ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೂರಿಲ್ಲದ ಬಡವರ ನಿವೇಶನಗಳಿವೆ. ಆ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳುವಂತಹ ಬಡಜನರಿಗೆ ವೈಯಕ್ತಿಕವಾಗಿ ₹1.25 ಲಕ್ಷವನ್ನು ಉಚಿತವಾಗಿ ನೀಡುವುದಾಗಿ ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದ್ದಾರೆ.
ಚನ್ನಗಿರಿ: ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೂರಿಲ್ಲದ ಬಡವರ ನಿವೇಶನಗಳಿವೆ. ಆ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳುವಂತಹ ಬಡಜನರಿಗೆ ವೈಯಕ್ತಿಕವಾಗಿ ₹1.25 ಲಕ್ಷವನ್ನು ಉಚಿತವಾಗಿ ನೀಡುವುದಾಗಿ ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 30 ತಿಂಗಳು ಕಳೆದಿವೆ. ಈ ಸಂದರ್ಭದಲ್ಲಿ ಸರ್ಕಾರ ಬಡವರಿಗೆ ಮನೆಗಳನ್ನು ಕೊಡುವ ವಿಚಾರದಲ್ಲಿ ಇನ್ನು ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಸರ್ಕಾರಕ್ಕೆ ಬಡವರ್ಗದ ಜನರ ಬಗ್ಗೆ ಬಹಳಷ್ಟು ಕಾಳಜಿ ಇದೆ. ಮುಂದಿನ 30 ತಿಂಗಳ ಅಧಿಕಾರದಲ್ಲಿ ಸರ್ಕಾರ ಬಡವರಿಗೆ ಮನೆಗಳನ್ನು ನೀಡುವಲ್ಲಿ ಮುಂದಾದರೆ ಆ ಯೋಜನೆ ಮುಂದುವರಿಸಿಕೊಡುತ್ತೇನೆ ಎಂದರು.
ನನ್ನ ವೈಯಕ್ತಿಕ ಹಣದಲ್ಲಿ ಮನೆಗಳನ್ನು ನಿರ್ಮಿಸಲು ಹಣ ನೀಡುತ್ತಿದ್ದೇನೆ. ಮನೆಗಳಿಲ್ಲದ ಬಡಜನರು ಸರ್ಕಾರದ ಮಾನದಂಡದಂತೆ ಅರ್ಜಿಗಳನ್ನು ಕಾಂಗ್ರೆಸ್ ಕಚೇರಿಗೆ ಸಲ್ಲಿಸಬೇಕು. ಮೊದಲು ಬರುವಂತಹ 100 ಅರ್ಜಿಗಳನ್ನು ಪರಿಶೀಲನೆ ನಡೆಸಿ, 3 ಹಂತಗಳಲ್ಲಿ ಹಣ ನೀಡಲಿದ್ದೇನೆ. ಮೊದಲ ಹಂತದಲ್ಲಿ ₹40 ಸಾವಿರ, 2ನೇ ಹಂತದಲ್ಲಿ ₹40 ಸಾವಿರ, ಮೂರನೇ ಹಂತದಲ್ಲಿ ₹45 ಸಾವಿರ ನೀಡುತ್ತೇನೆ ಎಂದರು.
ಈ ಯೋಜನೆ ಬಡವರ ಮೇಲಿರುವ ಅಭಿಮಾನಕ್ಕಾಗಿ ಮಾಡಿದ್ದೇನೆ. ಮೊದಲನೇ ಹಂತದಲ್ಲಿ ಮನೆಗಳನ್ನು ನಿರ್ಮಿಸುವ ಕೆಲಸ ಮುಗಿದ ನಂತರ ಎರಡನೇ ಹಂತವನ್ನು ಪ್ರಾರಂಭಿಸಲಾಗುವುದು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.