ಕೇಸರಿ, ಹಿಂದುತ್ವ ಎಂದರೆ ಕಾಂಗ್ರೆಸ್‌ಗೆ ಅಲರ್ಜಿ: ಎಂ.ಪಿ.ರೇಣುಕಾಚಾರ್ಯ

KannadaprabhaNewsNetwork |  
Published : Aug 24, 2025, 02:00 AM IST
ಹೊನ್ನಾಳಿ ಫೋಟೋ 23 ಎಚ್.ಎಲ್.ಐ1.ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಮಂಜುನಾಥ ಸ್ವಾಮಿ, ಹಾಗೂ ಅಲ್ಲಿನ ಧರ್ಮಾಧಿಕಾರಿಗಳ ವಿರುದ್ಧ ಅಪ ಪ್ರಚಾರ ಮಾಡುತ್ತಿರುವವರ ವಿರುದ್ಧ ಸರ್ಕಾರ ಕೂಡಲೇ   ಕಾನೂನು ಕ್ರಮ ಜರುಗಿಸಬೇಕೆಂದು ಅಗ್ರಹಿಸಿ ಶನಿವಾರ  ಬೃಹತ್ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಕಾಂಗ್ರೇಸ್ ನವರಿಗೆ ಕೇಸರಿ, ಹಿಂದುತ್ವ, ಹಿಂದು ದೇವಸ್ಥಾನಗಳೆಂದರೆ ಆಲರ್ಜಿ, ಬಿಜೆಪಿ ಪಕ್ಷ, ರಾಜ್ಯಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಹಿಂದು ಧರ್ಮ, ದೇವಸ್ಥಾನಗಳ ಉಳಿವಿಗಾಗಿ ಧರ್ಮ ಯುದ್ಧ ಸಾರಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು .

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕಾಂಗ್ರೇಸ್ ನವರಿಗೆ ಕೇಸರಿ, ಹಿಂದುತ್ವ, ಹಿಂದು ದೇವಸ್ಥಾನಗಳೆಂದರೆ ಆಲರ್ಜಿ, ಬಿಜೆಪಿ ಪಕ್ಷ, ರಾಜ್ಯಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಹಿಂದು ಧರ್ಮ, ದೇವಸ್ಥಾನಗಳ ಉಳಿವಿಗಾಗಿ ಧರ್ಮ ಯುದ್ಧ ಸಾರಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು .

ಬಿಜೆಪಿ ರಾಜಾಧ್ಯಕ್ಷರ ಸೂಚನೆಯಂತೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಮಂಜುನಾಥ ಸ್ವಾಮಿಯ ಕುರಿತು ಅಪಪ್ರಚಾರ ಮಾಡುತ್ತಿರುವವರ ಮತ್ತು ಸಾಮಾಜಿಕ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಿರೇಕಲ್ಮಠದಿಂದ ಬೃಹತ್ ಮೆರವಣಿಗೆ ಮೂಲಕ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಾಗಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು.

ಯಾರೋ ಅನಾಮಿಕನ ಹೇಳಿದ ಎಂದು ಸರ್ಕಾರ ಎಸ್‌ಐಟಿ ನೇಮಕ ಮಾಡಿ ಹಲವಾರು ದಿನಗಳ ಕಾಲ ಕೋಟ್ಯಂತರ ಹಣ , ಸಮಯ ಹಾಗೂ ಸಿಬ್ಬಂದಿಗಳ ಶ್ರಮ ಖರ್ಚು ಮಾಡಿ ಧರ್ಮಸ್ಥಳದಲ್ಲಿ ಗುಂಡಿ ತೆಗೆಯುವ ವ್ಯರ್ಥ ಕೆಲಸ ಮಾಡಿದ್ದು, ಪವಿತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಹಾಗೂ ಕ್ಷೇತ್ರನಾಥ ಮಂಜುನಾಥ ಸ್ವಾಮಿಯ ಖ್ಯಾತಿಗೆ ಕಳಂಕ ತರುವ ನಿಟ್ಟಿನಲ್ಲಿ ಕಲಸ ಮಾಡಲಾಗಿದ್ದು, ಈ ರೀತಿ ಪವಿತ್ರ ಕ್ಷೇತ್ರಕ್ಕೆ ಕಳಂಕತರುವ ಮತ್ತು ಗೊಂದಲ ಮೂಡಿಸುವ ಕೆಲಸ ಮಾಡಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ, ಜಯಂತ್ ಇವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಡಿ.ಜೆ. ನಿಷೇಧಿಸಲು ಬಿಡುವುದಿಲ್ಲ:

ಈಗಿನ ಸರ್ಕಾರ ಪರೋಕ್ಷವಾಗಿ ಒಂದು ಕೋಮಿನ ಜನಸಮುದಾಯವನ್ನು ಓಟಿಗಾಗಿ ಓಲೈಸುವ ಕೆಲಸ ಮಾಡುತ್ತಿದೆ ಇದನ್ನು ಹಿಂದುಗಳಾದ ನಾವು ಸಹಿಸುದಿಲ್ಲ. ಗಣೇಶ ಹಬ್ಬಕ್ಕೆ ಡಿ.ಜೆ. ನಿಷೇಧ ಕ್ರಮವನ್ನು ಖಂಡಿಸುತ್ತೇವೆ ಎಂದು ಹೇಳಿದರು,

ಸೆ.2 ಕ್ಕೆ ಧರ್ಮಸ್ಥಳದಲ್ಲಿ ಪ್ರತಿಭಟನೆ:

ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೆ.2 ರಂದು ಹೊನ್ನಾಳಿ, ನ್ಯಾಮತಿಯಿಂದ ಮುಖಂಡರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ತೆರಳಿ ಅಲ್ಲಿ ಪೊರಕೆ ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಆರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಹಿಂದುಳಿದ ವರ್ಗಗಳ ಮುಖಂಡ ಕೆ.ಪಿ.ಕುಬೇರಪ್ಪ, ನ್ಯಾಮತಿ ಹವಳದ ನಿಂಗಪ್ಪ, ಹೊಸಕೇರಿ ಸುರೇಶ್, ಮಹಿಳೆಯರಾದ ಆರತಿ, ವೇದಾವತಿ, ಲಕ್ಷ್ಮಿದೇವಮ್ಮ,ಹಾಗೂ ಗೀತಮ್ಮ, ಬಿಜೆಪಿ ಮಾಜಿ ಅಧ್ಯಕ್ಷ ದೊಡ್ಡೇರಿ ರಾಜಪ್ಪ, ಶಿವುಹುಡೇದ್, ತರಗನಹಳ್ಳಿ ರಮೇಶಗೌಡ, ನೆಲಹೊನ್ನೆ ಮಂಜುನಾಥ, ಬಾಬು ಹೊಬಳದಾರ, ಕೆ.ರಂಗಪ್ಪ, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಗಾಲಿ ಕಾರ್ಖಾನೆ ಉದ್ಯೋಗಿಗೆಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್
ಡಿ.23ಕ್ಕೆ ರೈತರ ದಿನಾಚರಣೆ, ರಾಜ್ಯಮಟ್ಟದ ಸಮಾವೇಶ