ಪಾಲಿಕೆ 4 ಸ್ಥಾಯಿ ಸಮಿತಿಗಳಿಗೆ ನೂತನ ಸದಸ್ಯರ ಆಯ್ಕೆ

KannadaprabhaNewsNetwork | Published : Nov 9, 2024 1:11 AM

ಸಾರಾಂಶ

ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಶುಕ್ರವಾರ ನೂತನ ಸದಸ್ಯರನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್‌ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ, ದಾವಣಗೆರೆ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಶುಕ್ರವಾರ ನೂತನ ಸದಸ್ಯರನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್‌ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.

ನಗರದ ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಸದಸ್ಯರಾಗಿ ಸೌಮ್ಯ ನರೇಂದ್ರಕುಮಾರ, ಉರ್‌ಬಾನು ಪಂಡಿತ್, ಎ.ನಾಗರಾಜ, ಜೆ.ಡಿ.ಪ್ರಕಾಶ, ಡಿ.ಎಸ್.ಉಮಾ ಪ್ರಕಾಶ, ಯಶೋಧ ಯೋಗೇಶ್ವರ, ರೇಖಾ ಸುರೇಶ ಗಂಡುಗಾಳೆ ಆಯ್ಕೆಯಾದರು.

ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಸದಸ್ಯರಾಗಿ ಜಿ.ಎಸ್.ಮಂಜುನಾಥ ಗಡಿಗುಡಾಳ, ಡಿ.ಎಸ್.ಆಶಾ, ಎಸ್‌ಒಜಿ ಕಾಲನಿ ನಾಗರಾಜ, ನಾಗರತ್ನಮ್ಮ, ಆರ್.ಎಲ್. ಶಿವಪ್ರಕಾಶ, ಕೆ.ಎಂ.ವೀರೇಶ, ವೀಣಾ ನಂಜಪ್ಪ ಆಯ್ಕೆಗೊಂಡರು.

ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಸದಸ್ಯರಾಗಿ ಎಂ.ಕೆ. ಶಿವಲೀಲಾ ಕೊಟ್ರಯ್ಯ, ಎ.ಬಿ.ರಹೀಂ ಸಾಬ್, ಸವಿತಾ ಗಣೇಶ ಹುಲ್ಮನಿ, ಎಲ್.ಡಿ. ಗೋಣೆಪ್ಪ, ಆರ್.ಶಿವಾನಂದ, ಎಚ್.ಆರ್. ಶಿಲ್ಪಾ ಆಯ್ಕೆಯಾದರು. ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯರಾಗಿ ಸುಧಾ ಮಂಜುನಾಥ ಇಟ್ಟಿಗುಡಿ, ಎಸ್.ಶ್ವೇತಾ ಶ್ರೀನಿವಾಸ, ಸೈಯದ್ಯೀ ಚಾರ್ಲಿ, ಆರ್.ಜಯಮ್ಮ, ಗಾಯತ್ರಿ ಬಾಯಿ, ಗೌರಮ್ಮ, ಗೀತಾ ದಿಳ್ಳೆಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಮೇಯರ್ ಕೆ.ಚಮನ್ ಸಾಬ್, ಅಪರ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್‌ ಜೆ.ಗದ್ಯಾಳ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್‌, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಆಡಳಿತ ಮತ್ತು ವಿಪಕ್ಷ ಸದಸ್ಯರು, ಅಧಿಕಾರಿ, ಸಿಬ್ಬಂದಿ ಇದ್ದರು.

- - - -8ಕೆಡಿವಿಜಿ12:

ದಾವಣಗೆರೆ ಪಾಲಿಕೆ 4 ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ಸಭೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್‌ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ನಡೆಯಿತು.

Share this article