ಕುರುಗೋಡು ತಾಲೂಕಿನಲ್ಲಿ ತೀವ್ರ ಬರ

KannadaprabhaNewsNetwork |  
Published : Aug 03, 2026, 02:15 AM IST
ಸೋಮಲಾಪುರದಲ್ಲಿ ಒಣಗಿರುವ ಮೆಣಸಿನಕಾಯಿ ಬೆಳೆ | Kannada Prabha

ಸಾರಾಂಶ

ಮುಂಗಾರು ಮಳೆಗಾಗಿ ತಾಲೂಕಿನ ರೈತರು ವಿವಿಧ ದೇವರಿಗೆ ಪೂಜೆ, ಹೋಮ-ಹವನ, ಸಪ್ತ ಭಜನೆ ಹಾಗೂ ಹರಕೆ ಹೊತ್ತರೂ ವರುಣ ದೇವ ಮಾತ್ರ ಕೃಪೆ ತೋರುತ್ತಿಲ್ಲ. ಇದರಿಂದ ರೈತಾಪಿ ವರ್ಗ ಆತಂಕಕ್ಕೀಡಾಗಿದೆ.

ಎನ್.ಪಂಪನಗೌಡ ಬಾದನಹಟ್ಟಿ

ಕುರುಗೋಡು: ಮುಂಗಾರು ಮಳೆಗಾಗಿ ತಾಲೂಕಿನ ರೈತರು ವಿವಿಧ ದೇವರಿಗೆ ಪೂಜೆ, ಹೋಮ-ಹವನ, ಸಪ್ತ ಭಜನೆ ಹಾಗೂ ಹರಕೆ ಹೊತ್ತರೂ ವರುಣ ದೇವ ಮಾತ್ರ ಕೃಪೆ ತೋರುತ್ತಿಲ್ಲ. ಇದರಿಂದ ರೈತಾಪಿ ವರ್ಗ ಆತಂಕಕ್ಕೀಡಾಗಿದೆ.

ತಾಲೂಕಿನಲ್ಲಿ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಶೇ. 81ರಷ್ಟು ಮಳೆ ಕೊರತೆಯಾಗಿದೆ. ಅದರಲ್ಲೂ ಜ. 1ರಿಂದ ಜುಲೈ 31ರ ತನಕ ಶೇ. 39 ಸೆಂ.ಮೀ. ಮಳೆ ಆಗಬೇಕಿತ್ತು. ಆದರೆ ಕೇವಲ 7.7 ಸೆಂ.ಮೀ. ಮಳೆಯಾಗಿದೆ. ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 18 ಸಾವಿರ ಹೆಕ್ಟೇರ್ ಭತ್ತ ನಾಟಿ ಆಗಬೇಕಾಗಿತ್ತು. ಆದರೆ, ಜಲಾಶಯದಲ್ಲಿ ನೀರಿನ ಕೊರತೆ ಹಿನ್ನೆಲೆ ಭೂಮಿ ಬರಡಾಗಿದೆ. ಇನ್ನು ಕೊಳವೆಬಾವಿ ಆಶ್ರಯಿಸಿ 355 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಆರಂಭದಲ್ಲಿ ಗೆಣಿಕೆಹಾಳ್, ಮುಷ್ಟಗಟ್ಟೆ, ಕ್ಯಾದಿಗೆಹಾಳ್, ಎಚ್.ವೀರಾಪುರ, ಸೋಮಲಾಪುರ, ಗುತ್ತಿಗೆನೂರು ಮಳೆಯಾಗಿದೆ. ನಂತರದಲ್ಲಿ ಕೈಕೊಟ್ಟಿದ್ದು ಬೆಳೆಗಳು ಒಣಗಿವೆ. ಜತೆಗೆ ಬೋರ್‌ವೆಲ್‌ಗಳಲ್ಲಿಯೂ ನೀರು ಕಡಿಮೆಯಾಗುತ್ತಿದೆ. ತುಂಗಭದ್ರಾ ಜಲಾಶಯಕ್ಕೆ ನೀರಿನ ಹರಿವು ಕಡಿಮೆಯಿದ್ದು ಅವಧಿ ಮೀರಿದರೂ ಜಲಾಶಯ ತುಂಬಿಲ್ಲ. ಇದರಿಂದ ಭತ್ತ ಮೆಣಸಿನಕಾಯಿ ಹತ್ತಿ ಮತ್ತು ಮೆಕ್ಕೆಜೋಳ ಬೆಳೆಯುವ ನೀರಾವರಿ ಜಮೀನಿನ ರೈತರಲ್ಲೂ ಆತಂಕ ಶುರುವಾಗಿದೆ.

ಭತ್ತ ಮತ್ತು ಮೆಣಸಿನಕಾಯಿ ಸಸಿ ಬೆಳೆಸಿ ಕಾಲುವಿಗೆ ನೀರಿಗಾಗಿ ಕಾಯುತ್ತಿದ್ದೇವೆ. ಸಸಿ ನಾಟಿ ಹಂತ ತಲುಪಿವೆ. ಅವಧಿ ಮೀರಿದರೆ ಏನು ಮಾಡುವುದು ಎನ್ನುವ ಚಿಂತೆಯಲ್ಲಿ ರೈತರ ದಿನ ದೂಡುವಂತಾಗಿದೆ.

ಮಳೆ ಕೊರತೆ ಹಿನ್ನೆಲೆ ತಾಲೂಕಿನಲ್ಲಿ ಬಿತ್ತನೆ ಪ್ರಮಾಣ ಕುಸಿತವಾಗಿದೆ. ಜತೆಗೆ ಕೊಳವೆ ಬಾವಿ ಆಶ್ರಯಿಸಿ 355 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಹೀಗಾಗಿ, ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿವಿಧ ಕೃಷಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬೇಕು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆಗಳು ಒಣಗುತ್ತಿವೆ. ಇದರಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ಕಷ್ಟಕರವಾಗಿದೆ ಎನ್ನುತ್ತಾರೆ ಎಂದು ಗೆಣಿಕೆಹಾಳ್ ಗ್ರಾಮದ ರೈತ ಮಹಾಂತೇಶ್ ಹೇಳುತ್ತಾರೆ.

ಕಳೆದ ಹಂಗಾಮಿನಲ್ಲಿ ಕೂಲಿ ಕಾರ್ಮಿಕರಿಗೆ ಭಾರಿ ಬೇಡಿಕೆ ಇತ್ತು. ಆದರೆ, ಈ ಬಾರಿ ಮಳೆ ಇಲ್ಲದ ಪರಿಣಾಮ ಕೆಲಸಕ್ಕೆ ಕರೆಯೋರೆ ಇಲ್ಲ. ಹೀಗಾಗಿ, ಜೀವನ ನಿರ್ವಹಣೆ, ಮಕ್ಕಳ ಶಾಲೆ ಶುಲ್ಕ, ಔಷಧ ಖರೀದಿಗೂ ದುಸ್ತರವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಬಾದನಹಟ್ಟಿಯ ಕೂಲಿ ಕಾರ್ಮಿಕ ಪೂಜಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪೈಪೋಟಿ, 22 ಆಕಾಂಕ್ಷಿಗಳಿಂದ ಅರ್ಜಿ
ಮಾನವ ಹಕ್ಕುಗಳಿಂದ ಯಾರೂ ವಂಚಿತರಾಗದಿರಲಿ