ರೂಹಾನಿ ಇಜ್ತಿಮಾ: ಖುದ್ದೂಸ್ ಸಾಹೆಬ್ ಈದ್ಗಾ ಮೈದಾನದಲ್ಲಿ ಗ್ರ್ಯಾಂಡ್ ಇಫ್ತಾರ್ ಸಂಗಮ

KannadaprabhaNewsNetwork |  
Published : Mar 22, 2025, 02:03 AM ISTUpdated : Mar 22, 2025, 04:33 AM IST
ಇಫ್ತಾರ್‌ ಸಂಗಮ | Kannada Prabha

ಸಾರಾಂಶ

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್, ಡಾ.ಅಬ್ದುಲ್ ಹಕೀಮ್ ಅಝ್ಹರಿ, ಎನ್.ಕೆ.ಎಂ ಶಾಫಿ ಸ‌ಅದಿ, ಜನಾಬ್ ಉಸ್ಮಾನ್ ಶರೀಪ್ ಸೇರಿದಂತೆ ಪ್ರಮುಖರು ಹಾಜರಿದ್ದರು.

ಬೆಂಗಳೂರು: ಸುನ್ನಿ ‌ಸಂಘಟನೆಗಳ ಅಧೀನದಲ್ಲಿ ಖುದ್ದೂಸಾಬ್ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ರೂಹಾನಿ ಇಜ್ತಿಮಾದ ಭಾಗವಾಗಿ ನಡೆದ ಗ್ರ್ಯಾಂಡ್ ಇಫ್ತಾರ್ ಸಂಗಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಜನರು ಭಾಗವಹಿಸಿದರು. 

ಇದು ಬೆಂಗಳೂರಿನ ಅತಿ ದೊಡ್ಡ ಇಫ್ತಾರ್ ಸಂಗಮದಲ್ಲೊಂದಾಗಿತ್ತು. ವಿವಿಧ ಮದರಸಾಗಳಿಂದ ತರಲಾದ ಸಿಹಿ ತಿಂಡಿಗಳ ಸಂಗ್ರಹವು ಇಫ್ತಾರನ್ನು ಹೆಚ್ಚು ಆಕರ್ಷಣೆಗೊಳಿಸಿತು. ಇಫ್ತಾರ್‌ನಲ್ಲಿ ಪ್ರಸಿದ್ಧ ವಿದ್ವಾಂಸ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್, ಡಾ.ಅಬ್ದುಲ್ ಹಕೀಮ್ ಅಝ್ಹರಿ, ಎನ್.ಕೆ.ಎಂ ಶಾಫಿ ಸ‌ಅದಿ, ಜನಾಬ್ ಉಸ್ಮಾನ್ ಶರೀಪ್ ಸೇರಿದಂತೆ ಪ್ರಮುಖರು ಹಾಜರಿದ್ದರು.ಆತ್ಮೀಯ ಸಂಘಮದ ಭಾಗವಾಗಿ ಸಂಜೆ ನಡೆದ ಫ್ಯಾಮಿಲಿ ಮೀಟ್‌ನಲ್ಲಿ ನೂರಾರು ಕುಟುಂಬಗಳು ಭಾಗವಹಿಸಿದ್ದವು. 

ಸೈಯ್ಯದ್ ಇಬ್ರಾಹಿಂ ಬಾಫಾಕಿ ಪ್ರಾರ್ಥನೆಯೊಂದಿಗೆ ಸಭೆಗೆ ಚಾಲನೆ ನೀಡಿದರು. ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಉದ್ಘಾಟಿಸಿದರು. ಫಾಝಿಲ್ ನೂರಾನಿ ಕ್ಯಾಲಿಕಟ್ ವಿಷಯ ಮಂಡಿಸಿದರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಎಸ್.ಎಂ.ಎ. ಅಧ್ಯಕ್ಷರಾದ ಹಕೀಮ್ ಆರ್.ಟಿ. ನಗರ, ಎಸ್.ಅಬ್ದುರ್ರಹ್ಮಾನ್ ಹಾಜಿ, ಅನಸ್ ಸಿದ್ದೀಕಿ ಮತ್ತು ಜಾಫರ್ ನೂರಾನಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!