ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಲೆಕ್ಕ-ಪತ್ರಗಳನ್ನು ಪ್ರಕಟಿಸಿ ಮಾತನಾಡಿ, ಸರ್ಕಾರ ಮೊದಲ ಹಂತದಲ್ಲಿ ೨೫ ಕೋಟಿ ರು., ಎರಡನೇ ಹಂತದಲ್ಲಿ ೫ ಕೋಟಿ ರು. ಅನುದಾನ ಬಿಡುಗಡೆ ಮಾಡಿತ್ತು. ಮಳಿಗೆಗಳು, ಪ್ರತಿನಿಧಿಗಳ ನೋಂದಣಿ ಶುಲ್ಕ, ಎಚ್ಆರ್ಎಂಎಸ್ ನೌಕರರನ್ನು ಹೊರತುಪಡಿಸಿದ ನೌಕರರ ಒಂದು ದಿನದ ವೇತನದ ದೇಣಿಗೆ ಹಾಗೂ ಇತರೆ ದೇಣಿಗೆ ಮೂಲಕ ೧.೨೦ ಕೋಟಿ ರು., ಖಜಾನೆ ವ್ಯಾಪ್ತಿಯ ಸರ್ಕಾರಿ ನೌಕಕರ ಒಂದು ದಿನದ ವೇತನ ದೇಣಿಗೆ ೧.೦೮ ಕೋಟಿ ರು., ಹಣ ಸಂಗ್ರಹವಾಗಿದ್ದಾಗಿ ಹೇಳಿದರು.
ಸಮ್ಮೇಳನಕ್ಕೆ ರಚಿಸಲಾಗಿದ್ದ ೨೮ ಸಮಿತಿಗಳು ೨೯.೬೫ ಕೋಟಿ ರು. ಹಣವನ್ನು ವೆಚ್ಚ ಮಾಡಿದ್ದು, ಇದರಲ್ಲಿ ಸಮ್ಮೇಳನಕ್ಕೆ ವಾಸ್ತವವಾಗಿ ಭರಿಸಿದ ವೆಚ್ಚ ೨೫.೩೯ ಕೋಟಿ ರು., ಜಿಎಸ್ಟಿ ಮೊತ್ತ ೩.೧೭ ಕೋಟಿ ರು., ಕೆಎಸ್ಎಂಸಿಎ ಮೊತ್ತ ೧.೦೮ ಕೋಟಿ ರುಗಳಾಗಿದೆ ಎಂದು ವಿವರಣೆ ನೀಡಿದರು.ಕೈಗಾರಿಕಾ ಘಟಕಗಳು ಮತ್ತು ವಿವಿಧ ಸಂಘ-ಸಂಸ್ಥೆಗಳಿಂದ ದೇಣಿಗೆ ಹೊರತುಪಡಿಸಿ ಸಂಸ್ಥೆಯವರೇ ಪ್ರಾಯೋಜಕತ್ವ ವಹಿಸಿಕೊಂಡಿದ್ದು, ಜಿಲ್ಲಾಡಳಿತದಿಂದ ಯಾವುದೇ ಹಣವನ್ನು ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಾಧುಕೋಕಿಲ ಮತ್ತು ರಾಜೇಶ್ ಕೃಷ್ಣನ್ ತಂಡ ನಡೆಸಿಕೊಟ್ಟ ನುಡಿಜಾತ್ರೆಯ ಸ್ವರ ಯಾತ್ರೆ ತಂಡಕ್ಕೆ ಕೆಎಂಎಫ್, ಮನ್ಮುಲ್, ಸ್ಥಳೀಯ ಪತ್ರಿಕೆಗಳಿಗೆ ಸಮ್ಮೇಳನದ ಜಾಹೀರಾತು ವ್ಯವಸ್ಥೆಯನ್ನು ಮೈಷುಗರ್ ಕಾರ್ಖಾನೆ, ನುಡಿಜಾತ್ರೆಯ ಸ್ವರಯಾತ್ರೆ ಅರ್ಜುನ್ ಜನ್ಯ ಮತ್ತು ತಂಡಕ್ಕೆ ಶ್ರೀರಂಗಪಟ್ಟಣದ ಎಂ.ಕೆ.ಆಗ್ರೋಟೆಕ್ ಲಿಮಿಟೆಡ್, ಗೆಜ್ಜಲಗೆರೆಯ ಶಾಹಿ ಎಕ್ಸ್ಪೋರ್ಟ್ ಹಾಗೂ ಎನ್ಎಸ್ಎಲ್ ಷುಗರ್ ಕಾರ್ಖಾನೆ ವಹಿಸಿಕೊಂಡಿದ್ದವು. ಆತಗೂರು ಶಾಸನ, ಕಮಾನು ನಿರ್ಮಾಣಕ್ಕೆ ವಿವಿಧ ಬ್ಯಾಂಕ್ಗಳು ಹಾಗೂ ಕೈಗಾರಿಕೆಗಳು ಹಣ ಪಾವತಿಸಿದ್ದಾಗಿ ಹೇಳಿದರು.
