ಸರ್ವ ಸಮಭಾವದ ಸಂತ ಗಾಂಧಿ: ಪ್ರೊ ಎಸ್‌.ಟಿ. ಬಾಗಲಕೋಟಿ

KannadaprabhaNewsNetwork |  
Published : Apr 28, 2026, 02:15 AM IST
ಪೊಟೋ ಪೈಲ್ ನೇಮ್ ೨೭ಎಸ್‌ಜಿವಿ೧    ಶಿಗ್ಗಾಂವಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು, ರಾಜ್ಯ ಎನ್‌ಎಸ್‌ಎಸ್ ಕೋಶ ಬೆಂಗಳೂರು, ಇವರ ಸಹಯೋಗದಲ್ಲಿ ಗಾಂಧೀಜಿ ನಿನ್ನೆ, ಇಂದು, ನಾಳೆ ಎಂಬ ವಿಷಯದ ಮೇಲೆ ನಡೆದ ಒಂದು ದಿನದ ರಾಜ್ಯ ಮಟ್ಟದ  ಕಾರ್ಯಗಾರವನ್ನು  ಹಾವೇರಿ ವಿಶ್ವವಿದ್ಯಾಲಯದ ಕುಲ ಸಚಿವರಾದ ಪ್ರೊ ಎಸ್.ಟಿ ಬಾಗಲಕೋಟಿ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಗಾಂಧಿ ತಮ್ಮ ಜೀವನದಲ್ಲಿ ಹೆಚ್ಚು ಉಪದೇಶಿಸಲಿಲ್ಲ ಆಚರಿಸಿದರು. ಹಾಗಾಗಿ ನಾವು ಗಾಂಧಿಯನ್ನು ಅರ್ಥಮಾಡಿಕೊಳ್ಳಲು ಅವರ ವಿಚಾರಗಳನ್ನು ಅಧ್ಯಯನ ಮಾಡಿ, ವಿಮರ್ಶೆಗೆ ಒಳಪಡಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ ಎಸ್.ಟಿ. ಬಾಗಲಕೋಟಿ ಹೇಳಿದರು.

ಶಿಗ್ಗಾಂವಿ: ಗಾಂಧಿ ತಮ್ಮ ಜೀವನದಲ್ಲಿ ಹೆಚ್ಚು ಉಪದೇಶಿಸಲಿಲ್ಲ ಆಚರಿಸಿದರು. ಹಾಗಾಗಿ ನಾವು ಗಾಂಧಿಯನ್ನು ಅರ್ಥಮಾಡಿಕೊಳ್ಳಲು ಅವರ ವಿಚಾರಗಳನ್ನು ಅಧ್ಯಯನ ಮಾಡಿ, ವಿಮರ್ಶೆಗೆ ಒಳಪಡಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ ಎಸ್.ಟಿ. ಬಾಗಲಕೋಟಿ ಹೇಳಿದರು.ಶಿಗ್ಗಾಂವಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ, ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರಿನ ರಾಜ್ಯ ಎನ್‌ಎಸ್‌ಎಸ್ ಕೋಶದ ಸಹಯೋಗದಲ್ಲಿ ಗಾಂಧೀಜಿ: ನಿನ್ನೆ, ಇಂದು, ನಾಳೆ ಎಂಬ ವಿಷಯದ ಮೇಲೆ ನಡೆದ ಒಂದು ದಿನದ ರಾಜ್ಯ ಮಟ್ಟದ ಕಾರ್ಯಗಾರ ವನ್ನು ಉದ್ಘಾಟಿಸಿ ಮಾತನಾಡಿದರು.ಈ ಮೂರು ವಿಷಯಗಳಿಗಾಗಿ ಗಾಂಧಿ ಇರಬೇಕಾಗಿತ್ತು. ಒಂದು ಇಂದಿನ ರಾಜಕೀಯ ಪರಿಸ್ಥಿತಿ ಎರಡು ಸಂಪನ್ಮೂಲ ಹಂಚಿಕೆ, ಮೂರು ಯುದ್ಧದಿಂದ ಆಗುವ ಕಷ್ಟ್ಟನಷ್ಟಕ್ಕೆ ಹಾಗೂ ನಮ್ಮ ಪರಿಸರ ಉಳಿವಿಗಾಗಿ ಗಾಂಧಿ ಬದುಕಿರಬೇಕಾಗಿತ್ತು ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಗಾಂಧಿ ಸ್ಮಾರಕ ನಿಧಿ ಸಂಘಟಕ ಡಾ. ಅಬಿದ ಬೇಗಂ ಮೋಹನ ಮಹಾತ್ಮ ವಿಷಯದ ಮೇಲೆ ಮಾತನಾಡುತ್ತಾ, ಗಾಂಧೀಜಿಯವರ ಬಾಲ್ಯ ಜೀವನ, ವಿದ್ಯಾರ್ಥಿ ಆಗಿದ್ದಾಗ ಮಾಡಿದ ತಪ್ಪುಗಳು, ಅದನ್ನು ತಿದ್ದಿಕೊಂಡ ಬಗೆ, ವಿದೇಶಿ ಪ್ರಯಾಣ ಮಾಡುವಾಗ ತಮ್ಮ ತಾಯಿಗೆ ನೀಡಿದ ವಚನ, ವಕೀಲಿ ವೃತ್ತಿ ಹಾಗೂ ದಕ್ಷಿಣ ಆಫ್ರಿಕಾದಲ್ಲಾದ ಅವಮಾನದ ವಿರುದ್ಧ ಸತ್ಯ ಮತ್ತು ಅಹಿಂಸಾ ಮಾರ್ಗದಿಂದ ಹೋರಾಟ ಹೀಗೆ ಅವರ ಜೀವನ ಮತ್ತು ಆದರ್ಶ ಮಾರ್ಗದ ಬಗ್ಗೆ ತಿಳಿಸಿದರು.ಗೋಷ್ಠಿ ಒಂದರ ಸಂಪನ್ಮೂಲ ವ್ಯಕ್ತಿಗಳಾದ ಗಾಂಧಿ ಅಧ್ಯಯನ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಾನಂದ ಶೆಟ್ಟರ್ ಶತಮಾನದ ಆಚೆ ಗಾಂಧಿ ಆತ್ಮಕಥೆ ಎಂಬ ವಿಷಯದ ಮೇಲೆ ಮಾತನಾಡಿದರು. ಆತ್ಮಕಥೆ ಓದುವುದರ ಪ್ರಯೋಜನ ಮತ್ತು ಆತ್ಮಕತೆ ಮತ್ತು ಜೀವನ ಚರಿತ್ರೆಗಿರುವ ವ್ಯತ್ಯಾಸವನ್ನು ತಿಳಿಸಿದರು. ಗಾಂಧೀಜಿಯವ ಆತ್ಮಕಥೆ ಬೇರೆಯವರಿಗಿಂತ ಭಿನ್ನವಾಗಿ ಶ್ರೇಷ್ಠ ಆತ್ಮಕತೆ ಎನಿಸಿಕೊಂಡಿದೆ. ಅಲ್ಲದೆ ಕೇವಲ ಪ್ರಶಂಸನೀಯ ಸಂದರ್ಭಗಳನ್ನು ಚಿತ್ರಿಸದೆ ತಮ್ಮ ನ್ಯೂನತೆಗಳನ್ನು ಹೇಳಿಕೊಂಡಿದ್ದಾರೆ. ಬಾಲ್ಯ ಜೀವನ, ಶಿಕ್ಷಣ, ವಿದೇಶಿ ಪ್ರಯಾಣ, ವಕೀಲಿ ವೃತ್ತಿ, ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಿದ ಸತ್ಯಾಗ್ರಹ, ಭಾರತಕ್ಕೆ ಮರಳಿ ಬ್ರಿಟಿಷರ ದೌರ್ಜನ್ಯದ ವಿರುದ್ಧ ಹೋರಾಟ ಹೀಗೆ ತಮ್ಮ ಸತ್ಯಾನ್ವೇಷಣೆಗೆ ನಡೆಸಿದ ಪ್ರಯೋಗಗಳನ್ನು ತಿಳಿಸಿದರು.

