ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ತಹಸೀಲ್ದಾರ್ ಕಚೇರಿ ಹಿಂದಿರುವ ಆದಿತ್ಯ ಪ್ಲಾಜಾದ ಸಭಾ ಭವನದಲ್ಲಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ಬೆಂಗಳೂರು, ಜೈನ್ ಇರಿಗೇಷನ್ ಸಿಸ್ಟಂ, ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ ಬಸರಕೋಡ ಹಾಗೂ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಮುದ್ದೇಬಿಹಾಳ ಸಂಯುಕ್ತಾಶ್ರಯದಲ್ಲಿ ನಡೆದ ವೈಜ್ಞಾನಿಕ ಕಬ್ಬು ಬೇಸಾಯ- ಎಕರೆಗೆ 100 ಟನ್ ಇಳುವರಿ ಎಂಬ ವಿಷಯಾಧರಿತ ರೈತ ವಿಜ್ಞಾನಿ ತಾಂತ್ರಿಕ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭೂಮಿ ತಯಾರಿ, ನಾಟಿ ಪದ್ಧತಿ, ತಳಿ ಆಯ್ಕೆ, ನೀರು ಮತ್ತು ಪೋಷಕಾಂಶಗಳ ಪೂರೈಕೆ, ಕೀಟ-ರೋಗಗಳ ನಿರ್ವಹಣೆ, ಇತ್ಯಾದಿ ವಿಷಯಗಳಲ್ಲಿ ಮಾಡಬಹುದಾದ ಪ್ರಮಾದಗಳಿಂದ ಇಳುವರಿಯಲ್ಲಿ ಹೊಡೆತ ತಿನ್ನುವ ಕಬ್ಬು ಬೆಳೆಗಾರರು, ಕಬ್ಬು ಬೇಸಾಯದ ವಿವಿಧ ಮಜಲುಗಳಲ್ಲಿ ಪಾಲಿಸಬೇಕಾದ ನಿಯಮಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಕರಾರುವಕ್ಕಾಗಿ ಪಾಲಿಸಿದಲ್ಲಿ ಎಕರೆಗೆ 100 ಟನ್ಗಳಿಗೂ ಮೀರಿ ಕಬ್ಬು ಇಳುವರಿ ಪಡೆಯಲು ಸಾಧ್ಯವೆಂದರು.ಜೈನ್ ಇರಿಗೇಷನ್ ಸಿಸ್ಟಂನ ನೀರಾವರಿ ತಂತ್ರಜ್ಞ ಎಂ.ಕೆ.ಬಿರಾದಾರ ಮಾತನಾಡಿ, ಕಬ್ಬಿನ ಬೆಳೆಗೆ ಬೆಳೆಯುವ ಹಂತಗಳಲ್ಲಿ ಸರಿಯಾಗಿ ತೇವಾಂಶ ಇರುವಂತೆ ಮಾಡಿದಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಹವಾಮಾಣ, ಮಳೆ ಪ್ರಮಾಣ, ಮಣ್ಣಿನ ಗುಣಧರ್ಮ, ಮಣ್ಣಿನ ಆಳ, ನೀರು ಸಿಗುವ ಪ್ರಮಾಣ ಮತ್ತು ಬೆಳೆಯ ಕಾಲಾವಧಿ ಆಧರಿಸಿ ನೀರು ನಿರ್ವಹಣೆಗೆ ರೈತರು ಹೆಚ್ಚಿನ ಆದ್ಯತೆ ನೀಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಅರವಿಂದ ಕೊಪ್ಪ ಮಾತನಾಡಿ, ಹೆಚ್ಚಿನ ಇಳುವರಿ ಪಡೆಯಲು ಕಬ್ಬು ಸಂಶೋಧನೆ ಮತ್ತು ಅಭಿವೃದ್ಧಿ ಸಂಬಂಧಿತ ಚಟುವಟಿಕೆಗಳಲ್ಲಿ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಮಾಧ್ಯಮವಾಗಿ ಕಾರ್ಯನಿರ್ವಹಿಸಲಿದೆ. ಕಬ್ಬು ಬೆಳೆಗಾರರ ಸಹಭಾಗಿತ್ವದಿಂದ ತಾಂತ್ರಿಕತೆಗಳ ಅಳವಡಿಕೆಯ ಅವಶ್ಯಕತೆ ಗುರುತಿಸಲಾಗುವುದು. ಕನಿಷ್ಠ 100 ಟನ್ ಇಳುವರಿ ಪಡೆಯುವ ರೈತರ ಕ್ಲಬ್ ರಚಿಸಲಾಗುತ್ತಿದೆ ಎಂದು ತಿಳಿಸಿದರು.