ರನ್ ದಿ ಕೋಸ್ಟ್-೨೦೨೬ ಹಾಫ್ ಮ್ಯಾರಥಾನ್ ಸಂಪನ್ನ

KannadaprabhaNewsNetwork |  
Published : Mar 03, 2026, 02:15 AM IST
ಫೋಟೋ : ೧ಕೆಎಂಟಿ_ಎಂಎಆರ್_ಕೆಪಿ೧ : ರನ್ ದಿ ಕೋಸ್ಟ್-೨೦೨೬ ಹಾಫ್ ಮ್ಯಾರಥಾನ್‌ನಲ್ಲಿ ವಿಜೇತರೊಂದಿಗೆ ರೋಟರಿ ಗಣ್ಯರು. ಶಶಿಭೂಷಣ ಹೆಗಡೆ, ಡಾ.ನಮಿತಾ ಸಾರಂಗ ಇತರರು ಇದ್ದರು.   | Kannada Prabha

ಸಾರಾಂಶ

ಆರೋಗ್ಯ ಹಾಗೂ ದೇಹದಾರ್ಡ್ಯತೆ ಜಾಗೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇಲ್ಲಿನ ರೋಟರಿ ಕ್ಲಬ್ ಹಾಗೂ ಹೆಲ್ತ್ ಪಾಯಿಂಟ್ ಜಿಮ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರನ್ ದಿ ಕೋಸ್ಟ್-೨೦೨೬ ಹಾಫ್ ಮ್ಯಾರಥಾನ್ ಓಟಗಳ ಉತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಕುಮಟಾ

ಆರೋಗ್ಯ ಹಾಗೂ ದೇಹದಾರ್ಡ್ಯತೆ ಜಾಗೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇಲ್ಲಿನ ರೋಟರಿ ಕ್ಲಬ್ ಹಾಗೂ ಹೆಲ್ತ್ ಪಾಯಿಂಟ್ ಜಿಮ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರನ್ ದಿ ಕೋಸ್ಟ್-೨೦೨೬ ಹಾಫ್ ಮ್ಯಾರಥಾನ್ ಓಟಗಳ ಉತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕೋರ್ಟ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಆರಂಭಗೊಂಡ ಮ್ಯಾರಥಾನ್ ಓಟಗಳ ಉತ್ಸವದಲ್ಲಿ ಮೊದಲಿಗೆ ೨೧ ಕಿಮೀ ಓಟ, ನಂತರ ೧೨ ಕಿಮೀ ಓಟ ಹಾಗೂ ಕೆಲ ನಿಮಿಷಗಳ ಅಂತರದಲ್ಲಿ ೫ ಕಿಮೀ ಸೌಹಾರ್ದ ಓಟ(ಫನ್ ರನ್) ಪ್ರಾರಂಭಿಸಲಾಯಿತು. ಓಟದ ಉದ್ದಕ್ಕೂ ಮಾರ್ಗದರ್ಶನ, ಲಘು ಉಪಚಾರ ಹಾಗೂ ಇತರ ವ್ಯವಸ್ಥೆ ಕಲ್ಪಿಸಲಾಗಿತ್ತು.

ಶ್ರೀಲಂಕಾದಲ್ಲಿ ಐರನ್‌ಮ್ಯಾನ್ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದ ಶಿರಸಿಯ ಶಶಿಭೂಷಣ ಹೆಗಡೆ ಇಲ್ಲಿಯೂ ಮುಖ್ಯ ಅತಿಥಿಯಾಗಿ ಭಾಗವಹಿಸಿ, ನಮ್ಮ ಕರಾವಳಿ ತೀರದಲ್ಲಿ ಮುಂದಿನ ವರ್ಷಗಳಲ್ಲಿ ಐಎಎಫ್ ಪ್ರಮಾಣಿತ ಪೂರ್ಣ ಮ್ಯಾರಥಾನ್ ಆಯೋಜಿಸಬೇಕು. ಕುಮಟಾದಲ್ಲಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳ ನಿರ್ಮಾಣಕ್ಕಾಗಿ ಶಾಸಕರು ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು ಎಂದರು.

