ಸಿದ್ದಯ್ಯ ಹಿರೇಮಠ
ದಶಕಗಳ ಹಿಂದೆ ಮೃತಪಟ್ಟ ವ್ಯಕ್ತಿ ಜೀವಂತ ಇದ್ದಾನೆ ಎಂದು ಬಿಂಬಿಸಿ ಅವನ ಹೆಸರಿನಲ್ಲಿದ್ದ ಸುಮಾರು 13 ಎಕರೆ ಜಮೀನು ಮಾರಾಟ ಮಾಡಿದ ಪ್ರಕರಣ ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಶಿವಪ್ಪ ರಾಯಪ್ಪ ಚಿನಿವಾರ ಎಂಬುವವರು 1980ರ ಜನವರಿ 30ರಂದು ಮೃತಪಟ್ಟಿದ್ದಾರೆ. ಆದರೆ, ಈತ ಬದುಕಿದ್ದಾನೆಂದು ನಕಲಿ ವ್ಯಕ್ತಿ, ನಕಲಿ ದಾಖಲೆ ಸೃಷ್ಟಿಸಿ ಈತನಿಗೆ ಸೇರಿದ ಸುಮಾರು 13 ಎಕರೆ 30 ಗುಂಟೆ ಜಮೀನನ್ನು ಮಹಾರಾಷ್ಟ್ರದ ವ್ಯಕ್ತಿಗೆ ಮಾರಾಟ ಮಾಡಲಾಗಿದ್ದು, ಶಿವಪ್ಪ ಚಿನಿವಾರ ಅವರ ಮೊಮ್ಮಗ ನ್ಯಾಯ ಕೊಡಿಸುವಂತೆ ಅಧಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.ಘಟನೆ ವಿವರ:
ಖರೀದಿ ಪತ್ರಕ್ಕೆ ಡೊಂಗರಸೋನೆ ಗ್ರಾಮದ ಸಂತೋಷ ಪ್ರತಾಪ ಜಂತ್ರೆ ಮತ್ತು ಪಂಕಜ ರಾಜಾರಾಮ್ ಪಾಟೀಲ ಅವರನ್ನು ಸಾಕ್ಷಿದಾರರ ಸಹಿಯೊಂದಿಗೆ ಅಥಣಿಯ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಖರೀದಿ ನೋಂದಣಿ ಮಾಡಿಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಥಣಿ ಪೊಲೀಸರು ಐಪಿಸಿ ಸೆಕ್ಸೆನ್ 419, 420, 465, 471, ಮತ್ತು 468 ಅಡಿ ಐವರ ಮೇಲೆ ಎಫ್ ಐ.ಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ರಾಷ್ಟ್ರಪತಿ, ಪ್ರಧಾನಿಗೂ ದೂರು: ಆಸ್ತಿ ಕಬಳಿಸಿರುವ ದುಷ್ಕರ್ಮಿಗಳ ವಿರುದ್ಧ ಸಂತೋಷ ಚಿನಿವಾರ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಜತೆಗೆ ನ್ಯಾಯ ಒದಗಿಸಿಕೊಡುವಂತೆ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರಿಗೆ, ಮುಖ್ಯಮಂತ್ರಿ, ಕಂದಾಯ ಸಚಿವರು, ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದು, ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.