ಮದ್ದೂರು:
ತಾಲೂಕಿನ ಅರೆತಿಪ್ಪೂರು ಗ್ರಾಮದ ಡಿ.ವಿ.ಅಸ್ಮಿತಾ (18)ಗೆ ಸಿ.ಎ.ಕೆರೆ ಹೋಬಳಿ ನಾಡ ಕಚೇರಿ ಶಿರಸ್ತೇದಾರ್ ಶಿವಲಿಂಗಯ್ಯ ವಿರುದ್ಧ ಸಾರ್ವಜನಿಕ ಅಹವಾಲು ಸ್ವೀಕಾರದ ವೇಳೆ ದೂರು ನೀಡಿದ್ದಾಳೆ.
ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡಿರುವ ಅಸ್ಮಿತಾಳ ತಾಯಿ ಒಂದು ವರ್ಷದ ಮಗುವಾಗಿದ್ದಾಗ ಮೃತಪಟ್ಟಿದ್ದರು. ನಂತರ ಈಕೆಯ ತಂದೆ ಸಹ ಆರು ತಿಂಗಳ ಹಿಂದೆ ಅಸುನೀಗಿದ್ದರು. ತಂದೆ ತಾಯಿ ಮೃತಪಟ್ಟ ನಂತರ ಅಜ್ಜಿ ಆರೈಕೆಯಲ್ಲಿ ಬೆಳೆದು, ವ್ಯಾಸಂಗ ಮಾಡಿದ್ದಾಳೆ.ತಂದೆ ಮರಣಾನಂತರ ಬಾಲಕಿಗೆ ಕೂಳಗೆರೆ ಗ್ರಾಮದಲ್ಲಿ ಸರ್ವೇ ನಂ.194/1 ಮತ್ತು 195/1 ಹೆಸರಿನಲ್ಲಿ ಜಮೀನು ಇತ್ತು. ಈ ಜಮೀನನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡುವಂತೆ ಅಸ್ಮಿತಾ ಆರ್ಐ ಮತ್ತು ವಿಎಗಳಿಗೆ ಅರ್ಜಿ ಸಲ್ಲಿಸಿದ್ದರು. ಒಂದು ವರ್ಷ ಆದರೂ ಸಹ ಆರ್ಐ ಮತ್ತು ವಿಎ ಸಬೂಬು ಹೇಳುತ್ತಾ ಈಕೆಯ ಹೆಸರಿಗೆ ಖಾತೆ ಮಾಡದೆ ಅಲೆದಾಡಿಸುತ್ತಿದ್ದರು.
ಇದರಿಂದ ಸಿಟ್ಟಿಗೆದ್ದ ಲೋಕಾಯುಕ್ತ ಡಿವೈಎಸ್ಪಿ ರವಿಕುಮಾರ್ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಬೆವರು ಇಳಿಸಿದರು. ಇನ್ನು ಒಂದು ತಿಂಗಳೊಳಗೆ ಈಕೆ ಹೆಸರಿಗೆ ಖಾತೆ ಮಾಡಿಕೊಡದಿದ್ದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.