ವೇದಿಕೆ ನಿರ್ಮಾಣ ಸಮಿತಿ ೭,೨೦,೩೩,೭೬೫ ರು., ವೇದಿಕೆ ನಿರ್ವಹಣಾ ಸಮಿತಿ, ೪,೫೦,೩೦೦ ರು., ವಸತಿ ಸಮಿತಿ- ೧,೬೨,೦೭,೦೬೧ ರು., ಆಹಾರ ಸಮಿತಿ- ೬,೧೧,೯೦,೧೮೮ ರು., ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿ-೨೮,೨೪,೮೨೩ ರು., ಕುಡಿಯುವ ನೀರು ಸಮಿತಿ-೪೦,೩೫,೨೮೨ ರು., ಧ್ವಜ ನಿರ್ವಹಣಾ ಸಮಿತಿ-೮೦,೭೧೦ ರು., ನಗರ ಅಲಂಕಾರ ಸಮಿತಿ-೬೦,೫೨, ೮೦೦ ರು., ಪ್ರಚಾರ ಸಮಿತಿ-೧,೦೭,೮೮,೧೨೦ ರು., ಮಾಧ್ಯಮ ಸಮನ್ವಯ ಸಮಿತಿ-೮೦,೭೦,೭೯೦ ರು., ಸಾಂಸ್ಕೃತಿಕ ಸಮಿತಿ-೬೬,೫೩,೬೯೬ ರು., ಮೆರವಣಿಗೆ ಸಮಿತಿ-೫೯,೯೭,೯೮೬ ರು., ಸ್ಮರಣಿಕೆ ಸಮಿತಿ-೨೫,೯೯,೪೯೪ ರು., ಪುಸ್ತಕ ಸಮಿತಿ-೨೪,೨೦,೩೦೮ ರು., ಸ್ಮರಣ ಸಂಚಿಕೆ ಸಮಿತಿ-೧೬,೧೩,೯೮೪ ರು., ಪಾಸ್ ಮತ್ತು ಬ್ಯಾಡ್ಜ್ ಸಮಿತಿ-೮,೦೭,೦೮೦ ರು., ಮಹಿಳಾ ಸಮಿತಿ-೨,೪೦,೫೪೫ ರು., ಸ್ವಯಂಸೇವಕರು ಮತ್ತು ಉಸ್ತುವಾರಿ ಸಮಿತಿ-೧೧,೧೦,೦೦೦ ರು., ಸಾರಿಗೆ ಸಮಿತಿ-೭೮,೮೩,೬೫೮ ರು., ವಸ್ತು ಪ್ರದರ್ಶನ ಸಮಿತಿ-೪,೦೨,೫೪೩ ರು., ನೋಂದಣಿ ಸಮಿತಿ-೫೨,೪೦,೭೭೧ ರು., ಸಮ್ಮೇಳನ ಜಾಗದ ಪೂರ್ವಭಾವಿ ಹಾಗೂ ಯಥಾಸ್ಥಿತಿಗೊಳಿಸುವ ಕಾಮಗಾರಿ ವೆಚ್ಚ-೨೮,೦೩,೭೭೮ ರು., ಸಾಹಿತ್ಯ ಸಮ್ಮೇಳನ ಕಚೇರಿ ನವೀಕರಣ-೧,೫೦,೦೦೦ ರು., ಕಚೇರಿ ವೆಚ್ಚ-೪,೦೧,೭೮೫ ರು., ಕನ್ನಡ ಜ್ಯೋತಿ ರಥ ನಿರ್ವಹಣಾ ಸಮಿತಿ-೩೪,೭೦,೫೪೦ ರು., ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ಆಸನ ವ್ಯವಸ್ಥೆ-೫೩,೭೦,೦೦೦ ರು., ಕನ್ನಡ ಸಾಹಿತ್ಯ ಪರಿಷತ್ತಿನ ಪಾರಂಪರಿಕ ಚಟುವಟಿಕೆಗಳ ವೆಚ್ಚ-೨,೫೦,೦೦,೦೦೦ ರು. ವೆಚ್ಚ ಮಾಡಿರುವುದಾಗಿ ಹೇಳಿದರು.
