12,000+ ಜನರಿಂದ ಸ್ವಯಂ ಗಣತಿ ಪೂರ್ಣ

KannadaprabhaNewsNetwork |  
Published : Apr 02, 2026, 01:45 AM IST
ಗಣತಿ | Kannada Prabha

ಸಾರಾಂಶ

ರಾಷ್ಟ್ರೀಯ ಜನಗಣತಿ 2027ರ ಮೊದಲ ದಿನ ರಾಜ್ಯದ 12 ಸಾವಿರಕ್ಕೂ ಹೆಚ್ಚಿನ ಮಂದಿ ಸ್ವಯಂ ಗಣತಿಯಲ್ಲಿ ಭಾಗಿಯಾಗಿ ಮಾಹಿತಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಷ್ಟ್ರೀಯ ಜನಗಣತಿ 2027ರ ಮೊದಲ ದಿನ ರಾಜ್ಯದ 12 ಸಾವಿರಕ್ಕೂ ಹೆಚ್ಚಿನ ಮಂದಿ ಸ್ವಯಂ ಗಣತಿಯಲ್ಲಿ ಭಾಗಿಯಾಗಿ ಮಾಹಿತಿ ಸಲ್ಲಿಸಿದ್ದಾರೆ.

ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದೆ. ಬುಧವಾರದಿಂದ ಆರಂಭವಾಗಿರುವ ಸ್ವಯಂ ಗಣತಿ ಏ. 15ರವರೆಗೆ ನಡೆಯಲಿದೆ. ಸಾರ್ವಜನಿಕರು ಅಧಿಕೃತ ವೆಬ್‌ಸೈಟ್‌ www.se.census.gov.in ಮೂಲಕ ತಮ್ಮ ಮಾಹಿತಿ ಹಂಚಿಕೊಳ್ಳಬಹುದು. ಮೊದಲ ದಿನವಾದ ಬುಧವಾರದ ಮಧ್ಯಾಹ್ನದ 3 ಗಂಟೆ ವೇಳೆಗೆ 23,000ಕ್ಕೂ ಹೆಚ್ಚಿನ ಮಂದಿ ಸ್ವಯಂ ಗಣತಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಿದ್ದು, 12 ಸಾವಿರಕ್ಕೂ ಹೆಚ್ಚಿನ ಮಂದಿ ತಮ್ಮ ಮಾಹಿತಿ ಸಲ್ಲಿಸಿದ್ದಾರೆ. ಸ್ವಯಂ ಗಣತಿ ಆರಂಭವಾಗಿರುವ ಎಂಟು ರಾಜ್ಯಗಳ ಪೈಕಿ ರಾಜ್ಯದಲ್ಲಿ ಅತಿಹೆಚ್ಚು ಮಂದಿ ಸ್ವಯಂ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ಹೇಗಿರಲಿದೆ ಸ್ವಯಂ ಗಣತಿ?:

ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳಲು ಜನ ಅಧಿಕೃತ ವೆಬ್‌ಸೈಟ್‌ www.se.census.gov.inಗೆ ಭೇಟಿ ನೀಡಿ ಮೊದಲಿಗೆ ತಮ್ಮ ರಾಜ್ಯವನ್ನು ಆಯ್ಕೆ ಮಾಡಬೇಕು. ನಂತರ ಮನೆ ಯಜಮಾನರು, ಮೊಬೈಲ್‌ ಸಂಖ್ಯೆ ನಮೂದಿಸಬೇಕು. ನಮೂದಿಸಲಾದ ಮೊಬೈಲ್‌ ಸಂಖ್ಯೆಗೆ ಒನ್‌ ಟೈಂ ಪಾಸ್‌ವರ್ಡ್ (ಒಟಿಪಿ) ಬರಲಿದ್ದು, ಅದನ್ನು ದಾಖಲಿಸಿದ ನಂತರ ಮುಂದಿನ ಹಂತದ ಪ್ರಕ್ರಿಯೆಗೆ ಮುಂದುವರಿಯಬಹುದಾಗಿದೆ.

ಆದಾದ ನಂತರ ಜಿಲ್ಲೆ, ಪಿನ್‌ ಕೋಡ್‌, ಹಳ್ಳಿ ಅಥವಾ ನಗರ, ಲ್ಯಾಂಡ್‌ಮಾರ್ಕ್‌ ಹೀಗೆ ಹಲವು ಅಂಶಗಳನ್ನು ನಮೂದಿಸಬೇಕಿದೆ. ಅದರಿಂದ ಜಿಪಿಎಸ್ ಆಧಾರಿತ ಮ್ಯಾಪ್‌ ಬರಲಿದ್ದು, ಅದರಲ್ಲಿ ತಮ್ಮ ಮನೆಯನ್ನು ಪಿನ್‌ ಮಾಡುವ ಮೂಲಕ ನಿಖರ ಮಾಹಿತಿಯನ್ನು ಪಿನ್‌ ಮಾಡಬೇಕಿದೆ. ಇದರಿಂದಾಗಿ ಮನೆಯ ನಿಖರ ಲೊಕೇಷನ್‌ ದೊರೆಯಲಿದೆ. ಅದಾದ ನಂತರ ಕೇಳುವ ಮಾಹಿತಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅದಾದ ನಂತರ ಯುನಿಕ್‌ ಐಡಿ ಸಂಖ್ಯೆ ನೀಡಲಿದ್ದು, ಅದರ ಮಾಹಿತಿ ಮೊಬೈಲ್‌ಗೆ ಕಳುಹಿಸಲಾಗುತ್ತದೆ.

ಹೀಗೆ ಸ್ವಯಂ ಗಣತಿ ಮಾಡಿದ ಕುರಿತು ಏ.16ರಿಂದ ಆರಂಭವಾಗಲಿರುವ ಮನೆಮನೆ ಗಣತಿ ಪ್ರಕ್ರಿಯೆ ವೇಳೆ ಗಣತಿದಾರರು ಮನೆಗೆ ಬಂದಾಗ ಮಾಹಿತಿ ಹಂಚಿಕೊಳ್ಳಬೇಕಿದೆ. ಅಲ್ಲಿ ಏನಾದರೂ ಮಾಹಿತಿ ಬದಲಿಸಬೇಕೆಂದರೆ ಅದನ್ನು ಗಣತಿದಾರರಿಗೆ ತಿಳಿಸಿ, ತಮ್ಮ ಯುನಿಕ್‌ ಐಡಿ ಸಂಖ್ಯೆ ನೀಡಬೇಕಿದೆ. ಅವರು ಅದನ್ನು ಪಡೆದು ಮಾಹಿತಿಯನ್ನು ಬದಲಿಸಲಿದ್ದಾರೆ.16 ಭಾಷೆಯಲ್ಲಿ ಸ್ವಯಂ ಗಣತಿ:

ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ 16 ಭಾಷೆಗಳನ್ನು ಅಳವಡಿಸಲಾಗಿದೆ. ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವವರು ತಮಗೆ ಅನುಕೂಲವಾಗುವ ಭಾಷೆಯನ್ನು ಆಯ್ಕೆ ಮಾಡಿ ಅದರ ಮೂಲಕ ಮಾಹಿತಿ ಹಂಚಿಕೊಳ್ಳಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಗಂಗಾ ಮಠ ಪ್ರಜಾಪ್ರಭುತ್ವದ ಕೈಗನ್ನಡಿ: ಮುರ್ಮು
ಅಯತೊಲ್ಲಾ ಖಮೇನಿ ನಿಧನಕ್ಕೆ ಕಲಬುರಗಿ ಪಾಲಿಕೆ ಸಂತಾಪ