ಕನ್ನಡಪ್ರಭ ವಾರ್ತೆ ಚವಡಾಪುರ
ಹಾವಳಗಾ ಹಾಗೂ ಶಿವಪುರ ಗ್ರಾಮಗಳ ಖಾಸಗಿ ಹಾಗೂ ಸರ್ಕಾರಿ ಜಾಗಗಳಲ್ಲಿ ಅಂದಾಜು 1870 ಟ್ರ್ಯಾಕ್ಟರ್ನಷ್ಟು ಮರಳು ಸುಮಾರು 37.40 ಲಕ್ಷ ಮೌಲ್ಯದ ಮರಳನ್ನು ಜಪ್ತಿ ಮಾಡಲಾಗಿದ್ದು 15 ಜನರ ಮೇಲೆ 5 ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪಿಎಸ್ಐ ಮಹಿಬೂಬ ಅಲಿ ತಿಳಿಸಿದ್ದಾರೆ. ತಾಲೂಕಿನಾದ್ಯಂತ ಭೀಮಾ ನದಿಯಿಂದ ಎಲ್ಲೇಲ್ಲಿ ಮರಳು ಧಂದೆ ನಡೆಯುತ್ತಿದೆ ಎಂದು ಖಚಿತ ಮಾಹಿತಿ ಪಡೆದು ಎಲ್ಲಾ ಕಡೆ ದಾಳಿ ಮಾಡಲಾಗುತ್ತಿದೆ. ಅಕ್ರಮ ಮರಳು ಧಂದೆಯಲ್ಲಿ ಯಾರೇ ಭಾಗಿಯಾಗಿದ್ದರು ಬಿಡುವುದಿಲ್ಲ, ಮರಳು ಜಪ್ತಿ ಮಾಡಿ ಮರಳು ಧಂದೆಯಲ್ಲಿ ಭಾಗಿಯಾಗಿದ್ದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.