ಸ್ವದೇಶಿ ವಸ್ತು ಬಳಿಸಿ ಗುಡಿ ಕೈಗಾರಿಕೆ ಉಳಿಸಿ: ರಾಚಪ್ಪ ಸರಡಗಿ

KannadaprabhaNewsNetwork |  
Published : Jan 29, 2024, 01:32 AM IST
ದೊಡ್ಡಣವರ ಮೈನ್ಸ್ ಕಂಪನಿಯಲ್ಲಿ ಉಪಾಧ್ಯಕ್ಷ ರಾಚಪ್ಪ ಸರಡಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. | Kannada Prabha

ಸಾರಾಂಶ

ಅಮೀನಗಡ: ಸ್ವದೇಶಿ ವಸ್ತಗಳ ಖರೀದಿ, ಗುಡಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಭಾರತ ಸ್ವಾವಲಂಬಿ ರಾಷ್ಟ್ರವಾಗಲು ಸಾಧ್ಯ ಎಂದು ದೊಡ್ಡಣವರ ಮೈನ್ಸ್ ಉಪಾಧ್ಯಕ್ಷ ರಾಚಪ್ಪ ಸರಡಗಿ ಹೇಳಿದರು. ಸಮೀಪದ ದೊಡ್ಡಣವರ್ ಮೈನ್ಸ್ ಕಂಪನಿ ಆವರಣದಲ್ಲಿ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿ ಮಾತನಾಡಿ, ಭಾರತೀಯರು ಅದರಲ್ಲೂ ಇಂದಿನ ಯುವ ಜನಾಂಗ ಪರದೇಶಿ ವಸ್ತಗಳ ವ್ಯಾಮೋಹ ತೊರೆದು ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಸುವುದರಿಂದ ರಾಷ್ಟ್ರದ ಆರ್ಥಿಕ ಪ್ರಗತಿ ಸಾಧ್ಯ ಎಂದರು.

ಕನ್ನಡಪ್ರಭವಾರ್ತೆ ಅಮೀನಗಡ

ಸ್ವದೇಶಿ ವಸ್ತಗಳ ಖರೀದಿ, ಗುಡಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಭಾರತ ಸ್ವಾವಲಂಬಿ ರಾಷ್ಟ್ರವಾಗಲು ಸಾಧ್ಯ ಎಂದು ದೊಡ್ಡಣವರ್ ಮೈನ್ಸ್ ಉಪಾಧ್ಯಕ್ಷ ರಾಚಪ್ಪ ಸರಡಗಿ ಹೇಳಿದರು.

ಸಮೀಪದ ದೊಡ್ಡಣವರ್ ಮೈನ್ಸ್ ಕಂಪನಿ ಆವರಣದಲ್ಲಿ 75ನೇ ಗಣ ರಾಜ್ಯೋತ್ಸವ ಧ್ವಜಾರೋಹಣ ಮಾಡಿ ಮಾತನಾಡಿ, ಭಾರತೀಯರು ಅದರಲ್ಲೂ ಇಂದಿನ ಯುವ ಜನಾಂಗ ಪರದೇಶಿ ವಸ್ತಗಳ ವ್ಯಾಮೋಹ ತೊರೆದು ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಸುವುದರಿಂದ ರಾಷ್ಟ್ರದ ಆರ್ಥಿಕ ಪ್ರಗತಿ, ಉದ್ಯೋಗ ಸಮಸ್ಯೆ ನಿವಾರಿಸಲು ಸಾಧ್ಯ, ಗುಡಿ ಕೈಗಾರಿಕೆಗಳಿಗೆ ಒತ್ತು ನೀಡುವುದರಿಂದ ಅನೇಕ ಕುಟುಂಬಗಳು ಸ್ವಾಭಿಮಾನದ ಸ್ವಾವಲಂಬನೆಯ ಬದುಕು ಸಾಗಿಸಲು ಸಾಧ್ಯ ಎಂದರು.

ಕಂಪನಿಯ ಜನರಲ್ ಮ್ಯಾನೇಜರ್ ಅಮಿತ್ ಗೂಳಿ, ಎಸ್‌ಎಸ್‌ಆರ್‌ಸಿ ಮಾಲೀಕರಾದ ಸಾಯಿಕಿರಣ ಸರಡಗಿ, ಸಮಾಜಸೇವಕಿ ಜ್ಯೋತಿ ಸರಡಗಿ, ವಿಶ್ವನಾಥ ಘೋರ್ಪಡೆ, ಹುಸೇನಸಾಬ ನದಾಫ್‌(ಮೇಸ್ತ್ರಿ), ಚಂದ್ರಶೇಖರ ಅಮೀನಗಡ, ಬಸವರಾಜ ನಿಂಬಲಗುಂದಿ, ಸಯ್ಯದ್‌ ಮಲಿಕ್ ಹಾಗೂ ಕಾರ್ಮಿಕರು, ಸಿಬ್ಬಂದಿ ಪಾಲ್ಗೊಂಡಿದ್ದರು, ಚಂದ್ರು ಅಮೀನಗಡ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