, ಮಹಾಂತೇಶ ಚುಂಗಿನ, ಹಾಲಪ್ಪ ಚುಂಗಿನ, ಶಿವಕುಮಾರ ಲಕ್ಕುಂಡಿ, ಕನಕಪ್ಪ ನಾಡಗೌಡ್ರ, ಹೊನ್ನಪ್ಪ ಪೂಜಾರ ಸೇರಿದಂತೆ ಮೇವುಂಡಿ ಹಾಗೂ ಹೈತಾಪುರ ಗ್ರಾಮದ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಬಾಕುಮುಕ್ತ ಗ್ರಾಮಗಳೆಂದು ಕಲಬಾವಿ, ಹರೇಗಾಳಿ ಗುರುತು
ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ಶೀಘ್ರ ₹62.56 ಕೋಟಿ ಜಮೆ