ಕುಷ್ಟಗಿ:
ತಾಲೂಕಿನ ಕ್ಯಾದಿಗುಪ್ಪ ಸರ್ಕಾರಿ ಪ್ರೌಢಶಾಲೆಗೆ ಕುಷ್ಟಗಿಯ ನಿವೃತ್ತ ಶಿಕ್ಷಕರಾದ ಬಸಯ್ಯ ಎಂ. ಗೋನಾಳಮಠ ಮಹಾನ್ ನಾಯಕರ ಹಾಗೂ ಸಾಧಕರ ಸ್ವಾತಂತ್ರ್ಯ ಹೋರಾಟಗಾರರ ಸುಮಾರು 26 ಜನರ ಫೋಟೋಗಳನ್ನು ಕೊಡುಗೆ ರೂಪದಲ್ಲಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ರಾಜೇಂದ್ರ ಸಿನ್ನೂರ, ಶಿಕ್ಷಕರಾದ ಬಸವರಾಜ ವಾಲಿಕಾರ, ಮಹಾಂತೇಶ ಹೊಸಮನಿ, ಎಸ್.ಎಸ್. ಅಂಗಡಿ, ಹನಮಂತಸಾ ರಾಯಭಾಗಿ, ಗೀತಾ ದೇವಾಂಗಮಠ, ಸುಧೀರ ಗೋನಾಳಮಠ ಅವರನ್ನು ಸನ್ಮಾನಿಸಲಾಯಿತು.