ಆಶ್ರಯ ಮನೆ ನಿರ್ಮಾಣಕ್ಕೆ ರಾಜ್ಯದಲ್ಲಿ ಗ್ರಹಣ!

KannadaprabhaNewsNetwork |  
Published : Aug 25, 2026, 02:30 AM IST
ಫೋಟೋಎಐ ಚಿತ್ರಗಳು ಲಿಂಗದಳ್ಳಿ ಗ್ರಾಮದಲ್ಲಿ ನೆನೆಗುದಿಗೆ ಬಿದ್ದಿರುವ ಮನೆ | Kannada Prabha

ಸಾರಾಂಶ

ರಾಜ್ಯದಾದ್ಯಂತ ಸ್ಲಂ ನಿವಾಸಿಗಳು, ಬಡವರು ಇಂದಲ್ಲ ನಾಳೆ ನಮ್ಮ ತಲೆಗೊಂದು ಸೂರು ನಿರ್ಮಾಣವಾಗುತ್ತದೆ, ಮಳೆ–ಚಳಿಯಿಂದ ಬೆಚ್ಚಗಿನ ವಾಸಕ್ಕೆ ಯೋಗ್ಯ ಮನೆ ಸಿಕ್ಕೀತು ಎಂದು ಕಾಯುತ್ತಿದ್ದರು. ಆದರೆ, ಅವರ ಕನಸಿನ ಸೂರು ದಕ್ಕುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ರಾಜ್ಯದಾದ್ಯಂತ ಸ್ಲಂ ನಿವಾಸಿಗಳು, ಬಡವರು ಇಂದಲ್ಲ ನಾಳೆ ನಮ್ಮ ತಲೆಗೊಂದು ಸೂರು ನಿರ್ಮಾಣವಾಗುತ್ತದೆ, ಮಳೆ–ಚಳಿಯಿಂದ ಬೆಚ್ಚಗಿನ ವಾಸಕ್ಕೆ ಯೋಗ್ಯ ಮನೆ ಸಿಕ್ಕೀತು ಎಂದು ಕಾಯುತ್ತಿದ್ದರು. ಆದರೆ, ಅವರ ಕನಸಿನ ಸೂರು ದಕ್ಕುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಮನೆ ನಿರ್ಮಾಣ ಪ್ರಾರಂಭವಾಗಿಯೇ ಇಲ್ಲ ಎನ್ನುವ ಆಘಾತಕಾರಿ ವಿಷಯ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

2023ರಿಂದ 2026ರ ವರೆಗೆ ಬಸವ ವಸತಿ ಯೋಜನೆ, ದೇವರಾಜ ಅರಸ ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಜ್ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ರಾಜ್ಯಾದ್ಯಂತ ಸರ್ಕಾರ ಸ್ಲಂ ನಿವಾಸಿಗಳು, ಬಡವರಿಗೆ 3.63 ಲಕ್ಷ ಮನೆಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಇದುವರೆಗೂ ನಿರ್ಮಾಣ ಪೂರ್ಣಗೊಂಡಿರುವ ಮನೆಗಳ ಸಂಖ್ಯೆ ಕೇವಲ 23,334! 63,317 ಮನೆಗಳು ನಿರ್ಮಾಣದ ವಿವಿಧ ಹಂತದಲ್ಲಿದ್ದರೆ, 2,75,869 ಮನೆಗಳ ನಿರ್ಮಾಣ ಇನ್ನೂ ಪ್ರಾರಂಭವೇ ಆಗಿಲ್ಲ. ಈ ಪೈಕಿ 482 ಮನೆಗಳು ವಿವಿಧ ಕಾರಣಗಳಿಂದ ರದ್ದಾಗಿವೆ.

ನಿರ್ಮಾಣದ ಹಂತದಲ್ಲಿರುವ 63,317 ಮನೆಗಳ ಪೈಕಿ ಬಹುತೇಕ ಮನೆಗಳಿಗೆ ಮೊದಲ ಕಂತಿನ ಹಣ ಮಾತ್ರ ಬಿಡುಗಡೆಯಾಗಿದ್ದು, ಹೀಗಾಗಿ ಬಹುತೇಕ ಮನೆಗಳು ಬುನಾದಿ ಹಂತದಲ್ಲಿಯೇ ಇವೆ. ಅಷ್ಟಕ್ಕೂ ರಾಜ್ಯ ಸರ್ಕಾರ ಆಶ್ರಯ ಮನೆ ನಿರ್ಮಾಣಕ್ಕೆ ನೀಡುವ ಸಹಾಯಧನ ₹1.25 ಲಕ್ಷದಿಂದ ₹ 3.25 ಲಕ್ಷದ ವರೆಗೆ ಮಾತ್ರ. ಆದಾಗ್ಯೂ ಕಂತುಗಳ ರೂಪದಲ್ಲಿ ಹಣ ಬಿಡುಗಡೆಯಾಗುವಲ್ಲಿ ವಿಳಂಬವಾಗುತ್ತಿರುವುದು ನಿರ್ಮಾಣ ಕಾಮಗಾರಿಗೆ ಹಿನ್ನಡೆ ಉಂಟುಮಾಡಿದೆ.