ಮೂರನೇ ಗೋಷ್ಠಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳಿಯಾಳದ ಸಹಪ್ರಾಧ್ಯಾಪಕ ಡಾ. ವೈ. ಐ. ಚವ್ಹಾಣ ಅವರು ಗಾಂಧೀಜಿಯವರ ಕನಸಿನ ಭಾರತ ಮತ್ತು ಪ್ರಸ್ತುತತೆ ಎಂಬ ವಿಷಯದ ಕುರಿತು ಮಾತನಾಡುತ್ತಾ ಗಾಂಧೀಜಿಯವರ ಕನಸು ಕೇವಲ ರಾಜಕೀಯ ಸ್ವಾತಂತ್ರ‍್ಯ ಆಗಿರದೆ ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಸ್ವಾತಂತ್ರ‍್ಯ, ಸಮಾನತೆ ಸಹಕಾರ ಮತ್ತು ಸ್ವಾವಲಂಬನೆಯಾಗಿತ್ತು. ಭಾರತದ ಆತ್ಮ ಹಳ್ಳಿಗಳಲ್ಲಿ ವಾಸಿಸುತ್ತದೆ ಎನ್ನುತ್ತಾ ಗ್ರಾಮೀಣ ಅಭಿವೃದ್ಧಿಗೆ ಕೃಷಿ ಹಾಗೂ ಗುಡಿ ಕೈಗಾರಿಕೆಗಳನ್ನು ಉತ್ತೇಜಿಸಿದರು. ಸರ್ವೋದಯ, ಸರ್ವ ಧರ್ಮ ಸಹಿಷ್ಣುತೆ, ಸ್ವಚ್ಛತೆ, ಶಿಸ್ತು, ಪರಿಸರ ಪ್ರಜ್ಞೆ, ಶಿಕ್ಷಣ ಹಾಗೂ ಇವತ್ತಿನ ಅನೇಕ ಸಮಸ್ಯೆಗಳಿಗೆ ಗಾಂಧಿ ವಿಚಾರಗಳು ಅತ್ಯಂತ ಪ್ರಸ್ತುತವಾಗಿವೆ ಎಂದರು.

ಸಂಜೆ ಸಮರೂಪ ಸಮಾರಂಭದಲ್ಲಿ ಹಾವೇರಿ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕೋಶದ ನೂಡಲ್ ಅಧಿಕಾರಿ ಡಾ. ಶಮಂತ್ ಕುಮಾರ್ ಸಮಾರೋಪ ನುಡಿಗಳನಾಡುತ್ತಾ ಇಂದಿನ ಯುವಜನರು ವಾಟ್ಸಾಪ್ ಯುನಿವರ್ಸಿಟಿಯಲ್ಲಿನ ಸಂದೇಶಗಳಿಗೆ ಗಮನಕೊಡದೆ ಓದಿನ ಮೂಲಕ ಗಾಂಧಿಯನ್ನು ಅರ್ಥೈಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಎ.ಸಿ. ವಾಲಿ ಮಾತನಾಡುತ್ತಾ, ನಮ್ಮ ಆಸೆಗಳನ್ನು ಪೂರೈಸಲು ಪರಿಸರದಲ್ಲಿ ಎಲ್ಲವೂ ಇದೆ ದುರಾಸೆಗಳಿಗೆ ಅಲ್ಲ ಎಂದರು.ಕಾರ್ಯಗಾರದ ಸಂಚಾಲಕ ಡಾ. ಆನಂದ ಇಂದೂರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಇತಿಹಾಸದಲ್ಲಿ ಗಾಂಧಿಯ ಹೋರಾಟ, ವಾಸ್ತವದಲ್ಲಿ ಗಾಂಧಿ ಮೇಲಿನ ಅಪಪ್ರಚಾರ, ಭವಿಷತ್ತಿನಲ್ಲಿ ಗಾಂಧಿ ವಿಚಾರಗಳನ್ನು ತಲುಪಿಸುವ ರೀತಿ ಬಗ್ಗೆ ಮಾತನಾಡಿದರು. ಪ್ರೊ ಡಿ.ಎಸ್. ಭಟ್, ಪ್ರೊ. ಡಿ.ಎಸ್. ಸೊಗಲದ, ವಿವಿಧ ಕಾಲೇಜಿನ ೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.ಪ್ರೊ. ಮೇಘ ಚಲವಾದಿ. ಡಾ. ಅಂಬಿಳಿ ಪಿಳ್ಳೆ, ಡಾ. ಮುತ್ತು ಸುಣಗಾರ, ಪ್ರೊ, ಆರ್. ಪಿ. ನದಾಫ್, ಡಾ.ಲತಾ, ಪ್ರೊ. ಶುಭ ಹಿರೇಮಠ, ಡಾ. ಪ್ರಬಲ್ ರೋಡ್ಡಣ್ಣನವರ್ ಸೇರಿದಂತೆ ಇನ್ನಿತರರು ಇದ್ದರು. ಪ್ರೊ ಇಮ್ತಿಯಾಜ್ ಖಾನ್ ನಿರೂಪಿಸಿದರು. ಪ್ರೊ. ಡಿ. ಎಸ್. ಭಟ್ ಸ್ವಾಗತಿಸಿದರು ಪ್ರೊ. ಪ್ರತಿಮಾ ಗುಂಜಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣರ ವಚನ ಸಾಹಿತ್ಯ ಪ್ರೇರಣಾದಾಯಕ
ಬಸವಣ್ಣ ನಾನು ಲಿಂಗಾಯತ ಧರ್ಮದವನು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