)
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ದೇವರಹಿಪ್ಪರಗಿ ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾಲೂಕಿನ ಯಾಳವಾರ ಹಾಗೂ ಬನಹಟ್ಟಿ ಪಿ.ಎ. ಗ್ರಾಮದಲ್ಲಿ ಜಿಲೆಟಿನ್ ಕಡ್ಡಿಗಳ ಶೇಖರಣೆ ಮಾಡಿಟ್ಟ ಮದ್ದಿನ ಗೋದಾಮುಗಳಿಗೆ ಸ್ಥಳೀಯ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಸಹಾಯದೊಂದಿಗೆ ಭೇಟಿ ನೀಡಿ ಮಹಜರು ಮಾಡಿ ಪರಿಶೀಲನೆ ನಡೆಸಿದ್ದಾರೆ. ಎನ್ಐಎ ತಂಡದ ಭೇಟಿ ಹಾಗೂ ಪರಿಶೀಲನೆಯ ಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ವೇಳೆ ಎನ್ಐಎ ತಂಡದ ಅಧಿಕಾರಿಗಳು ಹಾಗೂ ಸ್ಥಳೀಯ ಠಾಣೆಯ ಪಿಎಸ್ಐ ಅಜಯ ಪಾಟೀಲ, ಸಚಿನ್ ಆಲಮೇಲಕರ, ಸಿಪಿಸಿ ಸತೀಶ ಹಾಗೂ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳಾದ ಸಂಗಮೇಶ ಗವಡ್ಡಿ, ರಮಾನಂದ ಚಕ್ಕಡಿ ಸೇರಿ ಹಲವು ಜನರು ಇದ್ದರು.