ಚಾಲುಕ್ಯ ಜಾನಪದ ಶಿಕ್ಷಕರ ಬಳಗ ರಾಜ್ಯಮಟ್ಟಕ್ಕೆ ಆಯ್ಕೆ

KannadaprabhaNewsNetwork |  
Published : Mar 21, 2024, 01:06 AM IST
ಮುಖ್ಯಶಿಕ್ಷಕ ಬಿ.ಜಿ.ರೊಟ್ಟಿ ಇವರನ್ನು ಸನ್ಮಾನಿಸಿದ ಚಿತ್ರ | Kannada Prabha

ಸಾರಾಂಶ

ಬಾದಾಮಿ: ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಸಾಂಸ್ಕೃತಿಕ ವಿಭಾಗದ ಸ್ಪರ್ಧೆಯಲ್ಲಿ ಬಾದಾಮಿ ತಾಲೂಕಿನ ಚಾಲುಕ್ಯ ಜಾನಪದ ಶಿಕ್ಷಕರ ಬಳಗ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಬಾದಾಮಿ: ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಸಾಂಸ್ಕೃತಿಕ ವಿಭಾಗದ ಸ್ಪರ್ಧೆಯಲ್ಲಿ ಬಾದಾಮಿ ತಾಲೂಕಿನ ಚಾಲುಕ್ಯ ಜಾನಪದ ಶಿಕ್ಷಕರ ಬಳಗ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಚಾಲುಕ್ಯ ಶಿಕ್ಷಕರ ಬಳಗದ ಸದಸ್ಯರಾದ ಬಿ.ಜಿ.ರೊಟ್ಟಿ, ಬಿ.ವೈ.ಗಚ್ಚನ್ನವರ, ಇಬ್ರಾಹಿಂಸಾಬ ಕಾಖಂಡಕಿ, ಬಿ.ಎನ್.ಬಸರಿ, ಸಹಶಿಕ್ಷಕಿ ಜಯಶ್ರೀ ಜೆ.ಜುಮ್ಮನಗೌಡ್ರ, ಶ್ರೀಶೈಲ ಹಡಪದ, ಯಲ್ಲಪ್ಪ ವೈ.ಹಾವರಗಿ, ಸಹಶಿಕ್ಷಕಿಯರಾದ ಡಿ.ಬಿ. ಹಡಗಲಿ, ಜಯಶ್ರೀ ಆಲೂರ, ಶಂಕ್ರಮ್ಮ ಎನ್. ಕುಬಸದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ನಂದಿಕೇಶ್ವರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಸಲಿಂಗಪ್ಪ ಜಿ.ರೊಟ್ಟಿ ಕ್ಲಾಸಿಕಲ್ ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಸಂಗೀತ ಶಿಕ್ಷಕ ಪ್ರಭು ಚೌಕಿಮಠ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!