ಚಿತ್ರಾಪು ಬಳಿ ಕೃಷಿ ಗದ್ದೆಗೆ ನುಗ್ಗಿದ ಉಪ್ಪು ನೀರು; ಬೆಳೆ ನಾಶ

KannadaprabhaNewsNetwork |  
Published : Jan 08, 2025, 12:18 AM IST
ಮೂಲ್ಕಿ ಚಿತ್ರಾಫು ಬಳಿ ಕೃಷಿ ಗದ್ದೆಗೆ ನುಗ್ಗಿದ ಉಪ್ಪು ನೀರು  ಬೆಳೆ ನಾಶ | Kannada Prabha

ಸಾರಾಂಶ

ಪಡುಪಣಂಬೂರು ಗ್ರಾಮ ಪಂಚಾಯಿತಿ ಹಾಗೂ ಮುಲ್ಕಿ ನಗರ ಪಂಚಾಯಿತಿ ಗಡಿಭಾಗದ ಶೇಡಿಕಟ್ಟ ಹಳೆಯ ಅಣೆಕಟ್ಟಿಗೆ ಸರಿಯಾಗಿ ಹಲಗೆ ಹಾಕದೆ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು ಕೃಷಿಕರಿಗೆ ಹೆಚ್ಚಿನ ಸಮಸ್ಯೆಯಾಗಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿ ನಗರ ಪಂಚಾಯಿತಿ ಹಾಗೂ ಪಡುಪಣಂಬೂರು ಗ್ರಾಪಂ ಪಂಚಾಯಿತಿ ಗಡಿಭಾಗದ ಶೇಡಿಕಟ್ಟ ಬಳಿ ಹಳೆಯ ಅಣೆಕಟ್ಟಿಗೆ ಹಲಗೆ ಹಾಕದೆ ಕೃಷಿ ಪ್ರಧಾನ ಪ್ರದೇಶವಾದ ಚಿತ್ರಾಪು, ಘಜನಿ, ಕಲ್ಸಂಕ, ಪಡುಬೈಲು ವ್ಯಾಪ್ತಿಯ ಗದ್ದೆಯಲ್ಲಿ ಉಪ್ಪು ನೀರು ತುಂಬಿದ್ದು ಸುಮಾರು 500 ಎಕರೆ ಕೃಷಿಗೆ ತೀವ್ರ ತೊಂದರೆಯಾಗಿದೆ. ಟ

ಉಪ್ಪು ನೀರು ಗದ್ದೆಗೆ ನುಗ್ಗಿದ್ದರಿಂದ ಎರಡನೇ ಬಾರಿ ಗದ್ದೆಯಲ್ಲಿ ಕೃಷಿ ಮಾಡಲು ತೊಡಕಾಗಿದೆ. ಮುಂದಿನ ದಿನಗಳಲ್ಲಿ ಬಾವಿಗೆ ಉಪ್ಪು ನೀರು ಸೇರುವ ಸಾಧ್ಯತೆಯಿದ್ದು ಕುಡಿಯುವ ನೀರಿಗೂ ಅಭಾವ ಎದುರಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪಡುಪಣಂಬೂರು ಗ್ರಾಮ ಪಂಚಾಯಿತಿ ಹಾಗೂ ಮುಲ್ಕಿ ನಗರ ಪಂಚಾಯಿತಿ ಗಡಿಭಾಗದ ಶೇಡಿಕಟ್ಟ ಹಳೆಯ ಅಣೆಕಟ್ಟಿಗೆ ಸರಿಯಾಗಿ ಹಲಗೆ ಹಾಕದೆ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು ಕೃಷಿಕರಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಈ ಬಗ್ಗೆ ಅನೇಕ ಬಾರಿ ಮೂಲ್ಕಿ ನಗರ ಪಂಚಾಯಿತಿಗೆ ಅಣೆಕಟ್ಟು ದುರಸ್ತಿ ಬಗ್ಗೆ ಮನವಿ ನೀಡಿದರೂ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರಾದ ರಮಾನಂದ ಪಡುಬೈಲು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಅಪಘಾತ ಸೈಕಲ್‌ ಸವಾರ ಸಾವು
ವಿದ್ಯುತ್‌ ತೊಂದರೆ ಸರಿಪಡಿಸದಿದ್ದರೇ ಅಹೋರಾತ್ರಿ ಧರಣಿ