ಕನ್ನಡಪ್ರಭ ವಾರ್ತೆ ಮಂಗಳೂರು
ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವ ಹಾಗೂ ಕೆನರಾ ವಿದ್ಯಾ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಸಾಹಿತ್ಯಾಸಕ್ತರ ಒಗ್ಗೂಡುವಿಕೆಯಲ್ಲಿ ನಗರದ ಡೊಂಗರಕೇರಿ ಕೆನರಾ ವಿದ್ಯಾಸಂಸ್ಥೆಯ ಭುವನೇಂದ್ರ ಸಭಾಭವನದಲ್ಲಿ ಎಸ್.ಎಲ್. ಭೈರಪ್ಪ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ನುಡಿನಮನ ಸಲ್ಲಿಸಿ, ರಾಷ್ಟ್ರೀಯ ಚಿಂತನೆಯುಳ್ಳ ಸಾಹಿತಿಯಾಗಿದ್ದ ಭೈರಪ್ಪ ಸಾಹಿತ್ಯ ಲೋಕದ ಧ್ರುವ ತಾರೆ ಎಂದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಶ್ರದ್ಧಾಂಜಲಿ ಸಲ್ಲಿಸಿ, ಎಂದಿನವರೆಗೆ ಭೈರಪ್ಪ ಅವರ ಕೃತಿಗಳು ಇರುತ್ತವೆಯೋ ಅಲ್ಲಿಯವರೆಗೂ ಅವರು ನಮ್ಮೊಂದಿಗೆ ಇರುವರಲ್ಲದೆ, ಅನುವಾದಗೊಂಡಿರುವ ಕೃತಿಗಳು ಇರುವಷ್ಟು ಕಾಲ ಆಯಾ ಭಾಷೆಗಳ ಓದುಗರ ಮನದಲ್ಲಿ ಭೈರಪ್ಪ ಶಾಶ್ವತವಾಗಿ ಉಳಿಯುವರು ಎಂದರು.
ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವನೆಗೈದು, ಸಾಹಿತಿ ಭೈರಪ್ಪನವರು ದೇಶ ಕಂಡ ಓರ್ವ ಶ್ರೇಷ್ಠ ಹಾಗೂ ಧೀಮಂತ ಸಾಹಿತಿಯಾಗಿದ್ದರು, ಅವರು ಅನೇಕ ಬಾರಿ ಮಂಗಳೂರಿಗೆ ಭೇಟಿ ನೀಡಿದ್ದಾರೆ ಎಂದು ಸ್ಮರಿಸಿದರು.
ಉಜ್ವಲ್ ಮಲ್ಯ ಮತ್ತು ದಯಾನಂದ ಕಟೀಲ್ ಸಂಯೋಜಿಸಿದ ಕಾರ್ಯಕ್ರಮವನ್ನು ನಾಗೇಂದ್ರ ಶೆಣೈ ನಿರೂಪಿಸಿದರು. ಡಾ.ಪ್ರತಿಭಾ ರೈ, ರಚನಾ ಕಾಮತ್ ಬಳಗ ಗಾನ ನಮನ ಸಲ್ಲಿಸಿದರು, ವೇ.ಮೂ. ಡಾ. ಪ್ರಭಾಕರ ಅಡಿಗ ವೇದ ನಮನ ಸಲ್ಲಿಸಿದರು. ಭಾಸ್ಕರ್ ರೈ ಕುಕ್ಕುವಳ್ಳಿ ವಂದಿಸಿದರು. ಸಾಹಿತ್ಯ ಕೇಂದ್ರದ ರತ್ನಾಕರ ಕುಳಾಯಿ ಅವರು ಎಸ್.ಎಲ್ ಭೈರಪ್ಪ ಅವರ ಎಲ್ಲ ಕೃತಿಗಳ ಪ್ರದರ್ಶನ ವ್ಯವಸ್ಥೆ ಮಾಡಿದ್ದರು.