ಮ್ಯಾರಥಾನ್‌ಗೆ ಚಾಲನೆ ನೀಡಿದ ಶಾಸಕ ದಿನಕರ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿ, ಕ್ಷೇತ್ರದಲ್ಲಿ ಕ್ರೀಡಾ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. ಕ್ರೀಡಾಂಗಣದಂತಹ ಹೆಚ್ಚಿನ ಸೌಲಭ್ಯ ಒದಗಿಸಲು ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತನಾಗಿದ್ದೇನೆ ಎಂದರು. ೫ ಕಿಮೀ ಸೌಹಾರ್ದ ಓಟದಲ್ಲಿ ಸ್ವತಃ ಪಾಲ್ಗೊಂಡು ಪೂರ್ಣಗೊಳಿಸಿದರು. ಡಾ. ಜಿ.ಡಿ. ಭಟ್, ಡಾ. ನಮಿತಾ ಸಾರಂಗ, ಅನಿಲ್ ನಾಯ್ಕ, ರೋಟರಿ ಕಾರ್ಯದರ್ಶಿ ನಿಖಿಲ್ ಕ್ಷೇತ್ರಪಾಲ, ಖಜಾಂಚಿ ಗುರುಪ್ರಸಾದ ಕಾಮತ ಇತರರು ಇದ್ದರು.

ರೋಟರಿ ಅಧ್ಯಕ್ಷ ಕಿರಣ ನಾಯಕ ಸ್ವಾಗತಿಸಿ, ರೋಟರಿ ಮತ್ತು ಹೆಲ್ತ್ ಪಾಯಿಂಟ್ ಸಂಸ್ಥೆಗಳ ಸುವರ್ಣ ಹಾಗೂ ರಜತ ಮಹೋತ್ಸವದ ಹಿನ್ನೆಲೆ ಮುಂದಿನ ವರ್ಷ ಪೂರ್ಣ ಪ್ರಮಾಣದ ಮ್ಯಾರಥಾನ್ ಆಯೋಜಿಸುವುದಾಗಿ ಘೋಷಿಸಿದರು. ವೈಟ್ ಹೆವನ್ ಬೀಚ್ ರೆಸಾರ್ಟ್‌ನಲ್ಲಿ ಬಹುಮಾನ ವಿತರಣೆ ವೇಳೆ ರೋಟರಿ ಅಸಿಸ್ಟಂಟ್ ಗವರ್ನರ್ ಚೇತನ್ ಶೇಟ್, ಮಹೇಶ್ ಕಲ್ಯಾಣಪುರ ಇತರರು ಇದ್ದರು. ಯೋಗೀಶ ಕೋಡ್ಕಣಿ ನಿರೂಪಿಸಿದರು.

೨೧ ಕಿಮೀ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಆಕಾಶ ನಾಯ್ಕ ಹಾಗೂ ಗಣಪತಿ ಮಲ್ಲಿಕ್ ಪ್ರಥಮ ಸ್ಥಾನ ಹಂಚಿಕೊಂಡರು. ಜಯಂತ ಪಟಗಾರ ಶಿರಸಿ ಮತ್ತು ಸಂದೀಪ ಪೂಜಾರಿ ದ್ವಿತೀಯ, ದರ್ಶನ ನಾಯ್ಕ ಹಾಗೂ ದಿಲೀಪ ನಾಯ್ಕ ತೃತೀಯ ಸ್ಥಾನದೊಂದಿಗೆ ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಸೌಮ್ಯಾ ಕಾರವಾರ ಪ್ರಥಮ ಸ್ಥಾನ, ಸುಪ್ರಿಯಾ ಕುಮಟಾ ದ್ವಿತೀಯ ಸ್ಥಾನ ಮತ್ತು ಮಧುಶ್ರೀ ಕುಮಟಾ ತೃತೀಯ ಸ್ಥಾನದೊಂದಿಗೆ ಬಹುಮಾನ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಧರ್ಮದ ಶ್ರೇಷ್ಠತೆ ಸಾರಿದ ರೇಣುಕಾಚಾರ್ಯರು: ಟಿ.ಎಂ. ಶಿವಕುಮಾರ್
ಮಾ. 3ರಂದು ಕುರುಗೋಡು ದೊಡ್ಡ ಬಸವೇಶ್ವರ ಮಹಾ ರಥೋತ್ಸವ