
ಸೋಮರಡ್ಡಿ ಅಳವಂಡಿ
ತನಿಖಾ ವರದಿಯಲ್ಲಿ ಪ್ರಶ್ನಿಸಲಾಗಿರುವ ವಿವಿಧ ವೆಚ್ಚಗಳ ಮೊತ್ತ ₹23,39,991 ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಎಸ್.ಎಚ್. ಅವರನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಾನತು ಆದೇಶ ಹೊರಡಿಸಿದ್ದು, ಪಿಡಿಒ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿದೆ. ತನಿಖೆಯಲ್ಲಿ ಬೆಳಕಿಗೆ ಬಂದ ಅಕ್ರಮಗಳ ಕುರಿತು ನೀಡಲಾದ ನೋಟಿಸ್ಗೆ ಸಮರ್ಪಕ ಉತ್ತರ ನೀಡದಿರುವುದರಿಂದ ಪಿಡಿಒ ನಾಗರಾಜ್ ಅಮಾನತ್ತು ಮಾಡಿ ತನಿಖೆ ಮುಂದುವರಿಸಲಾಗಿದೆ.₹23.40 ಲಕ್ಷ ವೆಚ್ಚ
ಇದೇ ರೀತಿ ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ₹1.50 ಲಕ್ಷ, ಮನೆ-ಮನೆ ಕಸ ಸಂಗ್ರಹಣೆಗೆ ಬುಟ್ಟಿಗಳಿಗೆ ₹1.20 ಲಕ್ಷ, ನೈರ್ಮಲೀಕರಣ ಸೇವೆಗೆ ₹1,09,284, ವಿಕಲಚೇತನರ ಕಲ್ಯಾಣ ಅನುದಾನದಿಂದ ₹84,415, ಗ್ರಂಥಾಲಯಕ್ಕೆ ₹70 ಸಾವಿರ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆಗೆ ₹67,443 ವೆಚ್ಚ ಮಾಡಿರುವುದು ತನಿಖೆಯಲ್ಲಿ ಉಲ್ಲೇಖವಾಗಿದೆ.
2022-23ರಲ್ಲಿ ಕುಡಿಯುವ ನೀರಿನ ಸಾಮಗ್ರಿ ಹಾಗೂ ಇತರ ವಸ್ತುಗಳ ಖರೀದಿಗೆ ಒಂದೇ ಏಜೆನ್ಸಿಗೆ ವಿವಿಧ ಹಂತಗಳಲ್ಲಿ ₹8,06,834 ಪಾವತಿಸಿರುವುದನ್ನೂ ತನಿಖೆಯಲ್ಲಿ ಪ್ರಶ್ನಿಸಲಾಗಿದೆ. ₹5,37,769, ₹61,304, ₹69,193, ₹99,891 ಹಾಗೂ ₹38,677 ಪಾವತಿ ಮಾಡಲಾಗಿದೆ. ಖರೀದಿ ಪ್ರಕ್ರಿಯೆಯಲ್ಲಿ ನಿಯಮ ಪಾಲನೆಯಾಗಿಲ್ಲ ಎನ್ನುವ ಆರೋಪ ಬಲವಾಗಿ ಕಂಡುಬಂದಿದೆ.
ಘನತ್ಯಾಜ್ಯ ವಿಲೇವಾರಿಗೆ ₹1.50 ಲಕ್ಷ ವೆಚ್ಚವಾಗಿದ್ದರೂ ಸುಮಾರು ಎಂಟು ತಿಂಗಳಿನಿಂದ ಮನೆ-ಮನೆ ಕಸ ಸಂಗ್ರಹಣೆ ನಡೆದಿಲ್ಲ. ತನಿಖಾ ತಂಡ ಭೇಟಿ ನೀಡಿದಾಗ ಕಸ ಸಂಗ್ರಹಣೆ ವಾಹನವೂ ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಲವು ಕಾಮಗಾರಿಗಳ ಬಿಲ್, ಛಾಯಾಚಿತ್ರ, ಅನುಮೋದನೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿರುವುದು ಮತ್ತೊಂದು ಪ್ರಮುಖ ಆರೋಪವಾಗಿದೆ. ನೋಟಿಸ್ಗೆ ಪಿಡಿಒ ಆ. 3ರಂದು ಲಿಖಿತ ಉತ್ತರ ನೀಡಿದ್ದರೂ ಸಮಜಾಯಿಷಿ ಸಮರ್ಪಕವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ.