ಭಾಲ್ಕಿ: ನಗರದ ಚನ್ನಬಸವಾಶ್ರಮದಲ್ಲಿ ವಚನ ಜಾತ್ರೆ-2025 ಹಾಗೂ ಡಾ.ಚನ್ನಬಸವ ಪಟ್ಟದ್ದೇವರ 26ನೇ ಸ್ಮರಣೋತ್ಸವ ಏ.10 ರಿಂದ 21ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ನಡೆದ ಸಭೆಯಲ್ಲಿ ಎಲ್ಲ ಸದ್ಭಕ್ತರ ಒಮ್ಮತದಿಂದ ಪ್ರವಚನ ಸೇವಾ ಸಮಿತಿಯ ಅಧ್ಯಕ್ಷೆಯನ್ನಾಗಿ ಶಶಿಕಲಾ ಅಶೋಕ ವಾಲೆ ಅವರನ್ನು ನೇಮಕ ಮಾಡಲಾಯಿತು.
ಸೇವಾ ಸಮಿತಿ ಅಧ್ಯಕ್ಷೆ ಶಶಿಕಲಾ ಅಶೋಕ ವಾಲೆ ಮಾತನಾಡಿ, ಈ ಅವಕಾಶ ದೊರೆತಿರುವುದು ನಮ್ಮ ಕುಟುಂಬದ ಪುಣ್ಯವೇ ಆಗಿದೆ. ನಾನು ತನುಮನ ಧನದಿಂದ ಈ ಕಾರ್ಯಕ್ಕೆ ಸಮರ್ಪಣೆಯಿಂದ ದುಡಿಯುತ್ತೇನೆ. ಪೂಜ್ಯರ ಆಶೀರ್ವಾದ ಹಾಗೂ ತಮ್ಮೆಲ್ಲರ ಸಹಕಾರದಿಂದ ವಚನ ಜಾತ್ರೆ, ಪೂಜ್ಯರ ಸ್ಮರಣೋತ್ಸವ ಮತ್ತು ಪ್ರವಚನ ಯಶಸ್ವಿಯಾಗಿ ಮಾಡೋಣವೆಂದು ನುಡಿದರು.
ಪ್ರೊ.ಶಂಭುಲಿಂಗ ಕಾಮಣ್ಣ, ಬಸವರಾಜ ಮರೆ, ವಿಶ್ವನಾಥ, ಬಿರಾದಾರ, ಶರಣಪ್ಪ ಬಿರಾದಾರ, ಸಂತೋಷ ಹಡಪದ, ಮಲ್ಲಮ್ಮ ನಾಗನಕೇರೆ, ಮಧು ವಾಲೆ, ಧನರಾಜ ಬಂಬುಳಗೆ, ಸುರೇಶ ಪುರಂತ ಉಪಸ್ಥಿತರಿದ್ದರು.