ಸನಾತನ ಧರ್ಮ ಉಳಿಸಿ-ಬೆಳೆಸಿ: ಶಾಸಕ ಮಹೇಶ ಟೆಂಗಿನಕಾಯಿ

KannadaprabhaNewsNetwork |  
Published : Dec 29, 2024, 01:17 AM IST
ಹುಬ್ಬಳ್ಳಿಯ ಗೋಕುಲ ಗಾರ್ಡನ್‌ನಲ್ಲಿ ಶ್ರೀ ಯೋಗಿಶ್ವರ ಯಾಜ್ಞವಲ್ಕ್ಯಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಯೋಗಿಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ರಾಜ್ಯ ಸಮ್ಮೇಳನವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸನಾತನ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ. ಗ್ರಂಥರೂಪದಲ್ಲಿ ನಮ್ಮ ಋಷಿಮುನಿಗಳು ಸನಾತನ ಧರ್ಮ ಸಂಸ್ಕಾರವನ್ನು ನಮಗೆ ಧಾರೆ ಎರದಿದ್ದಾರೆ. ಇಡೀ ವಿಶ್ವವೇ ನಮ್ಮ ಸನಾತನವನ್ನು ಮೆಚ್ಚುತ್ತಿದೆ. ಇಂತಹ ಧರ್ಮವನ್ನು ನಾವೆಲ್ಲರೂ ಉಳಿಸಿ-ಬೆಳೆಸಬೇಕು.

ಹುಬ್ಬಳ್ಳಿ:

ಸನಾತನ ಧರ್ಮ ಉಳಿಸಿ-ಬೆಳೆಸಬೇಕು. ಹಿಂದೂ ಧರ್ಮ ಪಾಲಿಸಬೇಕೆಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ಶ್ರೀಯೋಗೀಶ್ವರ ಯಾಜ್ಞವಲ್ಕ್ಯಸೇವಾ ಟ್ರಸ್ಟ್ ವತಿಯಿಂದ ಶನಿವಾರದಿಂದ ಎರಡು ದಿನ ನಡೆಯುವ ಶ್ರೀಯೋಗಿಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಯಾಜ್ಞವಲ್ಕ್ಯ ಮುನೀಂದ್ರರು ಯೋಗಶಾಸ್ತ್ರದಲ್ಲಿ ನಿಷ್ಣಾತರೂ, ಯೋಗಸಿದ್ಧಿ ಹೊಂದಿದವರೂ ಆಗಿದ್ದರಿಂದ ಇವರಿಗೆ "ಯೋಗಿಶ್ವರ " ಎಂಬ ಹೆಸರಿನಿಂದ ಖ್ಯಾತರಾಗಿದ್ದಾರೆ. ಈ ಭರತ ಖಂಡ ಜಾಗೃತವಾಗಿ ನಿಂತಿರುವುದೇ ಇಂತಹ ಯೋಗಿ-ಸಂತರಿಂದ ಎಂದರು.

ಸನಾತನ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ. ಗ್ರಂಥರೂಪದಲ್ಲಿ ನಮ್ಮ ಋಷಿಮುನಿಗಳು ಸನಾತನ ಧರ್ಮ ಸಂಸ್ಕಾರವನ್ನು ನಮಗೆ ಧಾರೆ ಎರದಿದ್ದಾರೆ. ಇಡೀ ವಿಶ್ವವೇ ನಮ್ಮ ಸನಾತನವನ್ನು ಮೆಚ್ಚುತ್ತಿದೆ. ಇಂತಹ ಧರ್ಮವನ್ನು ನಾವೆಲ್ಲರೂ ಉಳಿಸಿ-ಬೆಳೆಸೋಣ ಎಂದು ಕರೆ ನೀಡಿದರು.

ಕಣ್ವಮಠದ ಪೀಠಾಧ್ಯಕ್ಷ ವಿದ್ಯಾಕಣ್ವ ವಿರಾಜತೀರ್ಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗೋವಿಂದ ಜೋಶಿ, ಶ್ರೀಕಾಂತ್ ಕರಿ, ಸತ್ಯನಾರಾಯಣ ಮುಜಮದಾರ, ಮನೋಹರ ಮಾಡಗೇರ, ಗುರುಚಿದಂಬರ ದೀಕ್ಷಿತ, ವಿಶ್ವನಾಥ ಸ್ವಾಮಿಗಳು, ಶಂಕರಭಟ್ ಜೋಶಿ, ವೇಣುಗೋಪಾಲ ಕೃಷ್ಣ, ಸತ್ಯನಾರಾಯಣ ಮರಟಗೇರಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