ಸರ್ಕಾರ ಮಂಜೂರು ಮಾಡಿದ ಮನೆಗಳ ಪೈಕಿ ಶೇ. 76ಕ್ಕೂ ಹೆಚ್ಚು ಮನೆಗಳ ನಿರ್ಮಾಣ ಇನ್ನೂ ಆರಂಭವಾಗಿಲ್ಲ ಎಂಬುದು ವಸತಿ ಯೋಜನೆಗಳ ಅನುಷ್ಠಾನದ ನಿಧಾನಗತಿಗೆ ಹಿಡಿದ ಕನ್ನಡಿಯಾಗಿದೆ.

ಪಿಎಂ ಅವಾಸ್ ನನೆಗುದಿಗೆ: ಆಶ್ರಯ ವಸತಿ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. 2024-25ನೇ ಸಾಲಿನಲ್ಲಿ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಕ್ಕೆ 3,35,494 ಮನೆಗಳು ಮಂಜೂರಾಗಿದ್ದರೆ, ಕೇವಲ 17,996 ಮನೆಗಳು ಮಾತ್ರ ಪೂರ್ಣಗೊಂಡಿವೆ. 55,765 ಮನೆಗಳು ನಿರ್ಮಾಣ ಹಂತದಲ್ಲಿ ನನೆಗುದಿಗೆ ಬಿದ್ದಿವೆ. 2,61,733 ಮನೆಗಳು ನಿರ್ಮಾಣವೇ ಪ್ರಾರಂಭವಾಗಿಲ್ಲ.

ಮಂಜೂರಾತಿಗೆ ಹಣ: ವಿವಿಧ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರಾತಿ ಪಡೆಯಲು ಕೆಲವು ಫಲಾನುಭವಿಗಳು ₹20ರಿಂದ ₹30 ಸಾವಿರ ನೀಡಿದ್ದಾರೆ. ಈಗ ಅರ್ಧಕ್ಕೆ ನಿಂತಿದೆ. ಕೆಲವು ಪಾಳುಬಿದ್ದಿವೆ. ಅದನ್ನೂ ಪೂರ್ತಿಗೊಳಿಸುವ ಜತೆಗೆ ಪಾಳುಬಿದ್ದ ಇಮಾರತು ಸರಿಪಡಿಸುವ ಹೊರೆಯೂ ಬೀಳಲಿದೆ.

ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ₹1.25 ಲಕ್ಷದಿಂದ ₹1.50 ಲಕ್ಷ ಮಾತ್ರ ನೀಡುತ್ತದೆ. ನಗರ ಪ್ರದೇಶದಲ್ಲಿ ವರ್ಗವಾರು ಮತ್ತು ಯೋಜನೆವಾರು ₹1.50 ಲಕ್ಷದಿಂದ ₹3-4 ಲಕ್ಷ ಸಹಾಯಧನ ನೀಡುತ್ತದೆ. ಇಷ್ಟು ಕಡಿಮೆ ಮೊತ್ತದಲ್ಲಿ ಮನೆ ನಿರ್ಮಾಣ ಮಾಡಿಸಿಕೊಳ್ಳುವುದು ಅಸಾಧ್ಯ. ಆದರೆ ಫಲಾನುಭವಿಗಳು ಬಂದಷ್ಟಾದರೂ ಬರಲಿ, ಉಳಿದ ಹಣ ಹಾಕಿ ಮನೆ ಕಟ್ಟಿಕೊಂಡರಾಯಿತು ಎಂದು ಆಲೋಚಿಸಿದ್ದಾರೆ. ಸಹಾಯಧನ ಬಾರದೇ ಇರುವುದರಿಂದ ಆಶ್ರಯ ವಸತಿ ಯೋಜನೆ ರಾಜ್ಯದಲ್ಲಿ ಬಹುತೇಕ ವಿಫಲವಾಗಿದೆ.

ಅರ್ಧಕ್ಕೆ ನಿಂತಿದೆ: ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಮಂಜೂರಾದ ಮನೆಯಾಗಿದ್ದು, ಇದುವರೆಗೂ ಯಾವುದೇ ಕಂತು ಬಾರದೆ ಇರುವುದರಿಂದ ಅರ್ಧಕ್ಕೆ ನಿಂತಿದೆ ಎಂದು ಲಿಂಗದಳ್ಳಿ ಗ್ರಾಮದ ಹನುಮವ್ವ ದುರಗಪ್ಪ ಕಡಗದ ಹೇಳಿದರು.

