ವಿಜಯ ದಶಮಿ ಉತ್ಸವ, ಸಾವಿರಾರು ಗಣವೇಷಧಾರಿಗಳು ಭಾಗಿಕನ್ನಡಪ್ರಭ ವಾರ್ತೆ ಕಾರವಾರ
ಹಿಂದು ಹೈಸ್ಕೂಲಿನಿಂದ ಆರಂಭವಾದ ಪಥ ಸಂಚಲನ ಗೀತಾಂಜಲಿ ಚಿತ್ರಮಂದಿರ, ಸವಿತಾ ವೃತ್ತ, ಮಾರುತಿ ಗಲ್ಲಿ, ಗ್ರೀನಸ್ಟ್ರೀಟ್, ಪಿಕಳೆ ರಸ್ತೆ, ಕಾಲರುದ್ರೇಶ್ವರ ದೇವಾಲಯ ರಸ್ತೆ, ಕೆಂಚಾ ರಸ್ತೆ, ಕಾಜುಬಾಗ, ಶಂಕರ ಮಠ ರಸ್ತೆ, ಹಬ್ಬುವಾಡ ರಸ್ತೆ ಮೂಲಕ ಹಿಂದು ಹೈಸ್ಕೂಲ್ ಮೈದಾನದಲ್ಲಿ ಸಮಾರೋಪಗೊಂಡಿತು.
ಸಮವಸ್ತ್ರ ಧರಿಸಿ ಶಿಸ್ತಿನಿಂದ ಹೆಜ್ಜೆ ಹಾಕಿದ ಗಣವೇಷಧಾರಿಗಳು ಗಮನ ಸೆಳೆದರು. ಅಭೂತಪೂರ್ವ ಪಥ ಸಂಚಲನದಲ್ಲಿ ಕಾರವಾರ ತಾಲೂಕಿನ ಗ್ರಾಮೀಣ ಭಾಗದಿಂದಲೂ ಸಾಕಷ್ಟು ಜನರು ಪಾಲ್ಗೊಂಡಿದ್ದರು. ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಈ ಸಂದರ್ಭ ಆರ್ಎಸ್ಎಸ್ನ ಕರ್ನಾಟಕ ಪ್ರಾಂತದ ಜೇಷ್ಠ ಪ್ರಚಾರಕ ಸು.ರಾಮಣ್ಣ, ನಾವೆಲ್ಲರೂ ಹಿಂದು, ನಾವೆಲ್ಲರೂ ಬಂಧು, ನಾವೆಲ್ಲರೂ ಒಂದು ಎಂದು ಘೋಷಿಸಿದರು.
ಪಥ ಸಂಚಲನದಲ್ಲಿ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಅಶೋಕ ಪೈ, ನಾಗರಾಜ ನಾಯಕ, ಪರ್ಬತ್ ನಾಯ್ಕ, ಶಿವಾನಂದ ಶಾನಭಾಗ ಮತ್ತಿತರರು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವೇ. ಚಂದ್ರಶೇಖರ ಅಡಿಮೂಳೆ ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಅತಿದೊಡ್ಡ ಕಾರ್ಯ ಮಾಡುತ್ತಿದೆ ಎಂದರು. ಗೋಕರ್ಣ ಮಂಡಲದ ಸಂಘದ ಸಂಚಾಲಕ ಗೋವಿಂದ ಕೆಸನ್ಮನೆ ವೇದಿಕೆಯಲ್ಲಿದ್ದರು. ವಿದ್ವಾನ ಗಣೇಶ್ವರ ದೀಕ್ಷಿತ ಸ್ವಾಗತಿಸಿದರು. ವಿದ್ವಾನ ಶ್ರೀನಾಗ ಅಡಿಮೂಳೆ ವಂದಿಸಿದರು.ಸ್ವಯಂ ಸೇವಕರಾದ ವೇ. ಉದಯ ಮಯ್ಯರ್, ಕುಮಾರ ಮಾರ್ಕಾಂಡೆ, ಗಣಪತಿ ಅಡಿ, ನಾಗೇಶ ಗೌಡ, ಮಹೇಶ ಶೆಟ್ಟಿ, ಸತೀಶ ದೇಶಭಂಡಾರಿ, ಡಾ. ಶೀಲಾ ಹೊಸ್ಮನೆ, ನಿರ್ಮಾಲಾ ಮಾರ್ಕಾಂಡೆ, ಉಷಾ ಪ್ರಸಾದ, ಕಾರ್ತಿಕ ಅಡಿ, ರಮೇಶ ಗೌಡ, ಪ್ರಭಾಕರ ಪ್ರಸಾದ, ನಿತ್ಯಾನಂದ ಶೆಟ್ಟಿ, ರಾಮೆಶ್ವರ ಕುರ್ಲೆ ಮತ್ತಿತರರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.