ಸಮ್ಮೇಳನದ ಲೆಕ್ಕಪತ್ರ ನೀಡುವುದಕ್ಕೆ ವಿಳಂಬವಾಗಿಲ್ಲ. ಸಮ್ಮೇಳನದ ಸಂಪೂರ್ಣ ವೆಚ್ಚವನ್ನು ಭರಿಸಿದ ನಂತರ ಲೆಕ್ಕಪತ್ರವನ್ನು ಮಂಡಿಸಬೇಕು. ಆರ್ಥಿಕ ವರ್ಷಾಂತ್ಯದ ತಿಂಗಳಲ್ಲಿ ಎಲ್ಲಾ ಬಿಲ್ಲುಗಳನ್ನು ಖಜಾನೆಗೆ ನೀಡಬೇಕಿದ್ದು, ಮಾ.೨೮ಕ್ಕೆ ಬಿಲ್ಲುಗಳ ಸಲ್ಲಿಕೆ ಕಾರ್ಯ ಅಂತಿಮಗೊಂಡಿದೆ. ಹೀಗಾಗಿ ಲೆಕ್ಕಪತ್ರ ನೀಡಲು ವಿಳಂಬವಾಗಿಲ್ಲ ಎಂಬುದನ್ನು ಜಿಲ್ಲಾಧಿಕಾರಿ ಡಾ.ಮಾರ ಸ್ಪಷ್ಟಪಡಿಸಿದರು.
ಟೀಕೆಗಳಿಗೆಲ್ಲಾ ಹೆದರುವ ಅಗತ್ಯವಿಲ್ಲ. ತಪ್ಪು ಮಾಡಿದ್ದರೆ ಹೆದರಬೇಕಿತ್ತು. ಪಾರದರ್ಶಕವಾಗಿ ಲೆಕ್ಕ-ಪತ್ರ ಮಂಡಿಸಲಾಗಿದೆ. ಸರ್ಕಾರದ ನಿಯಮಾನುಸಾರವಾಗಿಯೇ ಪ್ರಕ್ರಿಯೆಗಳನ್ನು ನಡೆಸಬೇಕು. ಸಾರ್ವಜನಿಕರ ಹಣ ಖರ್ಚು ಮಾಡುವಾಗ ಜವಾಬ್ದಾರಿಯುತವಾಗಿರಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಉಳಿಕೆ ಹಣ ೨.೫೩ ಕೋಟಿ ರು. ಹಣದ ಜೊತೆಗೆ ೨ ಕೋಟಿ ರು. ಸೇರಿಸಿ ಕನ್ನಡ ಭವನವನ್ನು ನಿರ್ಮಾಣ ಮಾಡಲಾಗುವುದು. ಭವನ ನಿರ್ಮಾಣಕ್ಕೆ ಈಗಾಗಲೇ ಚಿಕ್ಕಮಂಡ್ಯದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಆದಷ್ಟು ಬೇಗ ಸ್ಥಳ ಅಂತಿಮಗೊಳಿಸುವುದು ಎಂದರು.ಮಹೇಶ್ ಜೋಶಿ ಲೆಕ್ಕ ಬಾಕಿ
ಮಂಡ್ಯಕ್ಕೆ ಬರುವುದಕ್ಕೆ ಜೋಶಿ ಅವರಿಗೆ ಯಾವ ಭಯವೇನೂ ಇಲ್ಲ. ಅವರನ್ನು ಭಯಪಡಿಸುವವರು ಇಲ್ಲಿ ಯಾರೂ ಇಲ್ಲ. ಒಮ್ಮೆ ಪೊಲೀಸ್ ಭದ್ರತೆ ಕೇಳಿದರೆ ದೊರಕಿಸಲಾಗುವುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಸ್ಮರಣ ಸಂಚಿಕೆಯನ್ನು ಆದಷ್ಟು ಬೇಗ ಬಿಡುಗಡೆಗೊಳಿಸುವುದಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ನುಡಿದರು.