ರಾಮನಗರ: ನಗರದ ರೈಲ್ವೆ ನಿಲ್ದಾಣದ ಬಳಿಯಿಂದ ಚರ್ಚ್ವರೆಗಿನ ರಸ್ತೆ ವಿಸ್ತರಣೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿಪೂಜೆ ನೆರವೇರಿಸಿದರು.
ನಗರೋತ್ಥಾನ ಕೆಲಸ ನಡೆದಿರುವ ರೈಲ್ವೆ ನಿಲ್ದಾಣದಿಂದ ಚರ್ಚ್, ಹಳೇ ಸರ್ಕಾರಿ ಆಸ್ಪತ್ರೆ, ಬಾಲಗೇರಿಗೆ ಸಂಪರ್ಕಿಸುವ ರಸ್ತೆಗೆ ಸುಗಮ ಸಂಚಾರ ವ್ಯವಸ್ಥೆಗೆ ಈ ರಸ್ತೆ ನಿರ್ಮಾಣದಿಂದ ಅನುಕೂಲವಾಗುತ್ತದೆ ಎಂದ ಅವರು ಗುಣಮಟ್ಟದ ಕಾಮಗಾರಿ ಜೊತೆಗೆ ಕಾಂಕ್ರೀಟ್ ರಸ್ತೆಯನ್ನು ನೀರಿನಿಂದ ಕ್ಯೂರಿಂಗ್ ಮಾಡಿ ಎಂದು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು.
ಇದೇ ವೇಳೆ ನಗರದಲ್ಲಿ ಯುಐಡಿಎಫ್ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಈ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ನಗರಸಭೆ ಸದಸ್ಯರಾದ ಆಯಿಷಾಬಾನು, ಅಜ್ಮತ್ , ಅಣ್ಣು, ಮೋಹಿನ್ ಖುರೇಷಿ, ಜಯಲಕ್ಷ್ಮಮ್ಮ, ಬೈರೇಗೌಡ, ಆಯುಕ್ತ ಡಾ.ಜಯಣ್ಣ, ಎಇಇ ವಿಶ್ವನಾಥ್, ಎಂಜಿನಿಯರ್ ನಿರ್ಮಲಾ, ಹಿಂದುಳಿದ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜು, ಮುಖಂಡರಾದ ಗುರುಪ್ರಸಾದ್, ಜಗದೀಶ್, ರಶೀದ್, ಅನಿಲ್ ಜೋಗೇಂದರ್, ಶಫಿ, ಪ್ರಸನ್ನಕುಮಾರ್, ನರಸಿಂಹಯ್ಯ, ಶಿವಶಂಕರ್, ಚಲುವರಾಜು, ದಾಸ್, ಗುಡ್ಡೆವೆಂಕಟೇಶ್, ವಸೀಂ , ಇನಾಯತ್ , ಕುಮಾರ್ ಮತ್ತಿತರರು ಇದ್ದರು.14ಕೆಆರ್ ಎಂಎನ್ 3.ಜೆಪಿಜಿ