ಚನ್ನಗಿರಿ: ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೂರಿಲ್ಲದ ಬಡವರ ನಿವೇಶನಗಳಿವೆ. ಆ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳುವಂತಹ ಬಡಜನರಿಗೆ ವೈಯಕ್ತಿಕವಾಗಿ ₹1.25 ಲಕ್ಷವನ್ನು ಉಚಿತವಾಗಿ ನೀಡುವುದಾಗಿ ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ನನ್ನ ವೈಯಕ್ತಿಕ ಹಣದಲ್ಲಿ ಮನೆಗಳನ್ನು ನಿರ್ಮಿಸಲು ಹಣ ನೀಡುತ್ತಿದ್ದೇನೆ. ಮನೆಗಳಿಲ್ಲದ ಬಡಜನರು ಸರ್ಕಾರದ ಮಾನದಂಡದಂತೆ ಅರ್ಜಿಗಳನ್ನು ಕಾಂಗ್ರೆಸ್ ಕಚೇರಿಗೆ ಸಲ್ಲಿಸಬೇಕು. ಮೊದಲು ಬರುವಂತಹ 100 ಅರ್ಜಿಗಳನ್ನು ಪರಿಶೀಲನೆ ನಡೆಸಿ, 3 ಹಂತಗಳಲ್ಲಿ ಹಣ ನೀಡಲಿದ್ದೇನೆ. ಮೊದಲ ಹಂತದಲ್ಲಿ ₹40 ಸಾವಿರ, 2ನೇ ಹಂತದಲ್ಲಿ ₹40 ಸಾವಿರ, ಮೂರನೇ ಹಂತದಲ್ಲಿ ₹45 ಸಾವಿರ ನೀಡುತ್ತೇನೆ ಎಂದರು.
ಈ ಯೋಜನೆ ಬಡವರ ಮೇಲಿರುವ ಅಭಿಮಾನಕ್ಕಾಗಿ ಮಾಡಿದ್ದೇನೆ. ಮೊದಲನೇ ಹಂತದಲ್ಲಿ ಮನೆಗಳನ್ನು ನಿರ್ಮಿಸುವ ಕೆಲಸ ಮುಗಿದ ನಂತರ ಎರಡನೇ ಹಂತವನ್ನು ಪ್ರಾರಂಭಿಸಲಾಗುವುದು ಎಂದರು.- - -
-5ಕೆಸಿಎನ್ಜಿ5: ಬಸವರಾಜು ಶಿವಗಂಗಾ.