ಬಸವ ವಸತಿ ಯೋಜನೆ ಅಡಿ ಮನೆ ಮಂಜೂರಿಯಾಗಿದ್ದು ಮೊದಲ ಕಂತು ₹30,000 ಬಿಡುಗಡೆಯಾಗಿದ್ದು, ಇನ್ನು ಬಿಡುಗಡೆಯಾಗಬೇಕಾಗಿರುವ ₹90 ಸಾವಿರ ಇದುವರೆಗೂ ಬಿಡುಗಡೆಯಾಗಿಲ್ಲ. ಹೀಗಾಗಿ ಮನೆ ನಿರ್ಮಾಣ ಪೂರ್ಣಗೊಳಿಸಲು ಆಗಿಲ್ಲ ಎಂದು ಲಿಂಗದಳ್ಳಿ ಗ್ರಾಮದ ಈರಮ್ಮ ಹೇಳಿದರು.ಮೂರು ವರ್ಷಗಳ ಲೆಕ್ಕಾಚಾರ:

1. ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ (ಗ್ರಾ) – 2024-25

ಮಂಜೂರಾದ ಮನೆಗಳು: 5,362

ಪೂರ್ಣಗೊಂಡ ಮನೆಗಳು: 1,071

ನಿರ್ಮಾಣ ಹಂತದಲ್ಲಿ: 1,871

ನಿರ್ಮಾಣ ಆರಂಭವಾಗದವು: 2,220

ರದ್ದಾದ ಮನೆಗಳು: 200

2. ಬಸವ ವಸತಿ ಯೋಜನೆ – 2024-25

ಮಂಜೂರಾದ ಮನೆಗಳು: 15,585

ಪೂರ್ಣಗೊಂಡ ಮನೆಗಳು: 2,638

ನಿರ್ಮಾಣ ಹಂತದಲ್ಲಿ: 4,562

ನಿರ್ಮಾಣ ಆರಂಭವಾಗದವು: 8,103

ರದ್ದಾದ ಮನೆಗಳು: 282

3. ದೇವರಾಜ ಅರಸು ವಸತಿ ಯೋಜನೆ (ಗ್ರಾ) – 2023-24

ಮಂಜೂರಾದ ಮನೆಗಳು: 124

ಪೂರ್ಣಗೊಂಡ ಮನೆಗಳು: 26

ನಿರ್ಮಾಣ ಹಂತದಲ್ಲಿ: 60

ನಿರ್ಮಾಣ ಆರಂಭವಾಗದವು: 38

ರದ್ದಾದ ಮನೆಗಳು: 0

4. ದೇವರಾಜ ಅರಸು ವಸತಿ ಯೋಜನೆ (ಗ್ರಾ) – 2024-25

ಮಂಜೂರಾದ ಮನೆಗಳು: 74

ಪೂರ್ಣಗೊಂಡ ಮನೆಗಳು: 4

ನಿರ್ಮಾಣ ಹಂತದಲ್ಲಿ: 35

ನಿರ್ಮಾಣ ಆರಂಭವಾಗದವು: 35

ರದ್ದಾದ ಮನೆಗಳು: 0

5. ದೇವರಾಜ ಅರಸು ವಸತಿ ಯೋಜನೆ (ಗ್ರಾ) – 2025-26

ಮಂಜೂರಾದ ಮನೆಗಳು: 24

ಪೂರ್ಣಗೊಂಡ ಮನೆಗಳು: 0

ನಿರ್ಮಾಣ ಹಂತದಲ್ಲಿ: 7

ನಿರ್ಮಾಣ ಆರಂಭವಾಗದವು: 17

ರದ್ದಾದ ಮನೆಗಳು: 0

6. ದೇವರಾಜ ಅರಸು ವಸತಿ ಯೋಜನೆ (ಗ್ರಾ) – Flood – 2024-25

ಮಂಜೂರಾದ ಮನೆಗಳು: 2,664

ಪೂರ್ಣಗೊಂಡ ಮನೆಗಳು: 303

ನಿರ್ಮಾಣ ಹಂತದಲ್ಲಿ: 531

ನಿರ್ಮಾಣ ಆರಂಭವಾಗದವು: 1,830

ರದ್ದಾದ ಮನೆಗಳು: 0

7. ದೇವರಾಜ ಅರಸು ವಸತಿ ಯೋಜನೆ (ಗ್ರಾ) – Flood – 2025-26

ಮಂಜೂರಾದ ಮನೆಗಳು: 979

ಪೂರ್ಣಗೊಂಡ ಮನೆಗಳು: 17

ನಿರ್ಮಾಣ ಹಂತದಲ್ಲಿ: 115

ನಿರ್ಮಾಣ ಆರಂಭವಾಗದವು: 847

ರದ್ದಾದ ಮನೆಗಳು: 0

8. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾ) – 2024-25

ಮಂಜೂರಾದ ಮನೆಗಳು: 3,35,494

ಪೂರ್ಣಗೊಂಡ ಮನೆಗಳು: 17,996

ನಿರ್ಮಾಣ ಹಂತದಲ್ಲಿ: 55,765

ನಿರ್ಮಾಣ ಆರಂಭವಾಗದವು: 2,61,733

ರದ್ದಾದ ಮನೆಗಳು: 0

9. PM-JANMAN – 2023-24

ಮಂಜೂರಾದ ಮನೆಗಳು: 1,056

ಪೂರ್ಣಗೊಂಡ ಮನೆಗಳು: 93

ನಿರ್ಮಾಣ ಹಂತದಲ್ಲಿ: 236

ನಿರ್ಮಾಣ ಆರಂಭವಾಗದವು: 727

ರದ್ದಾದ ಮನೆಗಳು: 0

10. ದೇವರಾಜ ಅರಸು ವಸತಿ ಯೋಜನೆ (ನಗರ) – 2023-24

ಮಂಜೂರಾದ ಮನೆಗಳು: 6

ಪೂರ್ಣಗೊಂಡ ಮನೆಗಳು: 3

ನಿರ್ಮಾಣ ಹಂತದಲ್ಲಿ: 1

ನಿರ್ಮಾಣ ಆರಂಭವಾಗದವು: 2

ರದ್ದಾದ ಮನೆಗಳು: 0

11. ದೇವರಾಜ ಅರಸು ವಸತಿ ಯೋಜನೆ (ನಗರ) – 2024-25

ಮಂಜೂರಾದ ಮನೆಗಳು: 3

ಪೂರ್ಣಗೊಂಡ ಮನೆಗಳು: 0

ನಿರ್ಮಾಣ ಹಂತದಲ್ಲಿ: 1

ನಿರ್ಮಾಣ ಆರಂಭವಾಗದವು: 2

ರದ್ದಾದ ಮನೆಗಳು: 0

12. ದೇವರಾಜ ಅರಸು ವಸತಿ ಯೋಜನೆ (ನಗರ) – Flood – 2024-25

ಮಂಜೂರಾದ ಮನೆಗಳು: 237

ಪೂರ್ಣಗೊಂಡ ಮನೆಗಳು: 7

ನಿರ್ಮಾಣ ಹಂತದಲ್ಲಿ: 17

ನಿರ್ಮಾಣ ಆರಂಭವಾಗದವು: 213

ರದ್ದಾದ ಮನೆಗಳು: 0 13. ದೇವರಾಜ ಅರಸು ವಸತಿ ಯೋಜನೆ (ನಗರ) – Flood – 2025-26

ಮಂಜೂರಾದ ಮನೆಗಳು: 107

ಪೂರ್ಣಗೊಂಡ ಮನೆಗಳು: 0

ನಿರ್ಮಾಣ ಹಂತದಲ್ಲಿ: 5

ನಿರ್ಮಾಣ ಆರಂಭವಾಗದವು: 102

ರದ್ದಾದ ಮನೆಗಳು: 0

14. ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) – BLC Non-Convergence – 2023-24

ಮಂಜೂರಾದ ಮನೆಗಳು: 1,287

ಪೂರ್ಣಗೊಂಡ ಮನೆಗಳು: 1,176

ನಿರ್ಮಾಣ ಹಂತದಲ್ಲಿ: 111

ನಿರ್ಮಾಣ ಆರಂಭವಾಗದವು: 0

ರದ್ದಾದ ಮನೆಗಳು: 0

ಒಟ್ಟು

ಮಂಜೂರಾದ ಮನೆಗಳು: 3,63,002

ಪೂರ್ಣಗೊಂಡ ಮನೆಗಳು: 23,334

ನಿರ್ಮಾಣ ಹಂತದಲ್ಲಿ: 63,317

ನಿರ್ಮಾಣ ಆರಂಭವಾಗದವು: 2,75,869

ರದ್ದಾದ ಮನೆಗಳು: 482

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ ಪ್ರಾರಂಭಿಸಲು ಆಗ್ರಹಿಸಿ ಪ್ರತಿಭಟನೆ
ಹಗಲು ೭ ತಾಸು ತ್ರಿಫೇಸ್ ವಿದ್ಯುತ್‌ಗೆ ಆಗ್ರಹಿಸಿ ಪ್ರತಿಭಟನೆ