ಸತ್ಯಸಾಯಿ ಆಸ್ಪತ್ರೆ ಕಾರ್ಯ ಮೆಚ್ಚುವಂತದ್ದು

KannadaprabhaNewsNetwork |  
Published : Jan 12, 2026, 01:15 AM IST
ಮಧುಗಿರಿಯ ಗೌರಿಬಿದನೂರು  ಭೈಪಾಸ್ ರಸ್ತೆ ಬಳಿ ನೂತನವಾಗಿ ಪ್ರಾರಂಭವಾಗಿರುವ ಶ್ರೀಮಧುಸೂದನ್ ಸಾಯಿ ಆಸ್ಪತ್ರೆಯನ್ನು ಶಾಸಕ ಕೆ.ಎನ್‌.ರಾಜಣ್ಣ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ತ್ಯಸಾಯಿ ಆಸ್ಪತ್ರೆಯ ಕಾರ್ಯ ಮೆಚ್ಚುವಂತದ್ದು

ಕನ್ನಡಪ್ರಭ ವಾರ್ತೆ ಮಧುಗಿರಿ

ಹಣಕ್ಕಾಗಿ ಎಲ್ಲರೂ ಬಾಯಿಬಿಡುವ ಇಂದಿನ ದಿನಗಳಲ್ಲಿ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಜನರ ಆರೋಗ್ಯ ಕಾಪಾಡುತ್ತಿರುವ ಸತ್ಯಸಾಯಿ ಆಸ್ಪತ್ರೆಯ ಕಾರ್ಯ ಮೆಚ್ಚುವಂತದ್ದು ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು. ಪಟ್ಟಣದ ಗೌರಿಬಿದನೂರು ಬೈಪಾಸ್ ರಸ್ತೆ ಬಳಿ ಶ್ರೀಮಧುಸೂದನ್ ಸಾಯಿ ಇನ್ಸಟ್ಯೂಟ್‌ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್‌ ರಿಸರ್ಚ್ ಕೇಂದ್ರದ ಸಹಯೋಗದಲ್ಲಿ ನೂತನವಾಗಿ ಯುಎಸ್‌ಎಷ್ಯಾ ಹ್ಯಾಪಿನೇಸ್ ಫೌಂಡೇಶನ್ ತುರ್ತು ನಿಗಾ ಘಟಕ ಹಾಗೂ ಶ್ರೀ ಸಾಯಿ ಸ್ವತ್ಯ ಕ್ಷೇಮ ಕೇಂದ್ರ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮನುಷ್ಯನಿಗೆ ಹಣ, ಆಸ್ತಿ ಎಲ್ಲ ಸಂಪತ್ತಿಗಿಂತ ಆರೋಗ್ಯವೇ ಅತಿ ದೊಡ್ಡ ಸಕಲ ಸಂಪತ್ತು , ಈ ಆಸ್ಪತ್ರೆಯಲ್ಲಿ ನಗದು ಕೌಂಟರ್ ಕಾಣಿಸುತ್ತಿಲ್ಲ, ಯಾವುದೇ ಆಸ್ಪತ್ರೆಗೆ ಭೇಟಿ ನೀಡಿದರೂ ಮೊದಲು ಕಾಣುವುದೇ ನಗದು ಕೌಂಟರ್, ಆದರೆ ಇಲ್ಲಿ ಉಚಿತವಾಗಿ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.

ರೋಗ ಮನುಷ್ಯನಿಗೆ ಬಾರದೇ ಮರಕ್ಕೆ ಬರುತ್ತದೆಯೇ ಎಂಬ ನಾಣ್ಣುಡಿಯಂತೆ ಒಂದಲ್ಲಾ ಒಂದು ರೀತಿಯಲ್ಲಿ ರೋಗ ಬಾಧೆಗಳು ಜನರನ್ನು ಕಾಡುತ್ತವೆ. ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಬಳಿಗೆ ಸಹಜವಾಗಿ ಹೋಗುವುದುಂಟು. ಆದರೆ ಹಣ ನೋಡಿ ಚಿಕಿತ್ಸೆ ನೀಡುವ ದಿನಮಾನಗಳಲ್ಲಿ ಈ ಆಸ್ಪತ್ರೆಯಲ್ಲಿ ಉಚಿತವಾಗಿ ಎಲ್ಲ ರೋಗಗಳಿಗೂ ತಪಾಸಣೆ ಮಾಡಿ ಅದಕ್ಕೆ ತಕ್ಕಂತೆ ಔಷಧೋಪಚಾರ ನಿಗದಿಪಡಿಸಿ ತಾಲೂಕಿನ ಎಲ್ಲ ಜನರು ಉಚಿತವಾಗಿ ಚಿಕಿತ್ಸೆ ನೀಡುವ ಜನೋಪಯೋಗಿ ಕಾರ್ಯವನ್ನು ನಿರ್ವಹಿಸುತ್ತಿರುವ ವೈದ್ಯರ ಸೇವಾ ಮನೋಭಾವ ಶ್ಲಾಘನೀಯ. ಇದನ್ನು ತಾಲೂಕಿನ ಎಲ್ಲರೂ ಸದುಪಯೋಗ ಪಡಿಸಿಕೊಂಡು ಸ್ವಸ್ಥ ಸಮಾಜವನ್ನು ರೂಪಿಸಲು ಸಹಕರಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಗೌರವಿಸಿದರು. ಸದ್ಗುರು ಶ್ರೀ ಮಧುಸೂದನ್‌ ಸಾಯಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಶಾ ಫೌಂಡೇಶನ ರಿಕಾ ಶಾ, ಮನು ಶಾ ಕುಟುಂಬದವರು, ಡಾ.ಸತೀಶ್, ಅನ್ನಪೂರ್ಣ, ಎಸಿ ಗೋಟೂರು ಶಿವಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಮೂರ್ತಿ, ಮೈದನಹಳ್ಳಿ ಕಾಂತರಾಜು, ಸಂದೀಪ್, ಹರ್ಷ, ಗಂಗರಾಜು, ಗುತ್ತಿಗೆದಾರ ದ್ವಾರಕನಾಥ್ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