ಸಂಗೀತಕ್ಕೆ ಸಪ್ತ ಸ್ವರ ಅತ್ಯಗತ್ಯ: ಆದಯ್ಯ ಅಜ್ಜನವರು

KannadaprabhaNewsNetwork |  
Published : May 25, 2026, 02:15 AM IST
24ಕೆಪಿಎಲ್23 ಕೊಪ್ಪಳ ತಾಲೂಕಿನ ಚಳ್ಳಾರಿ ಗ್ರಾಮದಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನ ಆವರಣದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ | Kannada Prabha

ಸಾರಾಂಶ

ಮಕ್ಕಳು ಸಂಸ್ಕಾರವಂತರಾಗಲು ತಾಯಿಯ ಕೊಡುಗೆ ಎಷ್ಟು ಅಗತ್ಯವೋ ಹಾಗೇ ಸಂಗೀತ ನಮಗೆಲ್ಲ ಇಂಪಾಗಿ ಕೇಳಲು ಸಪ್ತ ಸ್ವರಗಳು ಅತ್ಯಗತ್ಯ

ಕೊಪ್ಪಳ: ಸಂಗೀತ ಇಂಪಾಗಿ ಕೇಳಲು ಸಪ್ತ ಸ್ವರಗಳು ಅತ್ಯಗತ್ಯ ಎಂದು ಆದಯ್ಯ ಅಜ್ಜನವರು ಹೇಳಿದರು.

ಕೊಪ್ಪಳ ತಾಲೂಕಿನ ಚಳ್ಳಾರಿ ಗ್ರಾಮದಲ್ಲಿ ಶ್ರೀದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಸಂಸ್ಕಾರವಂತರಾಗಲು ತಾಯಿಯ ಕೊಡುಗೆ ಎಷ್ಟು ಅಗತ್ಯವೋ ಹಾಗೇ ಸಂಗೀತ ನಮಗೆಲ್ಲ ಇಂಪಾಗಿ ಕೇಳಲು ಸಪ್ತ ಸ್ವರಗಳು ಅತ್ಯಗತ್ಯವಾಗಿದೆ. ಅರ್ಥವಿಲ್ಲದ ಪಾಶ್ಚಿಮಾತ್ಯ ಸಂಗೀತಕ್ಕೆ ಮಾರು ಹೋಗದೇ ನೋವು ನಿವಾರಕ ರಾಗ ನಮ್ಮ ದೇಶೀಯ ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುವ ಮೂಲಕ ನೆಲದ ಸಾಹಿತ್ಯ, ಕಲೆ, ಸಾಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಸಂಗೀತ ಕಲಾವಿದರನ್ನು ಗೌರವಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೋತ್ಸಾಹಿಸುತ್ತಿರುವುದು ಪ್ರಶಂಸನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖಂಡ ಹನಮಗೌಡ ಮಾತನಾಡಿ, ಪುಟ್ಟರಾಜ ಕವಿ ಗವಾಯಿಗಳವರು ನಾಡಿನ ಅನೇಕ ಅಂಧ ಅನಾಥ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಜತೆಗೆ ನಾಡಿನ ಅನೇಕ ಊರುಗಳಲ್ಲಿ ಸಂಚರಿಸಿ ಬಡ ಮಕ್ಕಳಿಗೆ ವಿದ್ಯೆ ಧಾರೆ ಎರೆದು ಸಂಗೀತ ಸಾಧಕರನ್ನಾಗಿ ಮಾಡಿದ ಶ್ರೇಯಸ್ಸು ಸಲ್ಲುತ್ತದೆ ಎಂದರು.

ಸಂಗೀತ ಶಿಕ್ಷಕ ದೆವೇಂದ್ರಗೌಡ ಪೂಜಾರ್ ಜಾನಪದ ಸಂಗೀತ ಗಾಯನ ಮೂಲಕ ಶ್ರೋತೃಗಳ ಗಮನ ಸೆಳೆದರು. ಬಸವರಾಜ ಮಹಾಂತ ನಿರೂಪಿಸಿದರು ಸಂಗೀತಾ ಬಸವಣ್ಣಪ್ರಾಥಿಸಿದರು. ಕ್ಯಾಂಪ್ ಪ್ರಾರ್ಥಿಸಿದರು.

ಕಲಾವಿದರಾದ ದೇವೇಂದ್ರಗೌಡ ಪೂಜಾರಿ, ಶರಣುಕುಮಾರ ಗಂಗಾವತಿ, ಸಂಗೀತಾ, ಮರಿಯಪ್ಪ ಗಾಯಕರು, ಹೋನ್ನಪ್ಪ ಭರತಗಿ, ನಾಡಿನ ಖ್ಯಾತ ರಂಗಭೂಮಿ ಕಲಾವಿದ ಹಾಗೂ ಅನುಭವಿ ಕ್ಯಾಷಿಯೋ ವಾದಕ ಶಿವಮೂರ್ತಿ ದೊಡ್ಡಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ: ಹೊಳೆಯಾದ ಹೆದ್ದಾರಿಗೆ ತೋಡಿದ ರಸ್ತೆ
29ರಿಂದ ಶಾಲಾರಂಭ, ಪುಸ್ತಕಗಳು ಸಿದ್ಧ