ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಋಣ ತೀರಿಸುವ ಕೆಲಸ ಮಾಡಿ
ಇಂತಹ ವ್ಯಕ್ತಿಯನ್ನು ಕಾರ್ಯದರ್ಶಿಗಳು ಕೈಬಿಡದೆ ಅವರು ಇರುವತನಕ ಅವರನ್ನೇ ನಿರ್ದೇಶಕರನ್ನಾಗಿ ಆಯ್ಕೆ ಮಾಡುವ ಮೂಲಕ ಅವರ ಋಣ ತೀರಿಸುವ ಕೆಲಸ ಮಾಡಬೇಕೆ ವಿನಹ ಅವರ ಸ್ಥಾನಕ್ಕೆ ಯಾರೂ ಆಸೆ ಪಡಬಾರದು. ಜಯಸಿಂಹ ರವರ ಸಾಧನೆ ಗುರುತಿಸಿ ಸಹಕಾರ ರತ್ನ ಪ್ರಶಸ್ತಿಗೂ ಶಿಫಾರಸು ಮಾಡಲಾಗಿದೆ. ಸಂಘದ ಕಾರ್ಯದರ್ಶಿಗಳು ಯಾವುದೇ ರಾಜಕೀಯ ಮಾಡದೆ ಸಂಘಗಳ ಬೆಳವಣಿಗೆಗೆ ಶ್ರಮಿಸಬೇಕೆಂದು ಹೇಳಿದರು.ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಶಂಕರರೆಡ್ಡಿ ಮಾತನಾಡಿ, ಹೈನೋದ್ಯಮ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಎಂತಹ ಬರಗಾಲದಲ್ಲಿಯೂ ಹೈನೋದ್ಯಮ ರೈತರನ್ನು ಕೈಬಿಡದೆ ಮುನ್ನೆಡೆಸುತ್ತಿದೆ ಎಂದರು.
ಈ ಉದ್ಯಮವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸಂಘ ಕಾರ್ಯದರ್ಶಿಗಳಿಗೆ ಹೊಸ ಹೊಸ ಕಾನೂನುಗಳ ಬಗ್ಗೆ ತಿಳಿವಳಿಗೆ ಮೂಡಿಸಬೇಕಾಗಿರುವುದರಿಂದ ಇಂದು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸೋಮವಾರ ಸಂಘದ ಅಧ್ಯಕ್ಷರುಗಳಿಗೂ ತರಬೇತಿ ನೀಡಲಾಗುವುದು ಎಂದರು. ಈ ವೇಳೆ ತರಬೇತಿ ಸಂಪನ್ಮೂಲ ವ್ಯಕ್ತಿಯಾದ ನಾಗರಾಜಯ್ಯ,ವೆಂಕಟಸ್ವಾಮಿ, ಸಹಕಾರ ಒಕ್ಕೂಟ ನಿರ್ದೇಶಕರಾದ ಕೃಷ್ಣಾರೆಡ್ಡಿ,ಪಾಪಣ್ಣ,ಸಹಕಾ ಅಭಿವೃದ್ದಿ ಅಧಿಕಾರಿ ಬಾಲಕೃಷ್ಣ,ರವಿ ಮತ್ತಿತರರು ಇದ್ದರು.