ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಕೋಟಾದಲ್ಲಿ ನಮಗೆ ಸಚಿವ ಸ್ಥಾನ ಸಿಗಬೇಕು ಅದು ಸಿಕ್ಕಿಲ್ಲ. ಇದು ಬೇಸರ ಸಂಗತಿ. ಕಳೆದ 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠನಾಗಿ ಪಕ್ಷದ ಶಕ್ತಿಗೆ ಶ್ರಮಿಸಿದ್ದೇನೆ. ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣನೆ ಮಾಡಲಾಗುತ್ತಿದೆ. ಇವರು ಹೇಳಿದಂತೆ ಕೇಳಿಕೊಂಡು ಬಿದ್ದಿರುತ್ತಿದ್ದಾರೆ ಎಂಬ ಮನೋಭಾವ ಮೂಡುತ್ತಿದೆ. ಕಾಂಗ್ರೆಸ್ ಪಕ್ಷದ ಕೇಂದ್ರದ ಎಲ್ಲ ವರಿಷ್ಠರ ಬಗ್ಗೆ ಅಪಾರಗೌರವ ಹೊಂದಿದ್ದೇನೆ. ಕಾಂಗ್ರೆಸ್ನಲ್ಲಿರುವ ಪ್ರಾಮಾಣಿಕರನ್ನು ಗೌರವಿಸುವ ಕೆಲಸವಾಗಬೇಕು. ನಾನು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಹೌದು. ಹಿರಿಯ ಶಾಸಕರು ಇದ್ದರೂ ಗೌರವ ಸ್ಥಾನಮಾನ ಸಿಗುತ್ತಿಲ್ಲ. ಈ ಬಗ್ಗೆ ಮತಕ್ಷೇತ್ರದ ಕಾರ್ಯಕರ್ತರು ಹಾಗೂ ಜನರಲ್ಲೂ ನೋವಿದೆ ಎಂದರು.
ಹೈಕ್ಮಾಂಡ ಬಗೆಹರಿಸಲಿ:ಮುಖ್ಯಮಂತ್ರಿ ಬದಲಾವಣೆ ಗೊಂದಲವನ್ನು ಹೈಕಮಾಂಡ್ ನಿವಾರಿಸಬೇಕು. ಸಿದ್ದರಾಮಯ್ಯ ನಾಯಕತ್ವ ಒಪ್ಪಿದ್ದೇನೆ. ಶಾಸಕರಲ್ಲಿ ಇರುವ ವೈಮನಸು ನಿವಾರಿಸುವತ್ತ ಹೈಕಮಾಂಡ್ ಗಮನ ಹರಿಸಬೇಕು. ಡಿ.ಕೆ.ಶಿವಕುಮಾರ ನಾವು ಒಟ್ಟಿಗೆ ರಾಜಕಾರಣ ಆರಂಭಿಸಿದ್ದೇವೆ. ಡಿಕೆಶಿ ನಮಗೂ ಆಪ್ತರೆ, ಹೈಕಮಾಂಡ್ ವಿರುದ್ಧ ಯಾರೂ ಹೋಗುವುದಿಲ್ಲ ಎಂದರು.ಕಾಂಗ್ರೆಸ್ಗೆ ತನ್ನದೆಯಾದ ಇತಿಹಾಸ ಇದೆ. ಆದರೆ, ಇದೀಗ ಕೆಲವರಿಗೆ ಸಚಿವ ಸ್ಥಾನ ನೀಡುತ್ತೀರಿ. ಅವರು ಹೇಳಿದವರಿಗೆ ಸ್ಥಾನ ನೀಡುತ್ತಿರಿ. ಹೀಗೆ ಮಾಡುವುದರಿಂದ ಪಕ್ಷಕ್ಕೆ ದಕ್ಕೆಉಂಟಾಗುತ್ತಿದೆ. ತಮ್ಮ ಹಿಂಬಾಲಕರಿಗೆ ಅಧಿಕಾರ ಕೊಡಿಸಲು ಷಡ್ಯಂತ್ರ ಮಾಡುತ್ತಾರೆ. ಕಾಂಗ್ರೆಸ್ಸಿಗರಿಂದಲೇ ಕಾಂಗ್ರೆಸ್ಗೆ ದಕ್ಕೆಯಾಗುತ್ತಿದೆ. ಇದು ಆಂತರಿಕ ಬೇಗುದಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಪಕ್ಷ ಗಮನ ಹರಿಸಬೇಕು. ಮೂಲ ಕಾಂಗ್ರೆಸ್ಸಿಗರಿಗೆ ಗೌರವ ಕೊಡುವ ಕೆಲಸವಾಗಬೇಕು. ಹಿರಿತನಕ್ಕೆ ತಕ್ಕಂತೆ ಸ್ಥಾನಮಾನ ಸಿಗದಿರುವುದು ನೋವಿನ ಸಂಗತಿ ಎಂದರು.
ಸಿದ್ರಾಮಯ್ಯನವರ ಕುರ್ಚಿ ಗಟ್ಟಿಯಾಗಿದೆ: