ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಗುರು ರೆಸಿಡೆನ್ಸಿ ಹೊಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತವು ಗುರುವಾರ ಆಯೋಜಿಸಿದ್ದ ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯ ಸೌಹಾರ್ದ ಸಹಕಾರಿಗಳೊಂದಿಗೆ ಸಂಪರ್ಕ ಸಭೆ ಮತ್ತು ವಿಷಯಾಧಾರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯವಸ್ಥೆಯಲ್ಲಿ ಪ್ರಕ್ರಿಯೆ ನಡೆಯದೇ ಇದ್ದರೆ ಜಡತ್ವ ನಿರ್ಮಾಣವಾಗುತ್ತದೆ. ಸೌಹಾರ್ದ ಕಾಯಿದೆ ಬಂದ ಮೇಲೆ ಜಡತ್ವದಿಂದ ಆಚೆಗೆ ಹೊಸ ತಲೆಮಾರಿನ ಜನರನ್ನು ತರಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಸಹಕಾರಿಗಳಿಗೆ ವಿಷಯಾಧಾರಿತ ತರಬೇತಿ ಬೇಕು, ಸಕ್ರಿಯ ಚಳವಳಿ ಇರುವವರು ತಿಳಿದುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.ಸಹಕಾರ ಸಂಘದ ನಿರ್ದೇಶಕರಾಗಿ ಕೆಲಸ ಮಾಡಿರುವವರಿಗೆ ಕಾನೂನಾತ್ಮಕ ಅಂಶಗಳನ್ನು ಕೇಳಿದರೆ ಸ್ಪಷ್ಟತೆ ಸಾಧ್ಯವಿಲ್ಲ. ಯಾಕೆಂದರೆ ತೊಡಗಿಸಿಕೊಳ್ಳುವುದು ಬಹಳ ಕಡಿಮೆ ಇದೆ. ಸಿಇಒ, ಆಡಿಟ್, ಸಾಮಾನ್ಯ ಸಭೆ, ನಡೆಯುತ್ತಿದೆ. 40 ವರ್ಷವಾದರೂ ಅದರ ಬಗ್ಗೆ ಸಂಪೂರ್ಣವಾಗಿ ಜ್ಞಾನಗಳಿಸುವುದಿಲ್ಲ ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ ವೃತ್ತಿಪರ ನಿರ್ದೇಶಕ ಬಿ. ಮಹದೇವಸ್ವಾಮಿ ಮಾತನಾಡಿ, ಸೌಹಾರ್ದ ಸಂಘಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ತೆಗೆದುಕೊಂಡು ಹೋಗಬೇಕು. ಈ ಮೂಲಕ ಜನರ ಅಭಿವೃದ್ದಿಗಾಗಿ ಸಂಘಗಳನ್ನು ಬೆಳಸಬೇಕು. ಪ್ರತಿ ಜಿಲ್ಲೆಯಲ್ಲಿ ಸಹಕಾರಿಗಳ ಸಂಪರ್ಕ ಸಭೆ ಮಾಡುವುದರಿಂದ ಸೌಹಾರ್ದ ಜ್ಞಾನ ಬೆಳೆಯಲಿದೆ ಎಂದರು.