ಫೋಟೋ- 5ಎಂವೈಎಸ್ 58
ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಗ್ರಾಮದ ಪೊಲೀಸ್ಠಾಣೆಯ ಎಸ್.ಐ ಪ್ರಕಾಶ್ ಎಂ. ಯತ್ತಿನಮನಿ ಮಾತನಾಡಿ, ಪರಿಸರ ನಮಗೆ ಅತ್ಯ ಅಮೂಲ್ಯವಾದ ಸಂಪತ್ತು ಅದನ್ನು ನಾವು ನಾಶ ಮಾಡದೆ ಪ್ರತಿ ವರ್ಷ ಪ್ರತಿದಿನ ಗಿಡ ಮರಗಳನ್ನು ಸಂರಕ್ಷಿಸಿ ಪರಿಸರದಿಂದ ಆಗುವ ಹಲವಾರು ಉಪಯೋಗಗಳನ್ನು ನಾವು ಪಡೆಯಬೇಕು, ಮನುಷ್ಯನಿಗೆ ಉಸಿರಾಡಲು ಬೇಕಾದ ಅತ್ಯ ಅಮೂಲ್ಯವಾದ ಗಾಳಿಯನ್ನು ಗಿಡಮರಗಳು ನೀಡುವುದರಿಂದ ಮನುಷ್ಯ ಆರೋಗ್ಯಕರವಾಗಿ ಇರಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಮುಖ್ಯಶಿಕ್ಷಕ ಸುರೇಶ್, ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ಪುಸ್ತಕಗಳನ್ನು ವಿತರಿಸಿದರು. ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.