ಔರಾದ್: ತಳಿರು ತೋರಣಗಳಿಂದ ಶಾಲೆಗಳನ್ನು ಅಲಂಕರಿಸಿ ಪ್ರಾರಂಭದ ದಿನವೇ ಮಕ್ಕಳು ಶಾಲೆಯಡೆಗೆ ಬರುವಂತೆ ತಾಲೂಕಿನಾದ್ಯಂತ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ಜರುಗಿತು.ಬೇಸಿಗೆ ರಜೆ ಮುಗಿದು ಮಕ್ಕಳು ಮನೆಯಲ್ಲಿ ಕಾಲ ಕಳೆದು ಶುಕ್ರವಾರ ಶಾಲೆ ಪ್ರಾರಂಭಗೊಂಡು ಪಟ್ಟಣದ ಸೇರಿದಂತೆ ಎಲ್ಲೆಡೆ ಸಡಗರ ಸಂಭ್ರಮದ ಮಧ್ಯೆ ಶಾಲೆಗಳನ್ನು ಪ್ರಾರಂಭಿಸಿ ಮಕ್ಕಳು ಮತ್ತು ಪಾಲಕರು ಶಾಲೆಯೆಡೆಗೆ ಆಗಮಿಸುವ ವಾತಾವರಣ ಕಂಡು ಬಂತು.
ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕಗಳು, ಎರಡು ಜೊತೆ ಸಮವಸ್ತ್ರ ವಿತರಿಸಲಾಗಿದೆ. ವಿದ್ಯಾರ್ಥಿಗಳು ಪ್ರಾರಂಭದ ದಿನವೇ ಪಠ್ಯ ಪುಸಕ್ತ, ಸಮವಸ್ತ್ರ ಪಡೆದು ಶಾಲೆಯಲ್ಲಿ ಸಿಹಿ ತಿಂಡಿ ಸವಿದು ಖುಷಿಪಟ್ಟರು.
ತಾಲೂಕಿನ ಎಕಲಾರ ಕ್ಲಸ್ಟರ್ನ ಬೋರಾಳ ಶಾಲೆಯಲ್ಲಿ ಎತ್ತಿನ ಗಾಡಿಯ ಮೂಲಕ ಮಕ್ಕಳ ಮೆರವಣಿಗೆ ಮಾಡಿ ಶಾಲಾ ಪ್ರಾರಂಭೋತ್ಸವ ವಿಶಿಷ್ಟವಾಗಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಧನರಾಜ ಮುದಾಳೆ, ನಿರ್ಮಲಾ ಸ್ವಾಮಿ, ಸತೀಶ ಮಜಗೆ, ಶಿರಿನ್, ಭಾಗ್ಯವಂತಿ, ರಾಜೇಂದ್ರ ಸೇರಿದಂತೆ ಇನ್ನಿತರರಿದ್ದರು.